Home Uncategorized Ganesha Procession: ಡಿಜೆ ಸೌಂಡ್ ಗೆ ಯುವಕ ಮೃತ ಪ್ರಕರಣ: ನಗರ ಸಭೆ ಸದಸ್ಯ ಸೇರಿ...

Ganesha Procession: ಡಿಜೆ ಸೌಂಡ್ ಗೆ ಯುವಕ ಮೃತ ಪ್ರಕರಣ: ನಗರ ಸಭೆ ಸದಸ್ಯ ಸೇರಿ ಹಲವರ ವಿರುದ್ಧ ಕೇಸ್

35
0

ಕೊಪ್ಪಳ: ಗಂಗಾವತಿ (Gangavathi) ನಗರದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ (Ganesha Procession) ವೇಳೆ ಡಿಜೆ ಶಬ್ದದಿಂದ ಹೃದಯಾಘಾತಕ್ಕೆ ಒಳಗಾಗಿ ಯುವಕ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ವಿಚಾರವಾಗಿ ಪ್ರಶಾಂತ ನಗರದ ಪರಶುರಾಮ ಮಡ್ಡೇರ, ಬಸವರಾಜ್ ತಾವರಗೇರಾ, ರವಿ ಪವಾರಶೆಟ್ಟಿ, ಡಿಜೆ ಮಾಲೀಕ ಸಂತೋಷ್ ಮುಧೋಳ,

Justin Trudeau: ಭಾರತದೊಂದಿಗಿನ ರಾಜತಾಂತ್ರಿಕ ಬಿಕ್ಕಟ್ಟು ಪ್ರಸ್ತಾವಿಸಿದ ಕೆನಡಾ ಪ್ರಧಾನಿ

ಡಿಜೆ ಆಪರೇಟರ್ ಬೆಳಗಾವಿಯ ರಾಮದುರ್ಗದ ಶಿವಸಾಗರ್ ಮತ್ತು ಡಿಜೆ ಟ್ರಾಕ್ಟರ್ ಮಾಲೀಕ ಅಶೋಕ್ ಎಂಬುವವರ ಮೇಲೆ ಪ್ರಕರಣ ದಾಖಲಾಗಿದೆ. ಡಿಜೆ ಸಂಗೀತಕ್ಕೆ ಬಳಸುತ್ತಿದ್ದ ಉಪಕರಣ, ವಾಹನ ಸೇರಿ ಒಟ್ಟು 24 ಲಕ್ಷ ರೂ. ಮೌಲ್ಯದ ವಾಹನ ಮತ್ತು ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.   ಮೂರು ಲಕ್ಷ ರೂ. ಮೌಲ್ಯದ ಟ್ರ್ಯಾಕ್ಟರ್, 10 ಲಕ್ಷ ರೂ. ಮೌಲ್ಯದ ಲಾರಿ, 3 ಲಕ್ಷ ರೂ. ಮೌಲ್ಯದ ಜನರೇಟರ್ ಹಾಗೂ 9 ಲಕ್ಷ ರೂ. ಮೌಲ್ಯದ ಡಿಜೆ ಸಂಗೀತದ ನಾನಾ ಮಾದರಿಯ ಉಪಕರಣಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

 

The post Ganesha Procession: ಡಿಜೆ ಸೌಂಡ್ ಗೆ ಯುವಕ ಮೃತ ಪ್ರಕರಣ: ನಗರ ಸಭೆ ಸದಸ್ಯ ಸೇರಿ ಹಲವರ ವಿರುದ್ಧ ಕೇಸ್ appeared first on Ain Live News.

LEAVE A REPLY

Please enter your comment!
Please enter your name here