Home Uncategorized GT Deve Gowda; ಗೃಹಜ್ಯೋತಿ, ಅನ್ನಭಾಗ್ಯ ಎಲ್ಲಾ ಸುಳ್ಳು – ಜಿಟಿ ದೇವೆಗೌಡ

GT Deve Gowda; ಗೃಹಜ್ಯೋತಿ, ಅನ್ನಭಾಗ್ಯ ಎಲ್ಲಾ ಸುಳ್ಳು – ಜಿಟಿ ದೇವೆಗೌಡ

12
0

ವಿಜಯಪುರ;- ಯಾವುದೇ ಕಾರಣಕ್ಕೂ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಪಕ್ಷ ಬಿಡುವುದಿಲ್ಲ ಎಂದು ಶಾಸಕ ಜಿಟಿ ದೇವೇಗೌಡ ಹೇಳಿದ್ದಾರೆ.

ಈ ಸಂಬಂಧ ಮಾತನಾಡಿದ ಅವರು,ದೇವೇಗೌಡರ ಜೊತೆ ಇಬ್ರಾಹಿಂ ಮಾತನಾಡಿದ್ದಾರೆ. ಬಿಜೆಪಿ ಜತೆ ಮೈತ್ರಿಗೆ ವಿರೋಧವಿಲ್ಲ. ಹೇಗೆ ಒಟ್ಟಾಗಿ ಹೋಗಬೇಕು ಅನ್ನೋದು ಸಿ.ಎಂ.ಇಬ್ರಾಹಿಂ ಸಲಹೆ ನೀಡಿದ್ದಾರೆ ಎಂದು ಹೇಳಿದ್ದಾರೆ.

ನನಗೂ ಇನ್ನೂರು ಯುನಿಟ್, ಮಹಾದೇವಪ್ಪಾ ನಿನಗೂ ಇನ್ನೂರು ಯುನಿಟ್ ಎಂದು ಸಿದ್ದಮಯ್ಯನವರು ಹೇಳಿದ್ದರು. ಆಯ್ಕೆಯಾದ ಮೇಲೆ 53 ಯುನಿಟ್ ಘೋಷಣೆ ಮಾಡಿದ್ದಾರೆ. ಕರೆಂಟ್ ಬಿಲ್ ಜಾಸ್ತಿ ಮಾಡಿದ್ದಾರೆ. ರೈತರಿಗೆ ಏಳು ಗಂಟೆ ವಿದ್ಯುತ್ ಕೊಡಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಇದ್ದಾಗಲೇ ಆದೇಶ ಮಾಡಿದ್ದಾರೆ. ಆದರೆ ಇದೀಗ ಎರಡು ಗಂಟೆ ಕರೆಂಟ್ ಇಲ್ಲವಾಗಿದೆ ಎಂದು ಕಿಡಿಕಾರಿದ್ದಾರೆ

ಇನ್ನೂ ಬರಗಾಲದಲ್ಲಿ ಕರೆ ಕಟ್ಟೆಯಲ್ಲಿ ನೀರಿಲ್ಲ, ಬಾವಿಗಳಿಗೆ ಕರೆಂಟ್ ಇಲ್ಲ. ಕರೆಂಟ್ ಎಲ್ಲಿ ಕೊಟ್ಟರು? ಯಾರಿಗೆ ಕೊಟ್ಟರು? ಬರೀ ಸುಳ್ಳು ಹೇಳುವುದು ಆಗಿದೆ. ಕರೆಂಟ್ ಸುಳ್ಳು, ಗೃಹಜ್ಯೋತಿ ಸುಳ್ಳು, ಅನ್ನಭಾಗ್ಯ ಸುಳ್ಳು ಎಂದು ಆರೋಪಿಸಿದ್ದಾರೆ.

The post GT Deve Gowda; ಗೃಹಜ್ಯೋತಿ, ಅನ್ನಭಾಗ್ಯ ಎಲ್ಲಾ ಸುಳ್ಳು – ಜಿಟಿ ದೇವೆಗೌಡ appeared first on Ain Live News.

LEAVE A REPLY

Please enter your comment!
Please enter your name here