ಟೆಲ್ ಅವಿವ್: ಇಸ್ರೇಲ್ಗೆ (Israel) ತೆರಳಿದ್ದ ಮೇಘಾಲಯದ (Meghalaya) 27 ಮಂದಿ ಬೆಥ್ಲೆಹೆಮ್ನಲ್ಲಿ ಸಿಲುಕಿದ್ದಾರೆ ಎಂದು ತಿಳಿದು ಬಂದಿದೆ. ಅವರು ಅಲ್ಲಿಂದ ಹೊರಡಲು ಸಿದ್ಧತೆ ನಡೆಸುತ್ತಿದ್ದಾರೆ. ಭಾರತಕ್ಕೆ ಹಿಂದಿರುಗಲು ಈಜಿಪ್ಟ್ ರಾಜಧಾನಿ ಕೈರೋಗೆ ಪ್ರಯಾಣಿಸಲು ತಯಾರಾಗಿದ್ದಾರೆ ಎಂದು ವರದಿಯಾಗಿದೆ.
ಗಾಜಾದಿಂದ ಹಮಾಸ್ ಉಗ್ರರು (Hamas Terrorist) ನಡೆಸಿದ ದಾಳಿಯ ನಂತರ ಇಸ್ರೇಲ್ನ ಒಳಗೂ ಉಗ್ರರು ಪ್ರವೇಶಿಸಿದ್ದಾರೆ. ಅಲ್ಲದೇ ಅಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಯುದ್ಧ ಘೋಷಣೆ ಸಹ ಆಗಿದ್ದು, ಸಿಲುಕಿರುವ ಜನರ ಸಂಚಾರಕ್ಕೆ ತೊಡಕಾಗುತ್ತಿದೆ ಎಂದು ವರದಿಯಾಗಿದೆ.
CP Yogeshwar; ಕಾಂಗ್ರೆಸ್ ಇಂದು ಬಹುಮತದಿಂದ ಅಧಿಕಾರಕ್ಕೆ ಬರಲು ನಮ್ಮ ಜಗಳ ಕಾರಣ – ಸಿ.ಪಿ.ಯೋಗೇಶ್ವರ್
ಈಗ ಬಂದಿರುವ ಮಾಹಿತಿ ಪ್ರಕಾರ, ಸಿಲುಕಿರುವ ಭಾರತೀಯರು ಸುರಕ್ಷಿತರಾಗಿದ್ದಾರೆ. ಆದರೆ ಯುದ್ಧ ಮುಂದುವರೆಯುತ್ತಿದೆ. ಉಗ್ರರು ವಶಪಡಿಸಿಕೊಂಡ ಕೆಲವು ಗ್ರಾಮಗಳನ್ನು ಸೇನೆ ಮರಳಿ ಪಡೆದುಕೊಂಡಿದೆ. ಎಲ್ಲವೂ ಸಹಜ ಸ್ಥಿತಿಗೆ ಮರಳಲಿದೆ. ಜನರಿಗೆ ಮನೆಯೊಳಗೆ ಇರಲು ಮತ್ತು ಬಾಂಬ್ ಶೆಲ್ಟರ್ಗಳಲ್ಲಿ ಹತ್ತಿರ ಇರಲು ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
The post Hamas Terrorist: ಇಸ್ರೇಲ್-ಹಮಾಸ್ ಸಂಘರ್ಷ: ಬೆಥ್ ಲೆಹೆಮ್’ನಲ್ಲಿ ಸಿಲುಕಿರುವ ಮೇಘಾಲಯದ ಜನರು appeared first on Ain Live News.