ಬೆಂಗಳೂರು: ರಾಜ್ಯದ ಜನತೆ ದಿಕ್ಕು ತಪ್ಪಬಾರದು ಎಂದು ರಾಜೀನಾಮೆ ಕೊಟ್ಟಿದ್ದೀನಿ ಸಚಿವ ನಾಗೇಂದ್ರ ಸ್ಪಷ್ಟಪಡಿಸಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ರಾಜ್ಯದ ಜನತೆ ದಿಕ್ಕು ತಪ್ಪಬಾರದು ಅಂತ ನಾನು ನನ್ನ ಸ್ವ ಇಚ್ಛೆಯಿಂದ ಇಂದು ಸಂಜೆ 7.30ಕ್ಕೆ ರಾಜಿನಾಮೆ ನೀಡ್ತೇನೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜಿನಾಮೆ ಪತ್ರ ಕೊಡ್ತೀನಿ ಅಂತ ನಾಗೇಂದ್ರ ಸ್ಪಷ್ಟಪಡಿಸಿದ್ದಾರೆ.
ನನ್ನ ಸ್ವಇಚ್ಚೆಯಿಂದ ರಾಜಿನಾಮೆ ಕೊಡ್ತಿನಿ ಅಂತ ನಾಗೇಂದ್ರ ಹೇಳಿದ್ದಾರೆ. ತನಿಖೆ ಆಗ್ತಿದೆ, ತನಿಖೆ ವೇಳೆ ನಾನು ಅಧಿಕಾರದಲ್ಲಿ ಇರಬಾರದು ಅಂತ ನಾನು ರಾಜಿನಾಮೆ ಕೊಡ್ತಿದ್ದೀನಿ ಅಂತ ನಾಗೇಂದ್ರ ಸ್ಪಷ್ಟಪಡಿಸಿದ್ದಾರೆ.
ಈ ಪ್ರಕರಣದಲ್ಲಿ ನಾನು ನಿರ್ದೋಷಿಯಾಗಿ ಬರ್ತಿನಿ ಅಂತ ನಾಗೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆತ್ಮ ಹತ್ಯೆ ಮಾಡಿಕೊಂಡಿರುವ ಅಧಿಕಾರಿ ಎಲ್ಲೂ ನನ್ನ ಹೆಸರನ್ನು ಉಲ್ಲೇಖ ಮಾಡಿಲ್ಲ ಅಂತ ನಾಗೇಂದ್ರ ಹೇಳಿದ್ದಾರೆ.
ಯಾರಿ ಕೂಡ ಒತ್ತಡದಿಂದ ನನ್ನ ರಾಜಿನಾಮೆ ಕೇಳಿಲ್ಲ. ಮುಖ್ಯಮಂತ್ರಿಗಳು ಕೂಡ ರಾಜಿನಾಮೆ ಕೊಡಬೇಡ ಅಂತ ಹೇಳಿದ್ರು, ಆದ್ರೆ ನಾನೇ ಸ್ವಇಚ್ಛೆಯಿಂದ ರಿಸೈನ್ ಮಾಡ್ತೀನಿ ಅಂತ ನಾಗೇಂದ್ರ ಹೇಳಿದರು. ಇದೆಲ್ಲ ನನ್ನ ಗಮನಕ್ಕೆ ಬರದೆ ಆಗಿರುವಂತದ್ದು ಅಂತ ತಮ್ಮ ಪಾತ್ರ ಈ ಪ್ರಕರಣದಲ್ಲಿಲ್ಲ ಅಂತ ನಾಗೇಂದ್ರ ಹೇಳಿದ್ದಾರೆ.