ಬೆಂಗಳೂರು:
ಹಿರಿಯ ಐಎಎಸ್ ಅಧಿಕಾರಿ ಕಪಿಲ್ ಮೋಹನ್, ಮಂಜುನಾಥ್ ಪ್ರಸಾದ್ ಸೇರಿದಂತೆ 11 ಐಎಎಸ್ ಅಧಿಕಾರಿಗಳನ್ನ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.
ಕಪಿಲ್ ಮೋಹನ್ ಅವರನ್ನು ಪ್ರವಾಸೋದ್ಯಮ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯನ್ನಾಗಿ, ಐಎಎಸ್ ಅಧಿಕಾರಿ ಉಮಾಶಂಕರ್ ಎಸ್ ಆರ್ ಅವರನ್ನು ಉನ್ನತ ಶಿಕ್ಷಣ ಇಲಾಖೆ, ಮಂಜುನಾಥ ಪ್ರಸಾದ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಸಹಕಾರ ಇಲಾಖೆ, ಅನ್ಬುಕುಮಾರ್ –ಕಾರ್ಯದರ್ಶಿ ಕೃಷಿ ಇಲಾಖೆ, ಮೋಹನ್ ರಾಜ್- ಕಾರ್ಯದರ್ಶಿ, ತೋಟಗಾರಿಕೆ ಇಲಾಖೆ, ರಿಚರ್ಡ್ ಡಿಸೋಜ –ಕಾರ್ಯದರ್ಶಿ, ಎಂಎಸ್ ಎಂಇ ಮತ್ತು ಮೈನ್ ಇಲಾಖೆ, ಗಿರೀಶ್ –ನಿರ್ದೇಶಕರು, ಗಣಿ ಮತ್ತು ಭೂವಿಜ್ಞಾನ, ಕರೇಗೌಡ- ಅಟಲ್ ಜನಸ್ನೇಹಿ ಕೇಂದ್ರ. ನಿರ್ದೇಶಕರು, ಪಾಟೀಲ್ ಯಲಗೌಡ ಶೀವನಗೌಡ –ಕೃಷಿ ಇಲಾಖೆ, ಆಯುಕ್ತ, ಜಗದೀಶ್ –ಎಂಡಿ, ಪ್ರವಾಸೋದ್ಯಮ, ಡಾ. ಮಹೇಶ್ –ಸಿ ಇಒ, ಕೆಐಎಡಿಬಿ ವರ್ಗಾವಣೆ ಮಾಡಲಾಗಿದೆ.

