Home ಕರ್ನಾಟಕ Inam Dattatreya Peetha Chikmagalur | ದೇವಸ್ಥಾನಗಳ ಜಮೀನುಗಳನ್ನು ದೇವಸ್ಥಾನಗಳಿಗೇ ಇಂಡೀಕರಣ ಮಾಡಲಾಗುವುದು – ಸಚಿವ...

Inam Dattatreya Peetha Chikmagalur | ದೇವಸ್ಥಾನಗಳ ಜಮೀನುಗಳನ್ನು ದೇವಸ್ಥಾನಗಳಿಗೇ ಇಂಡೀಕರಣ ಮಾಡಲಾಗುವುದು – ಸಚಿವ ರಾಮಲಿಂಗಾರೆಡ್ಡಿ

25
0

ಬೆಂಗಳೂರು, ಮಾರ್ಚ್ 19, (ಕರ್ನಾಟಕ ವಾರ್ತೆ) : ದೇವಸ್ಥಾನಗಳ ಜಮೀನುಗಳನ್ನು ದೇವಸ್ಥಾನಗಳಿಗೇ ಇಂಡೀಕರಣ ಮಾಡಲಾಗುವುದು. ಚಿಕ್ಕಮಗಳೂರಿನ ಜಾಗರ ಹೋಬಳಿ ಇನಾಂ ದತ್ತಾತ್ರೇಯ ಪೀಠದ ಜಮೀನಿಗೆ ಸಂಬಂಧಿಸಿದಂತೆ, ಈಗಾಗಲೇ ಪ್ರಧಾನ ಕಾರ್ಯದರ್ಶಿಗಳಿಗೆ ತಿಳಿಸಲಾಗಿದ್ದು, ಅವರು ಪರಿಶೀಲಿಸಿ ವರದಿ ನೀಡಿದ ನಂತರ ಅಗತ್ಯ ಕ್ರಮ ವಹಿಸಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ತಿಳಿಸಿರು.

ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಸಿ.ಟಿ. ರವಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಚಿಕ್ಕಮಗಳೂರಿನ ಜಾಗರ ಹೋಬಳಿ ಇನಾಂ ದತ್ತಾತ್ರೇಯ ಪೀಠ ಗ್ರಾಮದ ಆಕಾರ ಬಂದಿನಂತೆ ಒಟ್ಟು 6213.25 ಎಕರೆ-ಗುಂಟೆ ಆಸ್ತಿ ಇರುತ್ತದೆ. ಸದರಿ ಆಸ್ತಿಯಲ್ಲಿ ಪ್ಲಾಂಟೇಶನ್ 2453.16 ಎಕರೆ-ಗುಂಟೆ ಬಾಗಾಯ್ತು 8.16 ಎಕರೆ-ಗುಂಟೆ ಸರ್ಕಾರಿ ಖರಾಬು 3751.33 ಎಕರೆ-ಗುಂಟೆ ಇರುತ್ತದೆ.

ಇನಾಂ ದತ್ತಾತ್ರೇಯಪೀಠ ಗ್ರಾಮದ ಸರ್ಕಾರಿ ಸರ್ವೆ ನಂಬರ್‌ನಲ್ಲಿ ಖಾಸಗಿ ವ್ಯಕ್ತಿಗಳಿಗೆ ದರ್ಖಾಸ್ತು ಹಾಗೂ ನಮೂನೆ 50 ಮತ್ತು 53ರಲ್ಲಿ ಒಟ್ಟು 104.39 ಎಕರೆ-ಗುಂಟೆ ಜಮೀನು ಮಂಜೂರಾಗಿರುತ್ತದೆ. ಆರ್.ಆರ್.ಇಂಡೆಕ್ಸ್ ನಂತೆ ಶ್ರೀ ಇನಾಂ ದತ್ತಾತ್ರೇಯ ಪೀಠಕ್ಕೆ ಒಟ್ಟು 1861.31 ಎಕರೆ-ಗುಂಟೆ ಜಮೀನು ಇರುವುದು ಕಂಡು ಬಂದಿರುತ್ತದೆ.

ಚಿಕ್ಕಮಗಳೂರು ತಾಲ್ಲೂಕು ಕಛೇರಿಯಲ್ಲಿ ಇರುವ ದಾಖಲೆಗಳನ್ನು ವರಿಶೀಲಿಸಲಾಗಿದ್ದು, ಎಲ್.ಆ‌ರ್.ಎಫ್‌ ನಲ್ಲಿ ಮಂಜೂರಾಗಿರುವುದು ಬರುತ್ತದೆ ಪರಿಶೀಲಿಸುವುದು ಅದಾಗ್ಯೂ ಸಮಗ್ರ ದಾಖಲೆಗಳನ್ನು ಅಗತ್ಯವಿರುವುದಾಗಿ ಜಿಲ್ಲಾಧಿಕಾರಿಗಳು ಚಿಕ್ಕಮಗಳೂರು ಜಿಲ್ಲೆ ಇವರು ಮಾಹಿತಿ ನೀಡಿರುತ್ತಾರೆ. ಚಿಕ್ಕಮಗಳೂರು ತಾಲ್ಲೂಕು ಕಚೇರಿಯಲ್ಲಿ ಇರುವ ದಾಖಲೆಗಳನ್ನು ಪರಿಶೀಲಿಸಲಾಗಿ, ಅರ್ಜಿ ಇಲ್ಲದ ಮಂಜೂರು ಮಾಡಿರುವ ಪ್ರಕರಣಗಳು ಇದುವರೆವಿಗೂ ಕಂಡು ಬಂದಿರುವುದಿಲ್ಲ.

ಇನಾಂ ದತ್ತಾತ್ರೇಯ ದೇವರು ಇವರಿಂದ ಖಾಸಗಿ ವ್ಯಕ್ತಿಗಳಿಗೆ ಎಲ್.ಆರ್‌ಎಫ್ 190/1990-91 ದಿನಾಂಕ:14-02-1994 ರಂತೆ ಶ್ರೀಮತಿ ಫಾತೀಮ ಬಿ. ಕೊಂ ಸಿ.ಆರ್. ಸಗೀರ್ ಅಹಮದ್ ಅವರಿಗೆ ಸರ್ವೆ ನಂ 53 ರಲ್ಲಿ 5.00 ಎಕರೆ, ಸರ್ವೆ ನಂ 53 ಪಿ ರಲ್ಲಿ 2.00 ಎಕರೆ, ಸರ್ವೆ ನಂ 169ರಲ್ಲಿ 18.00 ಎಕರೆ, ಸರ್ವೆ ನಂ 170 ರಲ್ಲಿ 2.31 ಎಕರೆ, ಸರ್ವೆ ನಂ 171 ರಲ್ಲಿ 0.30 ಎಕರೆ, ಸರ್ವೆ ನಂ 192 ರಲ್ಲಿ 4.00ಎಕರೆ, ಸರ್ವೆ ನಂ 8/3 ರಲ್ಲಿ 0.9 ಗುಂಟೆ ಹೀಗೆ ಒಟ್ಟು 32.30 ಎಕರೆ ಮಂಜೂರಾಗಿರುತ್ತದೆ.

ಮಾನ್ಯ ಉಚ್ಚ ನ್ಯಾಯಾಲಯದ ರಿಟ್ ಅರ್ಜಿ ಸಂಖ್ಯೆ 11227/2023 ದಿನಾಂಕ: 23-08-2023 ನಿರ್ದೇಶನದಂತೆ ಶ್ರೀಮತಿ ಫಾತೀಮ ಬಿ ಕೋಂ ಸಿ.ಆರ್ ಸಗೀರ ಅಹಮದ್ ಇವರ ಕೋರಿಕೆಯನ್ನು ಜಿಲ್ಲಾಧಿಕಾರಿಗಳು, ಚಿಕ್ಕಮಗಳೂರು ಜಿಲ್ಲೆ ರವರು ವಿಚಾರಣೆಯನ್ನು ನಡೆಸಿ ಸದರಿ ಮಂಜೂರಾತಿಯನ್ನು ತಿರಸ್ಕರಿಸಿ, ಸದರಿ ಸರ್ವೆ ನಂಬರ್ ಗಳ ಜಮೀನುಗಳು ಸರ್ಕಾರಕ್ಕೆ ನಿಹಿತಗೊಂಡ ಜಮೀನುಗಳಾಗಿರುವುದರಿಂದ ಮಾಲೀಕತ್ವದ ಬಗ್ಗೆ ಆರ್ ಟಿ ಸಿ ಕಾಲಂ 9 ರಲ್ಲಿ “ಸರ್ಕಾರ ಎಂದು ದಾಖಲಿಸಲು ದಿನಾಂಕ 05:03-09-2024 ರಂದು ಆದೇಶವನ್ನು ಮಾಡಿರುತ್ತಾರೆ.

ಅದರೆ ಸದರಿ ಆದೇಶದ ವಿರುದ್ಧ ಶ್ರೀಮತಿ ಫಾತೀಮಾ ಬಿ. ಕೋಂ ಸಿ.ಆರ್. ಸಗೀರ್ ಅಹಮ್ಮದ್ ರವರು ಮತ್ತೊಮ್ಮೆ ಮಾನ್ಯ ನ್ಯಾಯಾಲಯದಲ್ಲಿ ರಿಟ್ ಪಿಟಿಷನ್ ಸಂ 31412/2024 ನ್ನು ದಾಖಲಿಸಿರುತ್ತಾರೆ. ಸದರಿ ಪ್ರಕರಣದ ಮುಂದಿನ ವಿಚಾರಣೆಯು ದಿನಾಂಕ: 25-03-2025 ಕ್ಕೆ ಇರುತ್ತದೆ. ಮುಂದುವರೆದು ಅರ್ಜಿಯ ಇಲ್ಲದೆ ಮಂಜೂರು ಮಾಡಿರುವ ಪ್ರಕರಣಗಳ ಬಗ್ಗೆ ಸಮಗ್ರ ದಾಖಲೆಗಳನ್ನು ಪರಿಶೀಲಿಸುವುದು ಅಗತ್ಯವಿರುವುದಾಗಿ ಜಿಲ್ಲಾಧಿಕಾರಿ ಚಿಕ್ಕಮಗಳೂರು ಜಿಲ್ಲೆ ರವರು ಮಾಹಿತಿ ನೀಡಿರುತ್ತಾರೆ

ದಿನಾಂಕ: 26.09.2022 ರಂದು ಜಿಲ್ಲಾಧಿಕಾರಿ ಚಿಕ್ಕಮಗಳೂರು ಅಧ್ಯಕ್ಷತೆಯಲ್ಲಿ ಇವರ ನಡೆದ ಜಿಲ್ಲಾಮಟ್ಟದ ಭೂ ಮಂಜೂರಿ ಪ್ರಕರಣಗಳ ಗೈರು ವಿಲೇ ಕಡತಗಳ ಪುನರ್ ನಿರ್ಮಾಣ ಸಮಿತಿಯ ಸಭೆ ನಡವಳಿಯಂತ ಸರ್ಕಾರದ ಸುತ್ತೋಲೆ ಸಂಖ್ಯೆ:ಆರ್ ಆರ್ 74 ಎಲ್.ಜಿ.ಪಿ .2009, ದಿನಾಂಕ 17.09.2009 ಹಾಗೂ ಕಂಇ 8 ಎಲ್.ಜಿ.ಪಿ‌ 2016, ದಿನಾಂಕ 25.06.2016 ರನ್ವಯ ಗೈರು ವಿಲೇ ಸಭೆಯಲ್ಲಿ ಮಂಡಿಸಲು ತಿಳಿಸಿರುವ ಮಾನದಂಡದಂತೆ ಇಲ್ಲದಿರುವುದರಿಂದ ಪ್ರಕರಣವನ್ನು ತಿರಸ್ಕರಿಸುವ ಪ್ರಕರಣವಾಗಿದ್ದರೂ ಸಹ ಈ ಕ್ರಮ ಕೈಗೊಳ್ಳುವ ಮೊದಲು ಅರ್ಜಿದಾರರಿಗೆ ಈ ಸಂಬಂಧ ದಾಖಲೆಗಳು ಯಾವುದಾದರೂ ಇದ್ದಲ್ಲಿ ಒದಗಿಸಲು ಮತ್ತೊಂದು ಅವಕಾಶ ನೀಡಿ ಅವರ ಹೇಳಿಕೆ ಪಡೆದು ನಂತರ ಮುಂದಿನ ತೀರ್ಮಾನ ತೆಗೆದು ಕೊಳ್ಳಲು ತೀರ್ಮಾನಿಸಲಾಗಿರುತ್ತದೆ.

ಜಿಲ್ಲಾಧಿಕಾರಿಯವರ ನ್ಯಾಯಾಲಯ. ಚಿಕ್ಕಮಗಳೂರು ಜಿಲ್ಲೆ ರವರ ಪ್ರಕರಣ ಸಂಖ್ಯೆ:ಎಂ 2 ಎಲ್.ಎಲ್.ಆರ್.ಎಫ್ /ಸಿ.ಆರ್/20/2022-23. ದಿನಾಂಕ 03.09.2024ರ ಆದೇಶದಲ್ಲಿ ಚಿಕ್ಕಮಗಳೂರು ತಾಲ್ಲೂಕು, ಇನಾಂ ದತ್ತಾತ್ರೇಯ ಪೀಠ ಗ್ರಾಮದ ಸರ್ವೆ ನಂ. .8/30, ರಲ್ಲಿ 09 ಗುಂಟೆ ಸರ್ವೆ ನಂ 53ಪಿ (ಹೊಸ ಸರ್ವೆ ನಂ.306),ರಲ್ಲಿ 07.00 ಎಕರೆ, ಸರ್ವೆ ನಂ. 169 ( ಹೊಸ ಸರ್ವೆ ನಂ 307) ರಲ್ಲಿ 18-00 ಎಕರೆ, ಸರ್ವೆ ನಂ .170 ರಲ್ಲಿ 02-31 ಎಕರೆ, ಸರ್ವೆ ನಂ 171 ರಲ್ಲಿ .30 ಗುಂಟೆ, ಸರ್ವೆ ನಂ.192 ರಲ್ಲಿ 04.00 ಎಕರೆ ಸರ್ಕಾರಕ್ಕೆ ನಿಹಿತಗೊಂಡ ಸರ್ಕಾರಿ ಜಮೀನು ಗಳಾಗಿ ರುವುದರಿಂದ ಈ ಜಮೀನುಗಳ ಮಾಲೀಕತ್ವದ ಬಗ್ಗೆ ಆ‌ರ್.ಟಿ.ಸಿಯ ಕಾಲಂ-9 ರಲ್ಲಿ ಸರ್ಕಾರ’ ಎಂದು ದಾಖಲಿಸಲು ತಹಶೀಲ್ದಾರ್, ಚಿಕ್ಕಮಗಳೂರು ತಾಲ್ಲೂಕು ಇವರಿಗೆ ನಿರ್ದೇಶಿಸಿದ ಹಾಗೂ ವಿವಾದಿತ ಜಮೀನುಗಳಲಿರುವ ಕಾಲುದಾರಿ, ಬಂಡಿದಾರಿ ಮತ್ತು. ರಸ್ತೆಯ ಮೇಲೆ ಅರ್ಜಿದಾರರಿಗೆ ಯಾವುದೇ ಹಕ್ಕುಸ್ವಾಮ್ಯ ಇರುವುದಿಲ್ಲ ವೆಂದು ಘೋಷಿಸಿರುವುದು ಕಂಡು ಬರುತ್ತದೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here