ಬೆಂಗಳೂರು;- ಕುಮಾರಸ್ವಾಮಿ ಯಾವಾಗಲೂ ಬರೀ ಹಗಲು ಕನಸು ಕಾಣ್ತಾರೆ ಎಂದು ಮಾಜಿ ಸಚಿವ ಜಮೀರ್ ಅಹಮ್ಮದ್ ಖಾನ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಕುಮಾರಸ್ವಾಮಿ ಅವರು ಡಿಕೆಶಿ ಮುಂದಿನ ಚುನಾವಣೆ ನಿಲ್ಲಲ್ಲ ಎಂದಿದ್ದಾರೆ. ಅದರ ಅರ್ಥ ಏನು? ಏನು ಬೇಕಾದರೂ ಆಗಬಹುದು. ಡಿಕೆ ಶಿವಕುಮಾರ್ ಜೈಲಿಗೆ ಹೋಗ್ತಾರೆ ಅಂತ ಇದ್ದಾರೆ. ಯಾವ ಕಾರಣಕ್ಕೆ ಜೈಲಿಗೆ ಹೋಗ್ತಾರೆ? ನನ್ನ ಪ್ರಕಾರ ಕಂಡಿಷನ್ ಹಾಕಿನೇ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿರಬೇಕು. ಏಕೆಂದರೆ ಅಷ್ಟು ವಿಶ್ವಾಸದಲ್ಲಿ ಹೇಳುತ್ತಿದ್ದಾರೆ ಅಂದ್ರೆ, ಅಮಿತ್ ಶಾ ಜೊತೆ ಮೀಟಿಂಗ್ ಮಾಡಿದಾಗ ಈ ಕಂಡೀಶನ್ ಹಾಕಿರಬಹುದು” ಎಂದು ಟಾಂಗ್ ನೀಡಿದರು. ನಾನು ಕುಮಾರಸ್ವಾಮಿ ಜೊತೆ ಇದ್ದವನು. ಯಾವುದಾದರು ಸರ್ಕಾರ ಐದು ವರ್ಷ ನಡೆಯುತ್ತೆ ಎಂದು ಅವರು ಹೇಳಿದ್ದಾರಾ? ಯಡಿಯೂರಪ್ಪ ಸರ್ಕಾರ ಎರಡು ತಿಂಗಳಲ್ಲಿ ಬೀಳುತ್ತೆ ಎಂದಿದ್ದರು. ಬೊಮ್ಮಾಯಿ ಸರ್ಕಾರ ಮೂರು ತಿಂಗಳಲ್ಲಿ ಬೀಳುತ್ತೆ ಎಂದಿದ್ದರು. ಈಗ ನಮ್ಮ ಸರ್ಕಾರ ಇದೆ. ಇವರ ಸರ್ಕಾರವೇ ಉಳಿಸಿಕೊಳ್ಳಲು ಆಗಿಲ್ಲ. ಒಂದೂವರೆ ವರ್ಷದಲ್ಲಿ ಅವರ ಸರ್ಕಾರ ಪತನ ಆಗಿತ್ತು. ನಮ್ಮ ಸರ್ಕಾರ ಪತನವಾಗಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.
The post Jameer; ಕುಮಾರಸ್ವಾಮಿ ಯಾವಾಗಲೂ ಬರೀ ಹಗಲು ಕನಸು ಕಾಣ್ತಾರೆ – ಜಮೀರ್ appeared first on Ain Live News.