Home Uncategorized K.Sudhaker: ಸಿದ್ದರಾಮಯ್ಯ ಸರ್ಕಾರದ ಪಾಪದ ಕೊಡ ತುಂಬಿದೆ, ಜನ ಉತ್ತರ ಕೊಡುತ್ತಾರೆ: ಮಾಜಿ ಸಚಿವ ಸುಧಾಕರ್‌...

K.Sudhaker: ಸಿದ್ದರಾಮಯ್ಯ ಸರ್ಕಾರದ ಪಾಪದ ಕೊಡ ತುಂಬಿದೆ, ಜನ ಉತ್ತರ ಕೊಡುತ್ತಾರೆ: ಮಾಜಿ ಸಚಿವ ಸುಧಾಕರ್‌ ಕಿಡಿ!

57
0

ಬೆಂಗಳೂರು: ಸಿದ್ದರಾಮಯ್ಯ ಅಧಿಕಾರದ ಮದದಲ್ಲಿ ನಿದ್ದೆ ಹೋಗಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಪಾಪದ ಕೊಡ ತುಂಬಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜನ ಉತ್ತರ ಕೊಡುತ್ತಾರೆ ಎಂದು ಕಾಂಗ್ರೆಸ್​ ಸರ್ಕಾರದ ವಿರುದ್ಧ ಮಾಜಿ ಸಚಿವ ಡಾ.ಕೆ. ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ.

ಸೋಮಣ್ಣ ಸೋತಿರುವ ಬೇಸರದಲ್ಲಿ ಹೇಳಿರಬಹುದು, ಒಳ್ಳೆಯ ಕಾಲ ಬಂದೇ ಬರುತ್ತದೆ: ಎನ್​ ರವಿಕುಮಾರ್​

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಿದ್ದರಾಮಯ್ಯ ಅವರನ್ನು 2013ರಿಂದ ನೋಡುತ್ತಿದ್ದೇನೆ. ಕಾಂತರಾಜ್‌ ಆಯೋಗ ಮಾಡಿದ್ದೇ ಮಾಡಿದ್ದು, ಯಾಕೆ ಅವರ ಕಾಲದಲ್ಲಿ ಬಿಡುಗಡೆ ‌ಮಾಡಲಿಲ್ಲ. ರಾಜಕೀಯ ವಿಷಯ ‌ಬೇರೆಡೆಗೆ ಸೆಳೆಯೋ ತಂತ್ರ. ಇದೊಂದು ರಾಜಕೀಯ ದುರುದ್ದೇಶ ಎಂದು ಕುಟುಕಿದ್ದಾರೆ.

ಕೆಲವು ಜಾತಿಗಳ ಮಧ್ಯೆ ಧ್ವೇಷ ಮೂಡಿಸುತ್ತದೆ, ಅಸಮಾಧಾನ ಮೂಡಿಸುತ್ತದೆ. ಜಾತಿ ಜಾತಿಗಳ ಮಧ್ಯೆ ಕಲಹ ಉಂಟು ಮಾಡಿ ಲಾಭ ಪಡೆದುಕೊಳ್ಳುವುದು ಕಾಂಗ್ರೆಸ್ ಇತಿಹಾಸ. ಕೆಲವು ಗ್ಯಾರಂಟಿಗಳ ಮೂಲಕ ರಾಜ್ಯವನ್ನು ದಿವಾಳಿ ಮಾಡಿದ್ದಾರೆ. ಸಿದ್ದರಾಮಯ್ಯ  ಅಧಿಕಾರಕ್ಕೆ ಬಂದ ಮೇಲೆ ರೈತರ ಆತ್ಮಹತ್ಯೆಗಳು ಹೆಚ್ಚಾಗಿವೆ. ರಾಜ್ಯದಲ್ಲಿ ರೈತರ ಬದುಕಿಗೆ ಗ್ಯಾರಂಟಿ ಇಲ್ಲ ಎಂದು ಕಿಡಿಕಾರಿದ್ದಾರೆ.

The post K.Sudhaker: ಸಿದ್ದರಾಮಯ್ಯ ಸರ್ಕಾರದ ಪಾಪದ ಕೊಡ ತುಂಬಿದೆ, ಜನ ಉತ್ತರ ಕೊಡುತ್ತಾರೆ: ಮಾಜಿ ಸಚಿವ ಸುಧಾಕರ್‌ ಕಿಡಿ! appeared first on Ain Live News.

LEAVE A REPLY

Please enter your comment!
Please enter your name here