`ಮಹಿಳಾ ದಿನ’ದ ಹಿನ್ನೆಲೆಯಲ್ಲಿ 3 ದಿನಗಳ ಕಾರ್ಯಕ್ರಮ ಆಯೋಜನೆ
ಬೆಂಗಳೂರು:
ಅಂತಾರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆಯಲ್ಲಿ ಆಯೋಜಿಸಿರುವ ಮಹಿಳಾ ಸ್ವಸಹಾಯ ಸಂಘಗಳ ಉತ್ಪನ್ನಗಳ ಮೂರು ದಿನಗಳ `ಅಸ್ಮಿತೆ’ ವ್ಯಾಪಾರ ಮೇಳವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ಉದ್ಘಾಟಿಸಿದರು.
ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಏರ್ಪಡಿಸಿರುವ ಈ ಮೇಳವು ಬುಧವಾರದವರೆಗೆ ನಡೆಯಲಿದ್ದು, ಒಟ್ಟು 75 ಮಳಿಗೆಗಳಿಗೆ ಅವಕಾಶ ಕೊಡಲಾಗಿದೆ. ಮೇಳಕ್ಕೆ ಉಚಿತ ಪ್ರವೇಶಾವಕಾಶವಿದೆ.

ಮೇಳದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ಆಯ್ದ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ತಯಾರಿಸಿರುವ 70ಕ್ಕೂ ಹೆಚ್ಚು ಬಗೆಯ ಉತ್ಪನ್ನಗಳಿವೆ. ಇವುಗಳಲ್ಲಿ ಕೈಮಗ್ಗ ಮತ್ತು ಜವಳಿ ಉತ್ಪನ್ನಗಳು, ಸೆಣಬು ಮತ್ತು ಬಟ್ಟೆಯ ಚೀಲಗಳು, ಬಾಳೆನಾರಿನ ಉತ್ಪನ್ನಗಳು, ಬಗೆಬಗೆಯ ಬೊಂಬೆಗಳು, ಜೇನುತುಪ್ಪ, ಸಾಂಬಾರ ಪದಾರ್ಥಗಳು, ಲಾವಂಚದ ಉತ್ಪನ್ನಗಳು, ಕೊಲ್ಲಾಪುರಿ ಚಪ್ಪಲಿ, ಲಂಬಾಣಿ ಕಸೂತಿ, ಯೋಗ ಮ್ಯಾಟ್, ಕಂಬಳಿ ಮುಂತಾದವು ಸೇರಿವೆ.
ಮಾನ್ಯ ಮುಖ್ಯಮಂತ್ರಿ @BSBommai ಅವರ ಉಪಸ್ಥಿತಿಯಲ್ಲಿ "ಅಸ್ಮಿತೆ" ಮೇಳವನ್ನು ಉದ್ಘಾಟಿಸಲಾಯಿತು.
— Dr. Ashwathnarayan C. N. (@drashwathcn) March 7, 2022
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಸಂಜೀವಿನಿ ಸ್ವ-ಸಹಾಯ ಸಂಘದವರು ತಯಾರಿಸಿದ ವಸ್ತುಗಳ ಪ್ರದರ್ಶನ, ಮಾರಾಟ ಜರುಗುತ್ತಿದ್ದು ಎಲ್ಲಾ ಸಚಿವರು, ಶಾಸಕರು ಭೇಟಿ ಕೊಡುವ ಮೂಲಕ ನಮ್ಮ ಸಹೋದರಿಯರ ಸ್ವಾವಲಂಬಿ ನಡೆಯನ್ನು ಬೆಂಬಲಿಸಬೇಕಾಗಿ ಕೋರಿಕೆ. pic.twitter.com/5UjvocQJHu
ಜತೆಯಲ್ಲಿ ಜೀವನೋಪಾಯ ಸಂವರ್ಧನೆ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ, ಸರ್ಕಾರದ ಮನನ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಜೀವನೋಪಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಜೀವನೋಪಾಯ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕಿ ಮಂಜುಶ್ರೀ ಈ ಸಂದರ್ಭದಲ್ಲಿ ಇದ್ದರು.