ಬೆಂಗಳೂರು:
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರ ವಿರುದ್ಧ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಜನಪ್ರತಿನಿಧಿ ಕಾಯ್ದೆಯಡಿ ದಾಖಲಾದ ಪ್ರಕರಣದ ತನಿಖೆಗೆ ತಡೆಯಾಜ್ಞೆ ನೀಡಲಾಗಿದೆ.
”ಚುನಾವಣೆಯಲ್ಲಿ ಅನಗತ್ಯ ಪ್ರಭಾವ ಅಥವಾ ವ್ಯಕ್ತಿತ್ವಕ್ಕಾಗಿ ಶಿಕ್ಷೆಗಾಗಿ” ದಾಖಲಿಸಲಾದ ಪ್ರಕರಣವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ಮೇಲೆ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ತಡೆಯಾಜ್ಞೆ ನೀಡಿದರು.
ಬಿಜೆಪಿ ಪರವಾಗಿ ನ್ಯಾಯವಾದಿ ಮತ್ತು ಕಾನೂನು ಪ್ರಕೋಷ್ಠದ ವಿನೋದ್ ಕುಮಾರ್ ಅವರು ಈ ಕೇಸು ರದ್ದು ಮಾಡಲು ಕೋರಿ ಹೈಕೋರ್ಟಿನ ಧಾರವಾಡ ಪೀಠದ ಮುಂದೆ ಮನವಿ ಸಲ್ಲಿಸಿದ್ದರು.
‘ಬಿಜೆಪಿಗೆ ಮತ ನೀಡಿ ಮತ್ತು ಶ್ರೀ ನರೇಂದ್ರ ಮೋದಿಜಿಯವರ ಒಲವು ಪಡೆಯಿರಿ, ಕರ್ನಾಟಕವು ಮೋದಿಯವರ ಆಶೀರ್ವಾದ ಹೊಂದಿದೆ. ಅದರಿಂದ ವಂಚಿತವಾಗದಂತೆ ನೋಡಿಕೊಳ್ಳಿ’ ಎಂದು ನಡ್ಡಾರವರು ಹೇಳಿದ್ದು, ಇದು ಜನಪ್ರತಿನಿಧಿ ಕಾಯ್ದೆಯ ಪ್ರಕಾರ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 171(ಸಿ), 171(ಎಫ್) ಮತ್ತು 123(2) ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಂದು ಶಿಗ್ಗಾಂವಿ ಪೆÇಲೀಸ್ ಠಾಣೆಯಲ್ಲಿ ಅಪರಾಧ ನಂ.51/2023 ರಲ್ಲಿ ಪ್ರಕರಣ ದಾಖಲಿಸಲಾಗಿತ್ತು.
#Karnataka:speaking at a public meeting in Haveri on wed #JPNadda said“to not get deprived of Modi ji aashirvad Karnataka should vote for BJP
— Saba Khan (@ItsKhan_Saba) April 19, 2023
Nadda ji we #kannadiga are not illiterates to get threatned by your paper snakes and vote for corruption & fake #gujjumodel like promises pic.twitter.com/IjykzkihLr
ತಡೆಯಾಜ್ಞೆ ನೀಡಿದ ನಂತರ ವಿಚಾರಣೆಗೆ ಮುಂದೂಡಲ್ಪಟ್ಟ ಪ್ರಕರಣವನ್ನು ನಡ್ಡಾ ಅವರು 2023 ರ ಏಪ್ರಿಲ್ 19 ರಂದು ಶಿಗ್ಗಾಂವ್ ತಾಲೂಕು ಆಟದ ಮೈದಾನದಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಭಾಷಣ ಮಾಡಿದ ನಂತರ ಅವರ ವಿರುದ್ಧ ದಾಖಲಿಸಲಾಗಿದೆ.
ಬಿಜೆಪಿಗೆ ಬೆಂಬಲ ನೀಡದಿದ್ದಲ್ಲಿ ಕೇಂದ್ರ ಸರ್ಕಾರದ ದೊಡ್ಡ ಮೊತ್ತದಿಂದ ವಂಚಿತರಾಗುತ್ತೇವೆ ಎಂದು ಮತದಾರರಿಗೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.
ಈ ಸಂಬಂಧ ಚುನಾವಣಾಧಿಕಾರಿ ಲಕ್ಷ್ಮಣ್ ನಂದಿ ಅವರು ಮತದಾರರ ಮೇಲೆ ಅನಗತ್ಯ ಪ್ರಭಾವ ಬೀರುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ಪ್ರಕರಣವು ಹಾವೇರಿಯ ಪ್ರಧಾನ ಸಿವಿಲ್ ಮತ್ತು ಸಿಜೆಎಂ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದೆ.