Home ರಾಜಕೀಯ ಜೆಡಿಎಸ್ ಕಾರ್ಯಕರ್ತರ ಇಚ್ಛೆಯಂತೆ ಜವರಾಯಿಗೌಡರಿಗೆ ಪರಿಷತ್ ಟಿಕೆಟ್

ಜೆಡಿಎಸ್ ಕಾರ್ಯಕರ್ತರ ಇಚ್ಛೆಯಂತೆ ಜವರಾಯಿಗೌಡರಿಗೆ ಪರಿಷತ್ ಟಿಕೆಟ್

26
0

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಟಿ.ಎನ್.ಜವರಾಯಿಗೌಡರು ನಾಮಪತ್ರ ಸಲ್ಲಿಸಿದ್ದಾರೆ. ಕಾರ್ಯಕರ್ತನಿಗೆ ಟಿಕೆಟ್ ಕೊಡಬೇಕು ಎನ್ನುವುದು ಪಕ್ಷದ ಬಯಕೆ ಆಗಿತ್ತು. ಎಲ್ಲರ ಒಕ್ಕೊರಲ ಮಾತು ಆಗಿತ್ತು ಎಂದು ಇದೇ ವೇಳೆ ಕುಮಾರಸ್ವಾಮಿ ಅವರು ಹೇಳಿದರು.

ಪಕ್ಷದ ಎಲ್ಲಾ ಶಾಸಕರ ಜತೆ ಚರ್ಚೆ ಮಾಡಿ ನಿರ್ಧಾರ ಮಾಡಲಾಗಿದೆ. ಜವರಾಯಿಗೌಡ ಅವರು ಯಶವಂತಪುರ ಕ್ಷೇತ್ರದ ವಿಧಾನಸಭೆ ಚುನಾವಣೆಯಲ್ಲಿ ನಾಲ್ಕು ಸಲ ಸೋಲು ಕಂಡಿದ್ದರು. ಅವರು ಪಕ್ಷದ ನಿಷ್ಠಾವಂತ ಕಾರ್ಯಕರ್ತರು. ಅವರನ್ನೇ ಅಭ್ಯರ್ಥಿ ಮಾಡಬೇಕು ಎಂದು ಕಾರ್ಯಕರ್ತರಿಂದ ಒತ್ತಾಯವಿತ್ತು. ಈ ಹಿನ್ನೆಲೆಯಲ್ಲಿ ಜವರಾಯಿಗೌಡ ಅವರೇ ಅಭ್ಯರ್ಥಿಯಾಗಿದ್ದಾರೆ ಎಂದರು ಮಾಜಿ ಮುಖ್ಯಮಂತ್ರಿಗಳು.

ಜವರಾಯಿಗೌಡ ಗೌಡರ ಜತೆಗೆ ಬಿ.ಎಂ.ಫಾರೂಕ್ ಮತ್ತು ಕುಪೇಂದ್ರ ರೆಡ್ಡಿ ಅವರ ಹೆಸರುಗಳ ಬಗ್ಗೆಯೂ ಚರ್ಚೆ ಆಗಿತ್ತು. ಫಾರೂಕ್ ಅವರ ಹೆಸರು ಮುಂಚೂಣಿಯಲ್ಲಿತ್ತು. ಕೊನೆಗೆ ಫಾರೂಕ್ ಅವರೇ ಕಾರ್ಯಕರ್ತರ ಆಸೆಯಂತೆ ಜವರಾಯಿಗೌಡ ಸ್ಪರ್ಧೆ ಮಾಡಲಿ ಅಂತ ಹೇಳಿದರು ಎಂದರು ಅವರು.

LEAVE A REPLY

Please enter your comment!
Please enter your name here