ಬೆಂಗಳೂರು:
ಜನಪರ ಕಾಳಜಿಯ ರಾಜಕೀಯ ಮುಖಂಡರಾಗಿದ್ದ ಎಚ್.ಡಿ.ಚೌಡಯ್ಯ ಅವರ ನಿಧನಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ತಮ್ಮ ಶೋಕ ಸಂದೇಶದಲ್ಲಿ ಅವರು, ‘ಶೈಕ್ಷಣಿಕ ಉಪಕ್ರಮ, ಸಮಾಜಸೇವೆ ಮತ್ತು ರೈತರ ಹಕ್ಕುಗಳ ಪರವಾಗಿ ಸದಾ ದನಿ ಎತ್ತಿ, ಹೋರಾಟ ಕ್ಕೆ ಧುಮುಕುತ್ತಿದ್ದ ಅವರ ನಿಧನದಿಂದ ಸಮಾಜವು ಒಬ್ಬ ನಿಸ್ಪೃಹ ಮುತ್ಸದ್ದಿಯನ್ನು ಕಳೆದುಕೊಂಡಂತಾಗಿದೆ’ ಎಂದಿದ್ದಾರೆ.
ಮಂಡ್ಯ ಜಿಲ್ಲೆಯ ಧುರೀಣ ನಾಯಕರು, ಮಾಜಿ ಶಾಸಕರು ಡಾ.ಹೆಚ್.ಡಿ.ಚೌಡಯ್ಯ ಅವರ ಅಗಲಿಕೆಯಿಂದ ದುಃಖಿತನಾಗಿದ್ದೇನೆ.
— Dr. Ashwathnarayan C. N. (@drashwathcn) February 16, 2022
ಜನಾದರಣೀಯ ವ್ಯಕ್ತಿತ್ವದ ಮೂಲಕ ಜಿಲ್ಲೆಯ ಶಿಕ್ಷಣ ಕ್ಷೇತ್ರ, ಸಮಗ್ರ ಅಭಿವೃದ್ಧಿಗೆ ಅವರು ಅಪಾರ ಕೊಡುಗೆ ನೀಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬಕ್ಕೆ ಈ ನೋವು ಭರಿಸುವ ಶಕ್ತಿ ದೊರಕಲಿ ಎಂದು ಪ್ರಾರ್ಥನೆ. ಓಂ ಶಾಂತಿ. pic.twitter.com/ghXoex5LXZ
ಚೌಡಯ್ಯನವರು ಸದಾ ಸುತ್ತಲಿನ ಒಳಿತಿನ ಬಗ್ಗೆ ಚಿಂತಿಸುತ್ತಿದ್ದರು. ಪರಮಾತ್ಮನು ಅವರ ಆತ್ಮಕ್ಕೆ ಶಾಂತಿ ನೀಡಿ, ಅವರ ಕುಟುಂಬದ ಸದಸ್ಯರು ಮತ್ತು ಅನುಯಾಯಿಗಳಿಗೆ ದುಃಖ ವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.