Home ಮಂಡ್ಯ ಚೌಡಯ್ಯ ನಿಧನಕ್ಕೆ ಸಚಿವರ ಶೋಕ

ಚೌಡಯ್ಯ ನಿಧನಕ್ಕೆ ಸಚಿವರ ಶೋಕ

82
0
Karnataka Minister Mourns on Chaudaiah's Demise

ಬೆಂಗಳೂರು:

ಜನಪರ ಕಾಳಜಿಯ ರಾಜಕೀಯ ಮುಖಂಡರಾಗಿದ್ದ ಎಚ್.ಡಿ.ಚೌಡಯ್ಯ ಅವರ ನಿಧನಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ತಮ್ಮ ಶೋಕ ಸಂದೇಶದಲ್ಲಿ ಅವರು, ‘ಶೈಕ್ಷಣಿಕ ಉಪಕ್ರಮ, ಸಮಾಜಸೇವೆ ಮತ್ತು ರೈತರ ಹಕ್ಕುಗಳ ಪರವಾಗಿ ಸದಾ ದನಿ ಎತ್ತಿ, ಹೋರಾಟ ಕ್ಕೆ ಧುಮುಕುತ್ತಿದ್ದ ಅವರ ನಿಧನದಿಂದ ಸಮಾಜವು ಒಬ್ಬ ನಿಸ್ಪೃಹ ಮುತ್ಸದ್ದಿಯನ್ನು ಕಳೆದುಕೊಂಡಂತಾಗಿದೆ’ ಎಂದಿದ್ದಾರೆ.

ಚೌಡಯ್ಯನವರು ಸದಾ ಸುತ್ತಲಿನ ಒಳಿತಿನ ಬಗ್ಗೆ ಚಿಂತಿಸುತ್ತಿದ್ದರು. ಪರಮಾತ್ಮನು ಅವರ ಆತ್ಮಕ್ಕೆ ಶಾಂತಿ ನೀಡಿ, ಅವರ ಕುಟುಂಬದ ಸದಸ್ಯರು ಮತ್ತು ಅನುಯಾಯಿಗಳಿಗೆ ದುಃಖ ವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

LEAVE A REPLY

Please enter your comment!
Please enter your name here