ಬೆಂಗಳೂರು;- 2018ರಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನಕ್ಕೆ ಡಿಕೆಶಿಯೇ ಕಾರಣ ಎಂದು ಮಾಜಿ ಸಿಎಂ HDK ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಸರ್ಕಾರ ಪತನವಾಗುವುದಕ್ಕೆ ನಾನು ಕಾರಣನಲ್ಲ. 2018ರಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನಗೊಳ್ಳಲು ಡಿ.ಕೆ. ಶಿವಕುಮಾರ್ ನೇರ ಕಾರಣ.
ರಮೇಶ ಜಾರಕಿಹೊಳಿ ಅವರಿಗೂ ನನಗೂ ವೈಷಮ್ಯ ಇರಲಿಲ್ಲ. ಬೆಳಗಾವಿಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನ ರಾಜಕೀಯಕ್ಕೆ ನಾನು ಬಲಿಪಶುವಾದೆ. ಶಿವಕುಮಾರ್ ಬೆಳಗಾವಿಯ ರಾಜಕೀಯಕ್ಕೆ ಕೈ ಹಾಕಿದ್ದೇಕೆ’ ಎಂದು ಕೇಳಿದರು.
‘ಜೋಡೆತ್ತು ಎಂದು ಬಲವಂತವಾಗಿ ನನ್ನ ಕೈ ಎತ್ತಿಸಿದವರು, ಒಳಗೊಳಗೇ ರಾಜಕೀಯ ಮಾಡಿದರು. ಕುಮಾರಸ್ವಾಮಿ ಸರ್ಕಾರ ಉಳಿಸೋಕೆ ಪ್ರಾಮಾಣಿಕ ಪ್ರಯತ್ನ ಮಾಡಿದೆ ಎಂದು ಮೊಸಳೆ ಕಣ್ಣೀರು ಹಾಕಿದರು. ಅವರನ್ನು ನಂಬಿ ನಾನು ಕುತ್ತಿಗೆ ಕೊಯ್ದುಕೊಂಡಿದ್ದೇನೆ. ನಿಮ್ಮ ಕುತ್ತಿಗೆಯನ್ನೂ ಕೊಯ್ದಿದ್ದೇನೆ’ ಎಂದು ಪಕ್ಷದ ಮುಖಂಡರನ್ನುದ್ದೇಶಿಸಿ ಹೇಳಿದರು.
ಜೀವನದಲ್ಲಿ ಯಾವತ್ತೂ ಡಿ.ಕೆ. ಶಿವಕುಮಾರ್ ಜತೆ ರಾಜಿ ಆಗಿಲ್ಲ. ಒಮ್ಮೆ ಅವರ ಜತೆ ಸೇರಿ ಸರ್ಕಾರ ರಚಿಸಿ ಈಗಲೂ ನೋವು ಅನುಭವಿಸುವಂತಾಗಿದೆ. ಅವರು ಒಮ್ಮೆ ತಿಹಾರ್ ಜೈಲು ನೋಡಿಕೊಂಡು ಬಂದಿದ್ದಾರೆ. ಕಾಯಂ ಆಗಿ ಅಲ್ಲಿಗೆ ಹೋದರೂ ಆಶ್ಚರ್ಯವಿಲ್ಲ. ನಮ್ಮನ್ನು ಹಾಸನಕ್ಕೆ ಓಡಿಸಬಹುದು. ಆದರೆ, ಶಿವಕುಮಾರ್ ತಿಹಾರ್ ಜೈಲಿಗೆ ಓಡುವ ಕಾಲ ಸಮೀಪಿಸುತ್ತಿದೆ’ ಎಂದು ವಾಗ್ದಾಳಿ ನಡೆಸಿದರು.
The post Kumaraswamy; ಶಿವಕುಮಾರ್ ತಿಹಾರ್ ಜೈಲಿಗೆ ಓಡುವ ಕಾಲ ಸಮೀಪಿಸುತ್ತಿದೆ – HDK ವಾಗ್ದಾಳಿ appeared first on Ain Live News.