ಮಂಡ್ಯ: ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆಯ ಸಿದ್ಧತೆ ಗರಿಕೆಧರಿಗೆ ಕೈ ಪಡೆ ನಾಯಕರು ಖಾಸಗಿ ಕಲ್ಯಾಣ ಮಂಟಪದಲ್ಲಿ ಮಂಡ್ಯ ಲೋಕಸಭಾ ವ್ಯಾಪ್ತಿಯ ಮುಖಂಡರೊಟ್ಟಿಗೆ ಪೂರ್ವಭಾವಿ ಸಭೆಯನ್ನು ಸಚಿವರು ಹಾಗೂ ಮಂಡ್ಯ ಲೋಕಸಭಾ ಚುನಾವಣಾ ಉಸ್ತುವಾರಿ ಸುಧಾಕರ್ ರವರ ಸಮ್ಮುಖದಲ್ಲಿ ಉಸ್ತುವಾರಿ ಸಚಿವ ಎನ್ ಚೆಲುವರಾಯಸ್ವಾಮಿ ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ,
ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮಧು ಜಿ.ಮಾದೇಗೌಡ, ಕಾಂಗ್ರೆಸ್ ಪಕ್ಷದ ಮುಂಚೂಣಿ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು ಭಾಗಿಯಾಗಿದ್ದರು ಇದರ ಬೆನ್ನಲ್ಲೇ ಉಸ್ತುವಾರಿ ಸಚಿವರ ಶ್ರೀಮತಿ ಧನಲಕ್ಷ್ಮಿ ಅವರು ಕ್ಷೇತ್ರದಲ್ಲಿ ಆಕ್ಟಿವ್ ಆಗಿದ್ದಾರೆ ಈ ಕುರಿತು ಒಂದು ವರದಿ ಇದೆ ನೋಡಿ. ಹೌದು ಮಂಡ್ಯ ಜಿಲ್ಲೆ ಚುನಾವಣೆ ಅಂದಾಕ್ಷಣ ರಾಜ್ಯ ಹಾಗೂ ಕೇಂದ್ರದ ಗಮನ ಸೆಳೆಯುವ ಕ್ಷೇತ್ರವಾಗಿದೆ ಕಳೆದ ಬಾರಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸುಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ದಿವಂಗತ ರೆಬೆಲ್ ಸ್ಟಾರ್ ಅಂಬರೀಶ್ರವರ ಶ್ರೀಮತಿ ಸುಮಲತಾ ಪ್ರವರ ಸ್ಪರ್ಧೆಯಿಂದಾಗಿ ಇಡೀ ರಾಷ್ಟ್ರದ ಗಮನವನ್ನು ತಿಳಿದಿತ್ತು.
Iphone 15 Bigg Update: ಐಫೋನ್ 15 ಸೀರೀಸ್ ಬಳಕೆದಾರರಿಗೆ ಬಿಗ್ ಅಪೆ ಡೇಟ್: ಏನಂತೀರಾ?!
ಇದೀಗ ಕ್ಷೇತ್ರದಲ್ಲಿ ಅನ್ನೋದಕ್ಕಿಂತಲೂ ಮೇಲ್ಮಟ್ಟದಲ್ಲೇ ಬಿಜೆಪಿ ಜೆಡಿಎಸ್ ಮೈತ್ರಿ ಆಗುತ್ತಿರುವುದು ಮತ್ತೊಮ್ಮೆ ಮಂಡ್ಯ ಕ್ಷೇತ್ರದಲ್ಲಿ ಯಾವ ಪಕ್ಷದಿಂದ ಯಾರು ಅಭ್ಯರ್ಥಿಗಳಾಗುತ್ತಾರೆ ಎನ್ನುವ ವಿಚಾರ ಕ್ಷೇತ್ರದಲ್ಲೇಡೆ ಚರ್ಚೆ ಪ್ರಾರಂಭವಾಗಿದೆ. ಕಳೆದ ವಿಧಾನಪರಿಷತ್ ಚುನಾವಣೆಯಿಂದ ಈವರೆಗೂ ನಡೆದಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್ ಭದ್ರಕೋಟೆಯನ್ನು ಭೇದಿಸಿ ಗೆಲುವಿನ ನಾಗಾಲೋಟದಲ್ಲಿ ಸಂಭ್ರಮಿಸುತ್ತಿರುವ ಕೈಪಡೇ ನಾಯಕರ ಸಂಭ್ರಮಕ್ಕೆ ಪಾರವೇ ಇಲ್ಲದಂತಾಗಿದೆ.
ಹಳೆ ಮೈಸೂರು ಭಾಗವಾಗಿರುವ ಮಂಡ್ಯ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಜೆಡಿಎಸ್ ಕ್ಷೀಣಿಸುತ್ತಾ ಬರುತಿದೆ, ವಿಧಾನ ಪರಿಷತ್, ವಿಧಾನಸಭೆ, ಮನಮುಲ್ ಚುನಾವಣೆಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಹಿಂದಕ್ಕೆ ಸಾಲು ಸಾಲು ವಿಜಯಮಾಲೆಗಳನ್ನು ತನ್ನದಾಗಿಸಿಕೊಂಡಿರುವ ಉಸ್ತುವಾರಿ ಸಚಿವರ ನಡೆಯೇನು.? ಆಲಿ ಸಂಸದರ ಕಥೆ ಏನು.? ಜೆಡಿಎಸ್ ಬಿಜೆಪಿ ಕೈಗೊಳ್ಳುವ ನಿರ್ಧಾರವೇನು.? ಏನಾಗಬಹುದು ಮುಂದಿನ ದಿನಗಳಲ್ಲಿ ಎನ್ನುವ ಚರ್ಚೆಯಲ್ಲಿ ಮುಖಂಡರು ತೊಡಗಿದ್ದಾರೆ.
ಇತ್ತಾ ಪೂರಬಾವಿ ಸಭೆ ಮುಗಿದ ಎರಡು ಮೂರು ದಿನಗಳಲ್ಲೇ ತನ್ನ ಸ್ವಕ್ಷೇತ್ರವಾದ ನಾಗಮಂಗಲದಲ್ಲಿ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ತಮ್ಮ ಧರ್ಮಪತ್ನಿಯನ್ನು ಸರ್ಕಾರಿ ಕಾರ್ಯಕ್ರಮದ ವೇದಿಕೆಗೆ ಕರೆತಂದಿದ್ದಾರೆ ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಮಹಿಳೆಯರು ಭಾಗವಹಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಧನಲಕ್ಷ್ಮಿಯವರು ನಿಮ್ಮೆಲ್ಲರ ಆಶೀರ್ವಾದ ನಮ್ಮ ಮನೆಯವರು ಸಚಿವರಾಗಿದ್ದಾರೆ ನಿಮ್ಮೆಲ್ಲರಿಗೂ ಕೃತಜ್ಞತೆ ತಿಳಿಸಲು ವೇದಿಕೆ ಸಿಕ್ಕಿರಲಿಲ್ಲ ಈ ಮೂಲಕ ನಿಮ್ಮೆಲ್ಲರಿಗೂ ಕೂಡ ಹೃತ್ಪೂರ್ವಕ ಅಭಿನಂದನೆಗಳು ಎಂದು ಹೇಳುವ ಮೂಲಕ ಮೊದಲ ಹೆಜ್ಜೆಯನ್ನು ಇಟ್ಟಿದ್ದಾರೆ.
ಇನ್ನು ಹಾಲಿ ಸಂಸದೆ ಸುಮಲತಾ ಅಂಬರೀಶ್ ರವರು ಕಳೆದ ನಾಲ್ಕು ದಿನದಿಂದ ಈಚೆಗೆ ಕ್ಷೇತ್ರದಲ್ಲಿ ಎರಡನೇ ಬಾರಿ ಪ್ರವಾಸ ಕೈಗೊಂಡಿದ್ದಾರೆ ಮೊನ್ನೆ ಅಷ್ಟೇ ಮಳವಳ್ಳಿ ಭಾಗದಲ್ಲಿ ಪ್ರವಾಸ ಮುಗಿಸಿದ ಸಂಸದೆ ನಾಳೆ ಕೆ ಆರ್ ಪೇಟೆ ಭಾಗದಲ್ಲಿ ಪ್ರವಾಸ ಕೈಗೊಂಡಿದ್ದಾರೆ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ವಿಚಾರವಾಗಿ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ ಸಂಸದೆ ಮುಂಬರುವ ಲೋಕಸಭೆ ಚುನಾವಣೆ ಸ್ಪರ್ಧೆಯ ವಿಚಾರವಾಗಿ ಅವರ ನಿಲುವನ್ನು ಪ್ರಕಟಿಸಿಲ್ಲ ಕಳೆದ ಚುನಾವಣೆಯಲ್ಲಿ ಜೆಡಿಎಸ್ ವಿರುದ್ಧ ಸೆಣಸಾಡಿದ ರೆಬಲ್ ಲೇಡಿ ಮಳವಳ್ಳಿ ಕ್ಷೇತ್ರದ ಪ್ರವಾಸದಲ್ಲಿ ಕಾಂಗ್ರೆಸ್ ಶಾಸಕ ನರೇಂದ್ರ ಸ್ವಾಮಿ ಅವರ ಒಟ್ಟಿಗೆ ವೇದಿಕೆ ಹಂಚಿಕೊಳ್ಳುವ ಮೂಲಕ ರಾಜಕೀಯ ಪಡಸಾಲೆಯಲ್ಲಿ ಸಂಸದೆ ಸುಮಲತಾ ಅವರ ನಡೆ ಬಗ್ಗೆ ಕುತೂಹಲ ಹೆಚ್ಚಾಗಿದೆ.
ಸರಣಿ ಗೆಲುವಿಗೆ ಪಾತ್ರರಾಗಿರುವ ಸಚಿವ ಎನ್ ಚೆಲುವರಾಯಸ್ವಾಮಿ ರವರಿಗೆ ಲೋಕಸಭೆ ಅಕಾಡವನ್ನು ತಮ್ಮದಾಗಿಸುವ ಗುರಿ ಎದುರುಗಿದೆ ಗೆಲುವಿಗಾಗಿ ಬೇಕಾಗಿರುವ ಎಲ್ಲಾ ತಂತ್ರಗಾರಿಕೆಯನ್ನು ಮಾಡುತ್ತಿರುವ ಅವರು ಕ್ಷೇತ್ರದಲ್ಲಿ ತಮ್ಮ ಶ್ರೀಮತಿಯ ಹೆಸರು ಗ್ರಾಸವಾಗುತ್ತಿದ್ದಂತೆ ಇದರ ಜೊತೆಗೆ ಸಾಕಷ್ಟು ಆಕಾಂಕ್ಷಿಗಳು ಸ್ಪರ್ಧೆ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ ಎಲ್ಲರ ಹೆಸರನ್ನು ಹೈಕಮಾಂಡ್ ಗೆ ಕಳಿಸಿಕೊಡ ಲಾಗುವುದು ಅವರು ಯಾರನ್ನು ಸೂಚಿಸುತ್ತಾರೋ ಅದರ ಮೇಲೆ ನಿರ್ಧಾರವಾಗುತ್ತದೆ ಎಂದು ತಿಳಿಸಿದ್ದಾರೆ. ಒಟ್ಟಾರೆ ಮಂಡ್ಯ ಕ್ಷೇತ್ರ ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುವುದು ಖಚಿತ ಎಂಬಂತೆ ರಾಜಕೀಯ ಬೆಳವಣಿಗೆಗಳು ಗರಿ ಕೆದುರುತ್ತಿದೆ ಜೆಡಿಎಸ್ ಬಿಜೆಪಿ ಕಾಂಗ್ರೆಸ್ ಪಕ್ಷಗಳಿಗೆ ಪ್ರತಿಷ್ಠಿತ ಕ್ಷೇತ್ರವಾಗಿರುವ ಮಂಡ್ಯ ರಾಜಕೀಯ ಕ್ಷೇತ್ರದಲ್ಲಿ ಯಾರು ಮೇಲ್ಗೈ ಸಾಧಿಸುತ್ತಾರೆ ನೋಡಬೇಕಾಗಿದೆ.
The post Loksabha Election: ಲೋಕ ಅಖಾಡಕ್ಕೆ ಕೈ ಪಡೆ ಸಜ್ಜು.! ಕಾಂಗ್ರೆಸ್’ನಿಂದ ಹೊಸ ಮಹಿಳಾ ಅಭ್ಯರ್ಥಿ? appeared first on Ain Live News.