Home ರಾಜಕೀಯ Mahadayi issue: “ಮಹದಾಯಿ ವಿಚಾರದಲ್ಲಿ ಗೋವಾ ಸಿಎಂ ಮೆಂಟಲ್ ಬ್ಯಾಲೆನ್ಸ್ ಕಳೆದುಕೊಂಡಿದ್ದಾರೆ” – ಡಿಸಿಎಂ ಡಿಕೆ...

Mahadayi issue: “ಮಹದಾಯಿ ವಿಚಾರದಲ್ಲಿ ಗೋವಾ ಸಿಎಂ ಮೆಂಟಲ್ ಬ್ಯಾಲೆನ್ಸ್ ಕಳೆದುಕೊಂಡಿದ್ದಾರೆ” – ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು

24
0
“Goa CM has lost his mental balance on Mahadayi issue” – DCM DK Shivakumar hits back

ಬೆಂಗಳೂರು: ಮಹದಾಯಿ ನದಿಯ ನೀರಿನ ಹಂಚಿಕೆಯನ್ನು ಕೇಳಿದ ಹಿನ್ನೆಲೆಯಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, “ಅವರಿಗೆ ಮೆಂಟಲ್ ಬ್ಯಾಲೆನ್ಸ್ ಇಲ್ಲ. ಅವರು ಫೆಡರಲ್ ಸ್ಟ್ರಕ್ಚರ್ ಎಂದರೇನು ಎಂಬ ಅರಿವಿಲ್ಲ” ಎಂದು ಧಿಕ್ಕರಿಸಿದರು.

ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ ಡಿಕೆ ಶಿವಕುಮಾರ್ ಹೇಳಿದರು, “ಈಗಾಗಲೇ ಕಲಸಾ-ಬಂಡೂರಿ ಯೋಜನೆಗೆ ನ್ಯಾಯಮಂಡಳಿಯ ತೀರ್ಪು ಬಂದಿದೆ, ಟೆಂಡರ್ ಕರೆಯಲಾಗಿದೆ. ಬಿಜೆಪಿ ಸರ್ಕಾರ, ಬಸವರಾಜ್ ಬೊಮ್ಮಾಯಿ ಮತ್ತು ಸಂಸದ ಜೋಶಿಯವರೂ ಸಂಭ್ರಮಿಸಿದರು. ಕೆಲವೊಂದು ಅರಣ್ಯ ಕ್ಲಿಯರೆನ್ಸ್ ವಿಷಯ ಮಾತ್ರ ಬಾಕಿ ಇದೆ.”

“ಅವರು ಕಳಿಸಿದ ನೋಟಿಸ್‌ಗಳಲ್ಲಿ ‘ಕೆಲಸ ಮಾಡಬೇಡಿ’ ಅನ್ನೋದಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ನಮ್ದು ಕೆಲವು ಅರ್ಜಿಗಳು ಇವೆ, ಅವನ್ನು ವಾಪಸ್ ತೆಗೆದುಕೊಳ್ಳುತ್ತೇವೆ. ನಾವು ನಮ್ಮ ಹಕ್ಕಿಗಾಗಿ ಕಾಮಗಾರಿ ಆರಂಭಿಸುತ್ತೇವೆ,” ಎಂದರು.

ಗೋವಾ ಸಿಎಂ ಹೇಳಿಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿದ ಡಿಕೆಶಿ, “ಅವರ ಮಾತಿಗೆ ನಾನೊಂದು ಸ್ಪಷ್ಟ ಉತ್ತರ ಕೊಡುತ್ತೇನೆ – ಅವರು ಮೆಂಟಲ್ ಬ್ಯಾಲೆನ್ಸ್ ಕಳೆದುಕೊಂಡಿದ್ದಾರೆ. ನಾವು ಇದನ್ನು ತೀವ್ರವಾಗಿ ಖಂಡಿಸುತ್ತೇವೆ.”

ಕರ್ನಾಟಕದ 28 ಸಂಸದರು ಮತ್ತು 12 ರಾಜ್ಯಸಭಾ ಸದಸ್ಯರು ಈ ಹೋರಾಟಕ್ಕೆ ಒಂದಾಗಿ ನಿಲ್ಲಬೇಕೆಂದು ಅವರು ಕರೆ ನೀಡಿದರು. “ನಿಮ್ಮ ಪ್ರತಿಷ್ಠೆಯ ಪ್ರಶ್ನೆ ಇದಾಗಿದೆ. ಬಾಯಿ ಮುಚ್ಚಿಕೊಂಡು ಕೂತ್ಕೊಳ್ಳೋದು ತಪ್ಪು. ಕೇವಲ ಒಬ್ಬ ಎಂಪಿಯ ತೀರ್ಮಾನಕ್ಕೆ ಕರ್ನಾಟಕ ಮಾರಾಟವಾಗಬಾರದು,” ಎಚ್ಚರಿಸಿದರು.

ಪ್ರಧಾನಿ ಮತ್ತು ಜಲಸಂಪತ್ತಿ ಮಂತ್ರಿಗಳನ್ನು ಭೇಟಿಯಾಗಿ ರಾಜ್ಯದ ಹಕ್ಕು ಸ್ಥಾಪಿಸಲು ತನಿಖೆ ಮಾಡುತ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದರು. “ನಾನು ಎಲ್ಲಾ ಸಂಸದರನ್ನು ಕರೆದುಕೊಂಡು ಹೋಗಲು ಪ್ರಯತ್ನಿಸುತ್ತೇನೆ. ಪ್ರಧಾನಿಯವರಿಂದ ಟೈಮ್ ಕೇಳುತ್ತೇನೆ. ನಾನು ಈ ಹೋರಾಟಕ್ಕೆ ಮುನ್ನಡೆ ನೀಡುತ್ತೇನೆ,” ಎಂದು ಹೇಳಿದರು.

LEAVE A REPLY

Please enter your comment!
Please enter your name here