ಬೆಂಗಳೂರು: ಸ್ವಪಕ್ಷೀಯ ನಾಯಕರ ವಿರುದ್ಧವೇ ಸೋಮಣ್ಣ ಅಸಮಾಧಾನ ವಿಚಾರವಾಗಿ ಮಾತನಾಡಿದ ಮಾಜಿ ಸಚಿವ ಎನ್ ಮುನಿರತ್ನ, ವಿ.ಸೋಮಣ್ಣಗೆ ಅನ್ಯಾಯ ಆಗಿದೆ ನಿಜ ಎಂದು ಹೇಳಿದ್ದಾರೆ.
Breaking: KSRP ಕ್ಯಾಂಪಸ್ʼನಲ್ಲಿ ಫೈರಿಂಗ್: ಇಬ್ಬರು ಪೇದೆಗಳಿಗೆ ಗುಂಡೇಟು, ಒಬ್ಬರ ಸ್ಥಿತಿ ಗಂಭೀರ!
ನಗರದಲ್ಲಿ ಮಾತನಾಡಿದ ಅವರು, ಸೋಮಣ್ಣ ಒಳ್ಳೆಯ ಹೆಸರು ಇರುವ ವ್ಯಕ್ತಿ. ಸೋಮಣ್ಣಗೆ ಎರಡು ಕ್ಷೇತ್ರದ ಬದಲು ಒಂದು ಕ್ಷೇತ್ರ ಕೊಡಬಹುದಿತ್ತು. ಸೋಮಣ್ಣಗೆ ಪಕ್ಷ ಸೂಕ್ತ ಸ್ಥಾನಮಾನ ಕೊಡುತ್ತದೆ ಎನ್ನುವ ವಿಶ್ವಾಸ ಇದೆ ಎಂದರು.
ಬಿಜೆಪಿ, ಜೆಡಿಎಸ್ ಮೈತ್ರಿಗೆ ಎಸ್ಟಿ ಸೋಮಶೇಖರ್ ವಿರೋಧ ವಿಚಾರವಾಗಿ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದಾಗ ಯಾರೂ ಮಾತಾಡಿಲ್ಲ.ಯಡಿಯೂರಪ್ಪ ಬದಲಾವಣೆ ಬಗ್ಗೆ ಕೇಳದವರು ಇಂದು ಮೈತ್ರಿ ಬಗ್ಗೆ ಏಕೆ ಕೇಳುತ್ತಾರೆ? ಹೈಕಮಾಂಡ್ ನಮ್ಮ ಮಾತು ಕೇಳಬೇಕಿತ್ತು ಎಂದು ಹೇಳಬಹುದಿತ್ತಲ್ಲಾ? ಈಗ ಮೈತ್ರಿ ಬಗ್ಗೆ ಹೈಕಮಾಂಡ್ ಕೇಳಬೇಕಿತ್ತು ಎಂದು ಯಾಕೆ ಹೇಳುತ್ತೀರಿ ಎಂದು ಪ್ರಶ್ನಿಸಿದರು.
ಅಲ್ಲದೆ, ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರವನ್ನು ಹೈಕಮಾಂಡ್ ಮಾಡಿದೆ ಎಂದರು. ಕಾಂಗ್ರೆಸ್ನಲ್ಲಿ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ನಲ್ಲಿ ನೆಂಟರು ಜಾಸ್ತಿ, ಅಕ್ಕಿ ಕಡಿಮೆ ಆಗಿದೆ. ಐದು ಕೆಜಿ ಅಕ್ಕಿಯಾದರೂ ಸಿಗುತ್ತಾ ಅಂತ ಲೆಟರ್ ಹೆಡ್ ಹಿಡಿದು ನಿಂತಿದ್ದಾರೆ. ಸಿಕ್ಕಿಲ್ಲ ಅಂದರೆ ಪಕ್ಕದ ಮನೆಯಲ್ಲಿ ಸಿಗುತ್ತಾ ಅಂತ ಕಾಯುತ್ತಿದ್ದಾರೆ. ಅಲ್ಲಿ ಅಕ್ಕಿ ಇಲ್ಲದ್ದು ಗೊತ್ತಾಗಿದೆ ಎಂದರು.
The post Muniratna: ಸೋಮಣ್ಣಗೆ ಅನ್ಯಾಯ ಆಗಿದೆ ನಿಜ, ಪಕ್ಷ ಸೂಕ್ತ ಸ್ಥಾನಮಾನ ಕೊಡುತ್ತದೆ: ಮುನಿರತ್ನ appeared first on Ain Live News.