Home Uncategorized Murder: ಡ್ಯಾನ್ಸ್ ವಿಚಾರಕ್ಕೆ ಇಬ್ಬರ ನಡುವೆ ಶುರುವಾದ ಜಗಳ : ಕೊನೆಗೆ ಆಗಿದ್ದೇನು ಗೊತ್ತಾ?

Murder: ಡ್ಯಾನ್ಸ್ ವಿಚಾರಕ್ಕೆ ಇಬ್ಬರ ನಡುವೆ ಶುರುವಾದ ಜಗಳ : ಕೊನೆಗೆ ಆಗಿದ್ದೇನು ಗೊತ್ತಾ?

47
0

ಬೆಂಗಳೂರು: ಅದು ರಾತ್ರಿ ಇಡೀ ಏರಿಯಾದ ಜನರು ನೂರಾರು ಸಂಖ್ಯೆಯಲ್ಲಿ ಸೇರಿ ಕುಣಿಯುತ್ತಾ ಗಣೇಶ ಮೆರವಣಿಗೆ ಮಾಡ್ತಾ ಇದ್ರು. ಇನ್ನೇನು ಮೆರವಣಿಗೆ ಆಂಜಿನೇಯ ಸ್ವಾಮೀ ದೇವಸ್ಥಾನದ ಬಳಿ ಬರ್ತಾ ಇದ್ದಂಗೆ ಎರಡು ಗುಂಪುಗಳ ನಡುವೆ ಜಗಳ ಶುರುವಾಗಿದೆ.‌ ನೋಡು ನೋಡುತ್ತಲೇ ಗಲಾಟೆ ತಾರಕಕ್ಕೆ ಹೋಗಿದೆ. ಇದೇ ವೇಳೆ ಒಂದು ಗುಂಪು ಮೂವರಿಗೆ ಡ್ರ್ಯಾಗರ್ ನಿಂದ ಅಟ್ಯಾಕ್ ಮಾಡಿದ್ದಾರೆ. ಒಬ್ಬ ಸ್ಥಳದಲ್ಲೇ ಸತ್ರೆ, ಇಬ್ಬರು ಆಸ್ಪತ್ರೆ ಪಾಲಾಗಿದ್ದಾರೆ.

Breaking: KSRP ಕ್ಯಾಂಪಸ್ʼನಲ್ಲಿ ಫೈರಿಂಗ್: ಇಬ್ಬರು ಪೇದೆಗಳಿಗೆ ಗುಂಡೇಟು, ಒಬ್ಬರ ಸ್ಥಿತಿ ಗಂಭೀರ!

ನೋಡ್ತಾ ಇದೀರಲ್ಲ ರೋಡಲ್ಲಿ ಹೇಗೆ ಮನಸೋ ಇಚ್ಚೆ ಮಚ್ಚು, ಡ್ರ್ಯಾಗರ್ ನಿಂದ ಅಟ್ಯಾಕ್ ಮಾಡ್ತಾ ಇದಾರೆ ಅಂತ. ಇದು ನಿನ್ನೆ ರಾತ್ರಿ ಆಡುಗೋಡಿಯಲ್ಲಿ ನಡೆದ ಘಟನೆ. ಹೀಗೆ ಮನಸೋ ಇಚ್ಚೆ ಕೊಚ್ಚುತ್ತಾ ಇರೋದು ರೌಡಿ ವಿನಯ್ ಅಂಡ್ ಟೀಂ. ಸತ್ತಿದ್ದು ಶ್ರೀನಿವಾಸ್ ಅಂತ. ಏನಪ್ಪ ಇದು ಘಟನೆ ಅಂದ್ರೆ ಆಡುಗೋಡಿಯಲ್ಲಿ ಕೆಲ ಯುವಕರು ನಿನ್ನೆ ಬೆಳಿಗ್ಗೆ ಗಣೇಶನನ್ನು ಇಟ್ಟಿದ್ದು ರಾತ್ರಿ ವಿಸರ್ಜನೆಗೆ ಮುಂದಾಗಿದ್ರು. ಮೆರವಣಿಗೆ ವೇಳೆ ಯುವಕರು ಫುಲ್ ಡಿಜೆ ಹಾಗೂ ತಮಟೆ ಸೌಂಡಿಗೆ ಡ್ಯಾನ್ಸ್ ಮಾಡುತ್ತಾ ಮೆರವಣಿಗೆ ಹೋಗ್ತಾ ಇದ್ರು. ಹೀಗೆ ಸಾಗ್ತಿದ್ದ ಮೆರವಣಿಗೆ ಆಂಜನೇಯಸ್ವಾಮಿ ದೇವಾಲಯದ ಮುಂದೆ ಬಂದಿದೆ. ಈ ವೇಳೆ ಶ್ರೀನಿವಾಸ್ ಅಂಡ್ ಟೀಂನವರು ಮುಂದೆಯೇ ಬಂದು ಡ್ಯಾನ್ಸ್ ಮಾಡಲು ಮುಂದಾಗಿದ್ದಾರೆ. ಆಗ ಶ್ರೀನಿವಾಸ್ ಅಂಡ್ ಟೀಂ ಡ್ಯಾನ್ಸ್ ಮಾಡ್ಬೇಡ್ರಿ ಅಂತ ಖ್ಯಾತೆ ತೆಗೆದಿದ್ದಾರೆ. ಅಷ್ಟೇಕ್ಕೆ ಡಿಜೆ, ತಮಟೆ ಸೌಂಡ್ ಗೆ ಡ್ಯಾನ್ಸ್ ಮಾಡ್ತಿದ್ದ ರೌಡಿ ವಿನಯ್ ಅಂಡ್ ಟೀಂ ಏಕಾಏಕಿ ಚಾಕು, ಡ್ರ್ಯಾಗರ್ ನಿಂದ ಅಟ್ಯಾಕ್ ಮಾಡಿದ್ದಾರೆ. ಈ ವೇಳೆ ಶ್ರೀನಿವಾಸ್ ಹಾಗೂ ಆತನ ಸ್ನೇಹಿತ ಅಜಿತ್ ಮೇಲೆ ಹಲ್ಲೆ ಮಾಡಿದ್ದಾರೆ. ಇನ್ನು ಬಿಡಿಸೋಕೆ ಆಂತ ಬಂದ ಶ್ರೀನಿವಾಸ್ ತಾಯಿಯ ಮೇಲೂ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ಶ್ರೀನಿವಾಸ್ ಸ್ಥಳದಲ್ಲೇ ಸತ್ರೆ, ರಂಜಿತ್ ಹಾಗೂ ಶ್ರೀನಿವಾಸ್ ತಾಯಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಾ ಇದ್ದಾರೆ.

ಕಳೆದ 19ನೇ ತಾರೀಖು ಇದೇ ಕೊಲೆಯಾದ ಶ್ರೀನಿವಾಸ್ ತಮ್ಮ ಏರಿಯಾದಲ್ಲಿ ಗಣೇಶನನ್ನು ಕೂರಿಸಿದ್ದ. ಅವತ್ತು ಮೆರವಣಿಗೆ ಕೂಡ ಮಾಡಿದ್ದ. ತಮ್ಮ ಏರಿಯಾದಿಂದ ರೌಡಿಶೀಟರ್ ವಿನಯ್ ನ ಏರಿಯಾಗೆ ಹೋಗಿ ಡ್ಯಾನ್ಸ್ ಕೂಡ ಮಾಡಿದ್ದಾರೆ.‌ ಆಗ ರೌಡಿಶೀಟರ್ ವಿನಯ್ ಹಾಗೂ ಶ್ರೀನಿವಾಸ ಟೀಂ ನಡುವೆ ಜಗಳ ಆಗಿತ್ತು. ಆದ್ರೆ ಅದು ವಿಕೋಪಕ್ಕೆ‌ ಹೋಗಿರಲಿಲ್ಲ. ಆದ್ರೆ ಜಗಳ ಅಲ್ಲಿಗೆ ನಿಂತಿತ್ತು. ಇದಕ್ಕೆ ಮನಸಲ್ಲಿ ಇಟ್ಟುಕೊಂಡ ರೌಡಿಶೀಟರ್ ವಿನಯ್ ನಿನ್ನೆ ತನ್ನ ಏರಿಯಾದಲ್ಲಿ ಗಣೇಶನನ್ನು ಇಟ್ಟು ಮೆರವಣಿಗೆ ಮಾಡಿದ್ದಾನೆ. ಇನ್ನು ಇದೇ ವೇಳೆ ಶ್ರೀನಿವಾಸ್ ಅಂಡ್ ಟೀಂನ ನೋಡಿದ್ದೇ ಮುಂದೆ ಅವರ ಮುಂದೆ ಹೋಗಿ‌ ಕುಣಿದಿದ್ದು ಘಟನೆಗೆ ಕಾರಣ ಆಯ್ತು. ಇನ್ನು ಶ್ರೀನಿವಾಸ್ ಒಂದೂವರೆ ವರ್ಷದಿಂದ ಒಬ್ಬ ಹುಡುಗಿಯನ್ನು ಪ್ರೀತಿಸ್ತಾ ಇದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಇನ್ನು ಮಾಹಿತಿ ಬಂದ ಕೂಡಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಆಡುಗೋಡಿ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಘಟನೆ ಬಳಿಕ ನಾಪತ್ತೆಯಾಗಿದ್ದ ರೌಡಿಶೀಟರ್ ವಿನಯ್ ಹಾಗೂ ಆತನ ಸಹಚರರನ್ನ ವಶಕ್ಕೆ ಪಡೆದಿದ್ದಾರೆ. ಇನ್ನು ಮೃತ ಶ್ರೀನಿವಾಸ್ ಮರಣೋತ್ತರ ಪರೀಕ್ಷೆ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ನಡೆದಿದ್ದು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದು ವಶಕ್ಕೆ ಪಡೆದ ಆರೋಪಿಗಳನ್ನು ತೀವ್ರ ವಿಚಾರಣೆ ಮಾಡ್ತಾ ಇದ್ದಾರೆ.

The post Murder: ಡ್ಯಾನ್ಸ್ ವಿಚಾರಕ್ಕೆ ಇಬ್ಬರ ನಡುವೆ ಶುರುವಾದ ಜಗಳ : ಕೊನೆಗೆ ಆಗಿದ್ದೇನು ಗೊತ್ತಾ? appeared first on Ain Live News.

LEAVE A REPLY

Please enter your comment!
Please enter your name here