ನೆಲಮಂಗಲ ;- ತಾಲೂಕು ದಕ್ಷಿಣ ಕಾಶಿ ಶಿವಗಂಗೆ ಬೆಟ್ಟದ ತಪ್ಪಲಿನ ಮೈಥಿಲೇಶ್ವರ ದೇವಸ್ಥಾನ ದಲ್ಲಿ ಅಳಿಯ ಮಾವನನ್ನೇ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ನೆಡೆದಿದೆ
ತುಮಕೂರು ಜಿಲ್ಲೆ, ತುಮಕೂರು ತಾಲೂಕು ಕಲ್ಲಳ್ಳಿ ಕ್ರಾಸ್ ನಲ್ಲಿ ವಾಸವಾಗಿರುವ ಕುಮಾರ್ ಎಂಬಾತನಿಗೆ ಕೆಲ ದಿನಗಳ ಹಿಂದೆ ಮಗಳನ್ನು ಕೊಟ್ಟು ಮದುವೆ ಮಾಡಿದ ರಂಗಸ್ವಾಮಿ ವೃತ್ತಿಯಲ್ಲಿ ತೋಟಗಾರಿಕೆ ಇಲಾಖೆಯಲ್ಲಿ ಡ್ರೈವರ್ ಆಗಿ ಕೆಲಸ ಮಾಡಿ ಇತ್ತೀಚೆಗೆ ಕೆಲವು ವರ್ಷಗಳ ಹಿಂದೆ ನಿವೃತ್ತಿ ಆದಮೇಲೆ ದೇವಸ್ಥಾನದ ಕಾರ್ಯಗಳಲ್ಲಿ ತೊಡಗಿದರು ಅಳಿಯ ಕುಮಾರ್ ಹಲವು ದಿನಗಳಿಂದ ಹೆಂಡತಿ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಪ್ರತಿದಿನ ಮನೆಯಲ್ಲಿ ಕಿರುಕುಳ ಕೊಡುತ್ತಿದ್ದ ಮಗಳನ್ನು ಹೊಡೆದು ಆಚೆ ಹಾಕಿದ್ದ ಇದೇ ಕಾರಣಕ್ಕೆ ತಂದೆ ರಂಗಸ್ವಾಮಿಯ ಮಗಳನ್ನು ತಮ್ಮ ಮನೆಯಲ್ಲಿ ಇರುವಂತೆ ಹೇಳಿದ್ದರು ಮಗಳು ಬಂದು ಮೂರು ತಿಂಗಳಿಂದ ದಿನಾಲು ಹಲವಾರು ಬಾರಿ ಫೋನ್ ಮಾಡಿ ಹೆಂಡತಿಗೆ ಹಾಗೂ ಮಾವನಿಗೆ ಕುಮಾರ್ ಬೆದರಿಕೆ ಹಾಕುತ್ತಿದ್ದ ನಿನ್ನೆ ಕೂಡ ಫೋನ್ ಮಾಡಿ ನಿಮ್ಮನ್ನು ಸಾಯಿಸುವುದಾಗಿ ತಿಳಿಸಿದ್ದ
ರಂಗಸ್ವಾಮಯ್ಯ ಶಿವಗಂಗೆ ಬಳಿಯ ಮೈತಿಲ್ಲೇಶ್ವರ ದೇವಸ್ಥಾನದ ಸುಣ್ಣ ಬಣ್ಣ ಮಾಡುವುದರಲ್ಲಿ ಮೈಮರೆತು ದೇವಸ್ಥಾನದ ಕಾರ್ಯಗಳಲ್ಲಿ ತೊಡಗಿದ್ದರು ಸಂಜೆ ಸುಮಾರು ಐದರಿಂದ ಆರು ಗಂಟೆ ಸಮಯದಲ್ಲಿ ಅಳಿಯ ಕುಮಾರ ಹಿಂದೆಗಡೆಯಿಂದ ಬಂದು ಮಾವನಿಗೆ ಏಕಾಏಕಿ ಮಚ್ಚಿನಿಂದ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಶಿವಗಂಗೆ ಬೆಟ್ಟದ ಹತ್ತಿರ ದೇವಾಲಯದಲ್ಲಿ ಕೊಲೆ ಮಾಡಿದ್ದಾನೆ ಎಂದು ರಂಗಸ್ವಾಮಯ್ಯ ಮಗಳು ಆರೋಪಿಸಿದ್ದಾರೆ
ಇನ್ನು ಈ ಘಟನೆ ದಾಬಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನೆಡೆದಿದ್ದು ಸ್ಥಳಕ್ಕೆ DYSP ಜಗದೀಶ್ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ರವಿ ಭೇಟಿ ನೀಡಿ ಪರಿಶೀಲನೆ ನೆಡೆಸಿದ್ದಾರೆ ಪೋಲೀಸರ ತನಿಖೆ ಯಿಂದ ಕೊಲೆಗೆ ಕಾರಣ ಏನು ಎನ್ನುವ ಸತ್ಯಾಸತ್ಯತೆ ತಿಳಿಯಬೇಕಿದೆ.
The post Murder Case: ಮಚ್ಚಿನಿಂದ ಹೊಡೆದು ಮಾವನನ್ನೇ ಕೊಲೆ ಮಾಡಿದ ಅಳಿಯ appeared first on Ain Live News.