ಮೈಸೂರು ; ಸಿಎಂ ಸಿದ್ದರಾಮಯ್ಯ ಅವರ ಮೈಸೂರಿನ ಮನೆ ಮೇಲೆ ಕಲ್ಲು ತೂರಿದ ಆರೋಪಿಯನ್ನು ಕೊನೆಗೂ ಅರೆಸ್ಟ್ ಮಾಡಲಾಗಿದೆ.
ಸತ್ಯಮೂರ್ತಿ(48) ಬಂಧಿತ ಆರೋಪಿ. ಬೈಕ್ನಲ್ಲಿ ಸಿಎಂ ಮನೆ ಬಳಿ ಬಂದ ಸತ್ಯಮೂರ್ತಿ, ಚೀಲದಲ್ಲಿ ತುಂಬಿಕೊಂಡು ಬಂದಿದ್ದ ಕಲ್ಲುಗಳನ್ನು ಏಕಾಏಕಿ ಸಿಎಂ ಮನೆ ಮೇಲೆ ಎಸೆದಿದ್ದಾನೆ.
ಇದರಿಂದ ಕಿಟಕಿಯ ಗಾಜುಗಳು ಪುಡಿಯಾಗಿವೆ. ತಕ್ಷಣ ಮನೆಯ ಒಳ ಆವರಣದಲ್ಲಿದ್ದ ಪೊಲೀಸರು ಹೊರ ಬಂದು ತಡೆಯಲು ಯತ್ನಸಿದಾಗ ಅವರ ಮೇಲೂ ಕಲ್ಲೆಸೆದು ಬೈಕ್ನಲ್ಲಿ ಪರಾರಿಯಾಗಿದ್ದಾನೆ.
ವಿಷಯ ತಿಳಿದ ವಿಜಯನಗರ ಠಾಣೆ ಪೊಲೀಸರು ಹೂಟಗಳ್ಳಿ ರಿಂಗ್ ರಸ್ತೆ ಬಳಿ ಬೆನ್ನತ್ತಿ ಹಿಡಿಯಲು ಪ್ರಯತ್ನಿಸಿದಾಗ ಆರೋಪಿ, ಅವರ ಮೇಲೂ ಹಲ್ಲೆ ಮಾಡಲು ಮುಂದಾಗಿದ್ದಾನೆ. ನಂತರ ತಕ್ಷಣ ಪೊಲೀಸರು ಆತನನ್ನು ಸೆರೆ ಹಿಡಿದಿದ್ದಾರೆ
The post Mysore; ಸಿದ್ದರಾಮಯ್ಯ ಮನೆ ಮೇಲೆ ಕಲ್ಲು ತೂರಿದ ಆರೋಪಿ ಕೊನೆಗೂ ಅರೆಸ್ಟ್ appeared first on Ain Live News.