ಚಿಕ್ಕೋಡಿ :ವಿದ್ಯುತ್ ಕಡಿತ ಖಂಡಿಸಿ ಚಿಕ್ಕೋಡಿ ಉಪವಿಭಾಗದ ಕುಡಚಿ, ಯಲ್ಪಾರಟ್ಟಿ, ಹಿಡಕಲ್ ಹಾಗೂ ಅಥಣಿ ಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಸಾವಿರಾರು ರೈತರಿಂದ ಪ್ರತಿಭಟನೆ ಹಮ್ಮಿಕೊಳ್ಳಗಿತ್ತು. ರಾಯಭಾಗ ತಾಲೂಕಿನ ಯಾಲ್ಪರಟ್ಟಿ ಗ್ರಾಮದ ೩೩ ಕೆವಿ ವಿದ್ಯುತ್ ಕಚೇರಿ ಮುಂದೆ ಕುಡಚಿ ಮಾಜಿ ಶಾಸಕ ಪಿ ರಾಜೀವ ನೇತೃತ್ವದಲ್ಲಿ ಹೆಸ್ಕಾಂ ಕಚೇರಿ ಎದುರು ಟೈರ್ ಗೆ ಬೆಂಕಿ ಹಚ್ಚಿ ರಾಜ್ಯ ಸರ್ಕಾರದ ರೈತ ವಿರೋಧಿ ನಿತಿ ಖಂಡಿಸಿ ಸಮರ್ಪಕ ವಿದ್ಯುತ್ ನೀಡುವಂತೆ ಪಟ್ಟು ಹಿಡಿದರು.
Justin Trudeau: ಭಾರತದೊಂದಿಗಿನ ರಾಜತಾಂತ್ರಿಕ ಬಿಕ್ಕಟ್ಟು ಪ್ರಸ್ತಾವಿಸಿದ ಕೆನಡಾ ಪ್ರಧಾನಿ
ರಾಜ್ಯ ಸರ್ಕಾರ ಉತ್ತರನ ಪೌರುಷದಂತೆ ಮಾಡುತ್ತಿದೆ ಸರ್ಕಾರ ಗ್ಯಾರಂಟಿಗಳಿಗೆ ಜೋತು ಬಿದ್ದು ದಿವಾಳಿಯಾಗಿದೆ ಮಳೆಗಾಲದಲ್ಲೇ ಉತ್ತಮ ಕರೆಂಟ್ ಕೊಡುವ ಯೋಗ್ಯತೆ ಇಲ್ಲ ಅಂದ್ರೆ ನಾಚಿಕೆ ಯಾಗಬೇಕು. ಐದು ವರ್ಷ ವಿರೋಧಪಕ್ಷದಲ್ಲಿ ನಾವಿದ್ದೇವೆ ರಾಜ್ಯದ ಜನತೆಗೆ ಸಮಸ್ಯೆ ಆದ್ರೆ ನಾವು ಸರ್ಕಾರದ ಕಿವಿ ಹಿಂಡುತ್ತೇವೆ ರೈತರಿಗೆ ಸೂಕ್ತ ವಿದ್ಯುತ್ ವೆವಸ್ಥೆ ನೀಡದ ಸರ್ಕಾರಕ್ಕೆ ಇದು ಕಾಂಗ್ರೆಸ್ ಸರ್ಕಾರದ ೬ ನೆ ಗ್ಯಾರಂಟಿ ಕತ್ತಲು ಭಾಗ್ಯ ಎಂದು ವ್ಯಂಗ್ಯವಾಡಿದ್ದಾರೆ.
The post P Rajiv: ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿ ಅದು ಕತ್ತಲು ಭಾಗ್ಯ: ಪಿ ರಾಜೀವ್ ವ್ಯಂಗ್ಯ appeared first on Ain Live News.