Home Uncategorized Paresh Rawal: ಬೆಂಗಾಲಿಗಳನ್ನು ರೊಹಿಂಗ್ಯಾ ಮತ್ತು ಬಾಂಗ್ಲಾದೇಶಿಗಳಿಗೆ ಹೋಲಿಸಿ ಮಾತಾಡಿದ ನಟ ಪರೇಶ್​ ರಾವಲ್​

Paresh Rawal: ಬೆಂಗಾಲಿಗಳನ್ನು ರೊಹಿಂಗ್ಯಾ ಮತ್ತು ಬಾಂಗ್ಲಾದೇಶಿಗಳಿಗೆ ಹೋಲಿಸಿ ಮಾತಾಡಿದ ನಟ ಪರೇಶ್​ ರಾವಲ್​

23
0

ನಟ ಪರೇಶ್​ ರಾವಲ್​ (Paresh Rawal) ಅವರು ಬಾಲಿವುಡ್​ನಲ್ಲಿ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಸಿನಿಮಾಗಳಲ್ಲಿ ಅವರ ಹಾಸ್ಯ ದೃಶ್ಯಗಳನ್ನು ನೋಡಿ ಪ್ರೇಕ್ಷಕರು ಸಖತ್​ ಎಂಜಾಯ್​ ಮಾಡುತ್ತಾರೆ. ಆದರೆ ರಿಯಲ್​ ಲೈಫ್​ನಲ್ಲಿ ಪರೇಶ್​ ರಾವಲ್​ ಅವರು ಆಡಿದ ಕೆಲವು ಮಾತುಗಳು ವಿವಾದ ಸೃಷ್ಟಿ ಮಾಡಿವೆ. ಬೆಂಗಾಲಿ (Bengali) ಜನರನ್ನು ರೊಹಿಂಗ್ಯಾ ಮತ್ತು ಬಾಂಗ್ಲಾದೇಶಿಗರಿಗೆ ಸಮೀಕರಿಸಿ ಮಾತನಾಡಿದ್ದಾರೆ ಪರೇಶ್​ ರಾವಲ್​. ಗುಜರಾತ್​ನಲ್ಲಿ ಬಿಜೆಪಿ ಪರವಾಗಿ ಚುನಾವಣಾ (Gujarat Election) ಪ್ರಚಾರ ಮಾಡುವಾಗ ಅವರು ಈ ರೀತಿಯ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಗೆ ತೀವ್ರ ಟೀಕೆ ವ್ಯಕ್ತವಾದ ಬೆನ್ನಲ್ಲೇ ಅವರು ಕ್ಷಮೆ ಕೇಳಿದ್ದಾರೆ.

ಪರೇಶ್​ ರಾವಲ್​ ಹೇಳಿದ್ದೇನು?

‘ಗ್ಯಾಸ್​ ಸಿಲಿಂಡರ್​ ಬೆಲೆ ದುಬಾರಿ ಆಗಿದೆ. ಬೆಲೆ ಇಳಿಯುತ್ತದೆ. ಜನರಿಗೆ ಉದ್ಯೋಗವೂ ಸಿಗುತ್ತದೆ. ಆದರೆ ರೊಹಿಂಗ್ಯಾ ವಲಸಿಗರು ಮತ್ತು ಬಾಂಗ್ಲಾದೇಶಿಗಳು ದೆಹಲಿಯ ರೀತಿ ನಿಮ್ಮ ಅಕ್ಕ-ಪಕ್ಕ ವಾಸಿಸಲು ಆರಂಭಿಸಿದರೆ ಏನಾಗುತ್ತದೆ? ಸಿಲಿಂಡರ್​ ಇಟ್ಟುಕೊಂಡು ನೀವೇನು ಮಾಡುತ್ತೀರಿ? ಬೆಂಗಾಲಿಗಳಿಗಾಗಿ ಮೀನು ಬೇಯಿಸಿಕೊಡ್ತೀರಾ’ ಎಂದು ಪರೇಶ್​ ರಾವಲ್​ ಅವರು ಗುರುವಾರ (ಡಿ.1) ಹೇಳಿಕೆ ನೀಡಿದ್ದಾರೆ.

ಅರವಿಂದ್​ ಕೇಜ್ರಿವಾಲ್​ ಅವರನ್ನು ಟೀಕಿಸುವ ಭರದಲ್ಲಿ ಪರೇಶ್​ ರಾವಲ್​ ಅವರು ದೆಹಲಿ ಕುರಿತು ಈ ರೀತಿ ಹೇಳಿದ್ದಾರೆ. ಬೆಂಗಾಲಿ ಜನರನ್ನು ರೊಹಿಂಗ್ಯಾ ಮತ್ತು ಬಾಂಗ್ಲಾದೇಶಿಗರ ಜೊತೆ ಸಮೀಕರಿಸಿ ಮಾತನಾಡಿದ್ದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಅವರ ಮಾತುಗಳು ಜನರ ನಡುವೆ ದ್ವೇಷ ಭಾವನೆ ಬಿತ್ತುವಂತಿವೆ ಎಂದು ಹಲವರು ಕಿಡಿಕಾರಿದ್ದಾರೆ. ಬಳಿಕ ಪರೇಶ್​ ರಾವಲ್ ಅವರು ಟ್ವಿಟರ್​ ಮೂಲಕ ಕ್ಷಮೆ ಕೇಳಿದ್ದಾರೆ.

of course the fish is not the issue AS GUJARATIS DO COOK AND EAT FISH . BUT LET ME CLARIFY BY BENGALI I MEANT ILLEGAL BANGLA DESHI N ROHINGYA. BUT STILL IF I HAVE HURT YOUR FEELINGS AND SENTIMENTS I DO APOLOGISE. https://t.co/MQZ674wTzq

— Paresh Rawal (@SirPareshRawal) December 2, 2022

‘ಖಂಡಿತವಾಗಿ ಮೀನು ಇಲ್ಲಿನ ಸಮಸ್ಯೆ ಅಲ್ಲ. ಯಾಕೆಂದರೆ ಗುಜರಾತಿಗಳು ಕೂಡ ಮೀನು ತಿನ್ನುತ್ತಾರೆ. ನಾನು ಬೆಂಗಾಲಿ ಅಂತ ಹೇಳಿದ್ದು ಬಾಂಗ್ಲಾದೇಶಿಗರು ಮತ್ತು ರೊಂಹಿಗ್ಯಾ ಜನರಿಗೆ. ನಿಮ್ಮ ಭಾವನೆಗಳಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ’ ಎಂದು ಪರೇಶ್​ ರಾವಲ್​ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: Gujarat Election 2022: ಅಹಮದಾಬಾದ್​ನಲ್ಲಿ ಇಂದು ಬೃಹತ್ ರೋಡ್​ಶೋ ನಡೆಸಲಿರುವ ಪ್ರಧಾನಿ ಮೋದಿ

ಅರವಿಂದ್​ ಕೇಜ್ರಿವಾಲ್​ ಬಗ್ಗೆ ಪರೇಶ್​ ರಾವಲ್​ ಟೀಕೆ:

‘ಅವರು ಖಾಸಗಿ ವಿಮಾನದಲ್ಲಿ ಬರುತ್ತಾರೆ. ಇಲ್ಲಿ ಬಂದು ತೋರಿಕೆಗೆ ಆಟೋ ರಿಕ್ಷಾದಲ್ಲಿ ಕೂರುತ್ತಾರೆ. ನಾನು ನಟನೆಯಲ್ಲಿ ಜೀವಮಾನ ಕಳೆದಿದ್ದೇನೆ. ಆದರೆ ಹೀಗೆ ನಾಟಕ ಮಾಡುವವರನ್ನು ನಾನು ನೋಡಿಲ್ಲ’ ಎಂದು ಅರವಿಂದ್​ ಕೇಜ್ರಿವಾಲ್​ ಅವರನ್ನು ಪರೇಶ್​ ರಾವಲ್​ ಟೀಸಿದ್ದಾರೆ. ಅವರ ಹೇಳಿಕೆ ಕುರಿತು ಪರ-ವಿರೋಧ ಚರ್ಚೆ ಆಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

LEAVE A REPLY

Please enter your comment!
Please enter your name here