ಬೆಂಗಳೂರು: ರಾಜ್ಯ ಬಿಜೆಪಿ ವಕ್ತಾರರಾಗಿ ಪ್ರಕಾಶ್ ಶೇಷರಾಘವಚಾರ್ (Prakash Sesharaghavachar) ರವರನ್ನು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಅವರ ಜೊತೆ ಮೋಹನ್ ವಿಶ್ವರವರನ್ನು ಕೂಡಾ ವಕ್ತಾರರಾಗಿ ನೇಮಕ ಮಾಡಲಾಗಿದೆ.

ಕಳೆದ ಇಪ್ಪತೈದು ವರ್ಷದಿಂದ ಮಾಧ್ಯಮ ನಿರ್ವಹಣೆಯ ಅನುಭವವಿರುವ ಪ್ರಕಾಶ್ ರವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಪ್ರಚಾರದಲ್ಲಿ ಮಹತ್ವದ ಪಾತ್ರವಹಿಸಲಿದ್ದಾರೆ.