Home Uncategorized Pralhad Joshi: ಕಾಂಗ್ರೆಸ್ ಸರ್ಕಾರದಲ್ಲಿ ಜಾತಿ ಜಾತಿಗಳ ನಡುವೆ ಒಡೆದಾಳುವ ನೀತಿ ಇದೆ: ಪ್ರಲ್ಹಾದ್ ಜೋಶಿ

Pralhad Joshi: ಕಾಂಗ್ರೆಸ್ ಸರ್ಕಾರದಲ್ಲಿ ಜಾತಿ ಜಾತಿಗಳ ನಡುವೆ ಒಡೆದಾಳುವ ನೀತಿ ಇದೆ: ಪ್ರಲ್ಹಾದ್ ಜೋಶಿ

19
0

ಹುಬ್ಬಳ್ಳಿ: ಪ್ರಸ್ತುತ ಜಾತಿ ಜಾತಿಗಳ ನಡುವೆ ಒಡೆದಾಳುವ ನೀತಿ ಇದೆ. ಇದರೊಟ್ಟಿಗೆ ಕಾಂಗ್ರೇಸ್‌ ತುಷ್ಠೀಕರಣ ರಾಜಕಾರಣದ ಪರಾಕಾಷ್ಠೆಯನ್ನೇ ತಲುಪಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸರ್ಕಾರದ ವಿರುದ್ಧ ಹರಿಹಾಯ್ದರು. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲಿಂಗಾಯಿತರಿಗೆ ಕಾಂಗ್ರೆಸ್‌ ಸರ್ಕಾರದಲ್ಲಿ ಸರಿಯಾದ ಸ್ಥಾನ ಮಾನ ಸಿಗದ ವಿಚಾರ ಕುರಿತು ಪ್ರತಿಕ್ರಿಯೆ ನೀಡಿ, ಆ ಪಕ್ಷದ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪನವರೇ ಈ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. 

CP Yogeshwar; ಕಾಂಗ್ರೆಸ್ ಇಂದು ಬಹುಮತದಿಂದ ಅಧಿಕಾರಕ್ಕೆ ಬರಲು ನಮ್ಮ ಜಗಳ ಕಾರಣ – ಸಿ.ಪಿ.ಯೋಗೇಶ್ವರ್

ಅವರು ಸತ್ಯವನ್ನೇ ಹೇಳಿದ್ದಾರೆ, ಸರ್ಕಾರ ಈ ಕುರಿತು ಗಂಭಿರವಾಗಿ ಚಿಂತಿಸಬೇಕಿದೆ ಎಂದು ಹೇಳಿದರು. ಇನ್ನು, ಕಾಂಗ್ರೆಸ್‌ನ ತುಷ್ಠೀಕರಣದಿಂದಾಗಿ ಮತಾಂಧ ಶಕ್ತಿಗಳಿಗೆ ‘ನಮಗೆ ರಕ್ಷಣೆ ಇದೆ’ಎನ್ನುವ ಮನೋಭಾವನೆ ಬೆಳೆದಿದೆ ಎಂದರಲ್ಲದೆ, ಬರೀ ಅಲ್ಪಸಂಖ್ಯಾತರಷ್ಟೇ ಮತ ಹಾಕಿದ್ದಾರೆ ಎಂದು ಕಾಂಗ್ರೆಸ್ಸಿಗರು ಭಾವಿಸಿದಂತಿದೆ. ಇವರು ದೇಶದ್ರೋಹಿ ಗಳ, ಗಲಭೆಕೋರರ ಪರ ನಿಲ್ಲುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದರು.

 

The post Pralhad Joshi: ಕಾಂಗ್ರೆಸ್ ಸರ್ಕಾರದಲ್ಲಿ ಜಾತಿ ಜಾತಿಗಳ ನಡುವೆ ಒಡೆದಾಳುವ ನೀತಿ ಇದೆ: ಪ್ರಲ್ಹಾದ್ ಜೋಶಿ appeared first on Ain Live News.

LEAVE A REPLY

Please enter your comment!
Please enter your name here