ಬೆಂಗಳೂರು:
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಿಬಿಎಂಪಿಯ ಆಡಳಿತ ವ್ಯವಸ್ಥೆಯನ್ನು ಸಮರ್ಪಕಗೊಳಿಸುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ಮಾಡುತ್ತಿದೆಯೇನೋ ಎನ್ನುವಂತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ರಾಜರಾಜೇಶ್ವರಿ ನಗರ ವಲಯದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಲ್ಲಿ ಭಾಗಿಯಾದ ಅಧಿಕಾರಿಗಳ ಹೆಡೆಮುರಿ ಕಟ್ಟುವ ಕೆಲಸ ನಡೆದಿದೆ. ಇದರ ಪರಿಣಾಮ ಎನ್ನುವಂತೆ ಬಿಬಿಎಂಪಿಯ ಇತಿಹಾಸದಲ್ಲಿ ಇದೆ ಮೊದಲ ಬಾರಿಗೆ 8 ಅಧಿಕಾರಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಆರ್ ಆರ್ ನಗರದಲ್ಲಿ ನಡೆದಿದೆ ಎನ್ನಲಾದಂತ ಅಕ್ರಮ ಕಾಮಗಾರಿಗಳಿಗೆ ಸಂಬಂಧಪಟ್ಟಂತೆ ಸಂಸದ ಡಿಕೆ ಸುರೇಶ ರವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈಗ ತನಿಖೆ ಸಂಪೂರ್ಣಗೊಂಡಿದ್ದು ತನಿಕೆಯಲ್ಲಿ ಬಿಬಿಎಂಪಿ 8 ಅಧಿಕಾರಿಗಳು ಅಕ್ರಮ ಎಸೆದಿರುವುದು ಸಾಬೀತಾಗಿದೆ ಈ ಹಿನ್ನಲೆಯಲ್ಲಿ ಆ 8 ಅಧಿಕಾರಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

ಲೋಕಾಯುಕ್ತಕ್ಕೆ ದೂರು ನೀಡುವ ಸಂದರ್ಭದಲ್ಲಿ ಡಿಕೆ ಸುರೇಶ್ ರವರು ಆರ್ ಆರ್ ನಗರದಲ್ಲಿ 118 ಕೋಟಿಗಳಿಗೂ ಹೆಚ್ಚಿನ ಮತದ ಅಕ್ರಮ ನಡೆದಿದೆ ಎಂದು ಆಪಾದಿಸಿದ್ದರು.ಅಲ್ಲದೆ kridl ಗೆ ವಹಿಸಿರುವ ಕಾಮಗಾರಿಗಳಲ್ಲಿ ಸಂಪೂರ್ಣವಾಗಿ ಅಕ್ರಮ ನಡೆದಿದೆ .ಇದು ಬಹಿರಂಗವಾಗದಂತೆ ಸಾಕ್ಷಿ ನಾಶ ಹಾಗೂ ದಾಖಲೆಗಳ ನಾಶ ಕಡತಗಳ ತಿದ್ದುಪಡಿ ಮತ್ತು ತಿರುಚುವಿಕೆ ನಡೆದಿದೆ ಎಂದು ಕೂಡ ಆಪಾದಿಸಿದ್ದರು. ಈ ಗಂಭೀರ ಆಪಾದನೆಯ ಹಿನ್ನೆಲೆಯಲ್ಲಿ ತನಿಖೆ ಕೈಗೆತ್ತಿಕೊಂಡ ಲೋಕಾಯುಕ್ತ ಅಂತಿಮವಾಗಿ ತನ್ನ ವರದಿಯನ್ನು ಸಲ್ಲಿಸಿದ್ದು ಈ ವರದಿಯಲ್ಲಿ ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಲೋಕಾಯುಕ್ತ ವರದಿ ಹಿನ್ನೆಲೆಯಲ್ಲಿ 8 ಅಧಿಕಾರಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಅಂದಹಾಗೆ ಅಮಾನತು ಗೊಂಡಿರುವಂತ ಅಧಿಕಾರಿಗಳ ಪಟ್ಟಿಯನ್ನು ನೋಡುವುದಾದರೆ ಅಧಿಕಾರಿಗಳ ಹೆಸರು ಇಂತಿದೆ.
ದೊಡ್ಡಯ್ಯ ಮುಖ್ಯ ಅಭಿಯಂತರರು ಟಿ ವಿ ಸಿ ಸಿ, ಕುಮಾರ್ ಸಹಾಯಕ ಅಭಿಯಂತರರು ಟಿವಿಸಿಸಿ ಕೋಶ, ಬಸವರಾಜ್ ಪ್ರಭಾರ ಕಾರ್ಯಪಾಲಕ ಅಭಿಯಂತರರು, ಸಿದ್ದರಾಮಯ್ಯ ಸಹಾಯಕ ಅಭಿಯಂತರರು,ಉಮೇಶ್ ಸಹಾಯಕ ಅಭಿಯಂತರು ಶ್ರೀನಿವಾಸ್ ಕಾರ್ಯಪಾಲಕ ಅಭಿಯಂತರರು, ಶ್ರೀಮತಿ ವೆಂಕಟಲಕ್ಷ್ಮಿ, ಶ್ರೀತೇಜು ಸಹಾಯಕ ಕಾರ್ಯ ಪಾಲಕ ಅಭಿಯಂತರರು, ಅಮಾನತುಕೊಂಡಿರುವ ಅಧಿಕಾರಿಗಳಾಗಿದ್ದಾರೆ.
UDD-23-MNU-2022-P5-G-O-Date-14.6.2023ಅಂದ್ಹಾಗೆ ಬಿಬಿಎಂಪಿ ಯಿಂದ ಕೆ ಆರ್ ಐ ಡಿ ಎಲ್ ಗೆ ವಹಿಸಿದ್ದ ಕಾಮಗಾರಿಗಳನ್ನು ಅನುಷ್ಠಾನಕ್ಕೆ ತರದೆ ಅಕ್ರಮವಾಗಿ 250 ಕೋಟಿ ಕಾಮಗಾರಿ ನಡೆದಿದೆ ಎಂದು ಬಿಲ್ಲುಗಳನ್ನು ಸೃಷ್ಟಿಸಲಾಗಿದೆ ಎಂದು ಆಪಾದಿಸಿದ್ದ ಡಿಕೆ ಸುರೇಶ್ ಇದೆಲ್ಲದರ ಹಿಂದೆ ಕ್ಷೇತ್ರ ಶಾಸಕರ ಕೈವಾಡ ಇದೆ ಅಧಿಕಾರಿಗಳನ್ನು ಹೆದರಿಸಿ ಬದರಿಸಿ ಅವರಿಂದ ಬಿಲ್ ಗಳನ್ನ ಮಂಜೂರು ಮಾಡಿಸಿದ್ದಾರೆ ಎನ್ನುವ ಗಂಭೀರ ಆಪಾದನೆಯನ್ನು ಕೂಡ ಮಾಡಿದ್ದರು.
ಈ ಆಪಾದನೆಯ ಹಿನ್ನೆಲೆಯಲ್ಲಿ ಲೋಕಾಯುಕ್ತ ತನಿಖೆ ಕೈಗೆತ್ತಿಕೊಂಡು ಸಲ್ಲಿಸಿದ ವರದಿಯಲ್ಲಿ 8 ಅಧಿಕಾರಿಗಳ ಅಕ್ರಮ ಪತ್ತೆಯಾಗಿದೆ.ಬಹುಷ್ಯ ಬಿಬಿಎಂಪಿ ಇತಿಹಾಸದಲ್ಲಿ ಒಂ ಎಂದು ಆಪಾದಿಸಿದ್ದ ಡಿಕೆ ಸುರೇಶ್ ಇದೆಲ್ಲದರ ಹಿಂದೆ ಕ್ಷೇತ್ರ ಶಾಸಕರ ಕೈವಾಡ ಇದೆ ಅಧಿಕಾರಿಗಳನ್ನು ಹೆದರಿಸಿ ಬದರಿಸಿ ಅವರಿಂದ ಬಿಲ್ ಗಳನ್ನ ಮಂಜೂರು ಮಾಡಿಸಿದ್ದಾರೆ ಎನ್ನುವ ಗಂಭೀರ ಆಪಾದನೆಯನ್ನು ಕೂಡ ಮಾಡಿದ್ದರು.
ಈ ಆಪಾದನೆಯ ಹಿನ್ನೆಲೆಯಲ್ಲಿ ಲೋಕಾಯುಕ್ತ ತನಿಖೆ ಕೈಗೆತ್ತಿಕೊಂಡು ಸಲ್ಲಿಸಿದ ವರದಿಯಲ್ಲಿ 8 ಅಧಿಕಾರಿಗಳ ಅಕ್ರಮ ಪತ್ತೆಯಾಗಿದೆ ಬಹುಷ್ಯ ಬಿಬಿಎಂಪಿ ಇತಿಹಾಸದಲ್ಲಿ ಒಂದೇ ಬಾರಿಗೆ ಇಷ್ಟೊಂದು ಅಧಿಕಾರಿಗಳು ಅಮಾನತ್ತಾದಂತಹ ಉದಾಹರಣೆ ದೇ ಬಾರಿಗೆ ಇಷ್ಟೊಂದು ಅಧಿಕಾರಿಗಳು ಅಮಾನತ್ತಾದಂಥ ಉದಾಹರಣೆಗಳೇ ಇಲ್ಲ ಎನಿಸುತ್ತೆ.