ಬೆಂಗಳೂರು:- ಕನಕಪುರ ಬೆಂಗಳೂರಿಗೆ ಸೇರ್ಪಡೆ ವಿಚಾರವಾಗಿ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,225 ಸ್ಕ್ವಯರ್ ಫೀಡ್ ಇದ್ದಂತಹ ಬೆಂಗಳೂರಿಗೆ 100 ಹಳ್ಳಿ ಸೇರಿಸಿದ್ದರು. ಆ ಹಳ್ಳಿಗಳಲ್ಲಿ ಅಭಿವೃದ್ಧಿಯೇ ಆಗಿಲ್ಲ, ಈ ಬಗ್ಗೆ ಬಿಜೆಪಿಯವರು ಉತ್ತರ ಕೊಡಬೇಕು. ನಾನು 8 ಭಾರೀ ಶಾಸಕನಾಗಿದ್ದೇನೆ. ಬೆಂಗಳೂರು ಸುತ್ತಲೂ ಅಭಿವೃದ್ಧಿಯಾಗ ಏರಿಯಾ ಸೇರಿಸಿಕೊಳ್ಳಲು ಯಾವುದೇ ಅಭ್ಯಂತರ ಇಲ್ಲ ಎಂದಿದ್ದಾರೆ.
ಕನಕಪುರ ಬೆಂಗಳೂರಿಗೆ ಸೇರ್ಪಡೆಯಾದರೆ ಟ್ರಾಫಿಕ್, ಉದ್ಯೋಗ ಸಮಸ್ಯೆ ಉಲ್ಬಣಿಸೊಲ್ವಾ ಎಂಬ ಪ್ರಶ್ನೆಗೆ
ಅದನ್ನೆಲ್ಲ ಡಿ.ಕೆ ಶಿವಕುಮಾರ್ ಅವರನ್ನು ಕೇಳಿ ಎಂದರು. ನನಗೆ ಅವರ ಯಾವ ರೀತಿಯಲ್ಲಿ ಹೇಳಿದ್ದಾರೆ ಎಂಬ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.