ಶಿವಮೊಗ್ಗ: ಈ ಬಾರಿಯ ಚುನಾವಣೆಯಲ್ಲಿಯೂ ಪ್ರಧಾನಿ ಮೋದಿ ಭಾವಚಿತ್ರವನ್ನು ತೆಗೆದುಕೊಂಡು ಹೋದರೆ ಅವು ಮತವಾಗಿ ಪರಿವರ್ತನೆಯಾಗುತ್ತಾ? ಎಂದು ಹೊನ್ನಾಳಿ ಮಾಜಿ ಶಾಸಕ ರೇಣುಕಾಚಾರ್ಯ ಪ್ರಶ್ನೆ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ರೇಣುಕಾಚಾರ್ಯ ಅವರು, ” ಯಡಿಯೂರಪ್ಪ ಅವರ ಮಾತು ಮೀರಿ ರಬ್ಬರ್ ಸ್ಟಾಂಪ್ ರಾಜ್ಯಾಧ್ಯಕ್ಷನನ್ನಾಗಿ ಮಾಡಲಾಗಿದೆ. ದೆಹಲಿಗೆ ಕುಮಾರಸ್ವಾಮಿ ಹೋದರೆ ಎಷ್ಟು ಆರಾಮಾಗಿ ಭೇಟಿ ಅವಕಾಶ ಕೊಡುತ್ತಾರೆ. ಆದರೆ, ಯಡಿಯೂರಪ್ಪ ಅವರ ಜೊತೆ ನಡೆದುಕೊಂಡ ರೀತಿಯಾವ ತರ ಇತ್ತು? ” ಎಂದು ಬಿಜೆಪಿ ಹೈಕಾಂಡ್ಗೆ ಪ್ರಶ್ನೆ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ನಮಗೆ ಗೌರವವಿದೆ. ಮೋದಿ ಭಾವಚಿತ್ರ ಇಟ್ಕೊಂಡರೆ ಮತಗಳಾಗಿ ಪರಿವರ್ತನೆ ಆಗುತ್ತಾ? ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂಬ ಆಸೆ ನಮಗೆ ಇದೆ. ಆದರೆ ಮತಗಳನ್ನ ಕರ್ನಾಟಕದಲ್ಲಿ ತಂದು ಕೊಡುವ ಶಕ್ತಿ ಬಿಎಸ್ ಯಡಿಯೂರಪ್ಪನವರಿಗೆ ಮಾತ್ರ ಇದೆ. ನಾನೇನೂ ಮೋದಿ ವಿರುದ್ಧ ಇಲ್ಲ ಎಂದು ತಿಳಿಸಿದರು.
Iphone 15 Bigg Update: ಐಫೋನ್ 15 ಸೀರೀಸ್ ಬಳಕೆದಾರರಿಗೆ ಬಿಗ್ ಅಪೆ ಡೇಟ್: ಏನಂತೀರಾ?!
ಬಿಜೆಪಿ ಹಾಲಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಬಗ್ಗೆ ನಮಗೆ ಗೌರವಿದೆ. ಯಾರೂ ಅವರ ವಿರುದ್ಧ ಕೂಗಾಡಿಲ್ಲ. ಬಿಎಸ್ ಯಡಿಯೂರಪ್ಪನವರಂತಹ ನಾಯಕರು ಮತ್ತೆ ಕರ್ನಾಟಕದಲ್ಲಿ ಹುಟ್ಟಲು ಸಾಧ್ಯವಿಲ್ಲ. ದಕ್ಷಿಣ ಭಾರದಲ್ಲಿ ಬಿಜೆಪಿ ಮೊದಲ ಸರ್ಕಾರ ತಂದ ಕೀರ್ತಿ ಅವರದ್ದು. ಆದರೆ, ಯಡಿಯೂರಪ್ಪ ಅವರ ಮಾತು ಮೀರಿ ರಬ್ಬರ್ ಸ್ಟಾಂಪ್ ರಾಜ್ಯಾಧ್ಯಕ್ಷನನ್ನಾಗಿ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
The post Renukacharya: ಮೋದಿ ಭಾವಚಿತ್ರ ಇಟ್ಕೊಂಡರೆ ಮತಗಳಾಗಿ ಪರಿವರ್ತನೆ ಆಗುತ್ತಾ?: ರೇಣುಕಾಚಾರ್ಯ ಪ್ರಶ್ನೆ appeared first on Ain Live News.