Home Uncategorized Satish Jarakiholi; ಬರ ಪರಿಸ್ಥಿತಿ ಬಗ್ಗೆ ಬಿಜೆಪಿ ನಾಯಕರ ಆರೋಪಕ್ಕೆ ಸಚಿವ ಸತೀಶ್ ಜಾರಕಿಹೊಳಿ ತಿರುಗೇಟು

Satish Jarakiholi; ಬರ ಪರಿಸ್ಥಿತಿ ಬಗ್ಗೆ ಬಿಜೆಪಿ ನಾಯಕರ ಆರೋಪಕ್ಕೆ ಸಚಿವ ಸತೀಶ್ ಜಾರಕಿಹೊಳಿ ತಿರುಗೇಟು

16
0

ಚಿಕ್ಕೋಡಿ;- ಬರ ಪರಿಸ್ಥಿತಿ ಬಗ್ಗೆ ಬಿಜೆಪಿ ನಾಯಕರ ಆರೋಪಕ್ಕೆ ಸಚಿವ ಸತೀಶ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ.

ಈ ಸಂಬಂಧ ಮಾತನಾಡಿದ ಅವರು,ಈಗಾಗಲೇ ರಾಯಬಾಗ, ಸವದತ್ತಿ ತಾಲೂಕಿನಲ್ಲಿ ಸಭೆ ಮಾಡಿದ್ದೇನೆ. ಶೀಘ್ರವೇ ಶಾಸಕರ ಜೊತೆ ಮಾತನಾಡಿ ದಿನಾಂಕ ನಿಗದಿಪಡಿಸಿ ಚಿಕ್ಕೋಡಿಯಲ್ಲಿಯೂ ಸಭೆ ಮಾಡುತ್ತೇನೆ ಎಂದರು.

ಕೇಂದ್ರ ಬರ ಅಧ್ಯಯನ ತಂಡ ಚಿಕ್ಕೋಡಿ ಉಪವಿಭಾಗಕ್ಕೆ ಭೇಟಿ ನೀಡದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈಗಾಗಲೇ ಬರಪೀಡಿತ ತಾಲೂಕುಗಳ ಘೋಷಣೆಯಾಗಿದೆ, ಇಲ್ಲಿ ಬರಬೇಕು ಅಂತೇನಿಲ್ಲ. ಬರ ಅಧ್ಯಯನ ತಂಡ 194 ತಾಲೂಕುಗಳಿಗೂ ಹೋಗಲ್ಲ, ರಾಂಡಮ್ ಆಗಿ ಚೆಕ್ ಮಾಡ್ತಾರೆ. ಲಿಮಿಟೆಡ್ ಎಂಟರಿಂದ ಹತ್ತು ಜಿಲ್ಲೆಗಳಲ್ಲಿ ಬರ ಅಧ್ಯಯನ ತಂಡ ಹೋಗಿದೆ. ಬರದೇ ಹೋದ್ರೆ ತಾರತಮ್ಯ ಅಂತೇನಿಲ್ಲ, ಗೋಕಾಕ್, ಮೂಡಲಗಿಗೂ ಬಂದಿಲ್ಲ. ಅದಕ್ಕೂ ಇದಕ್ಕೂ ಲಿಂಕ್ ಮಾಡೋದು ಅವಶ್ಯಕತೆ ಇಲ್ಲ. ಬರ ಘೋಷಣೆ ಮಾಡಿದ್ದು ಅದರ ಲಾಭ ಏನು ಸಿಗಬೇಕು ಇಲ್ಲೂ ಸಿಗುತ್ತೆ ಎಂದರು.

ಕೇಂದ್ರ ಬರ ಅಧ್ಯಯನ ತಂಡಕ್ಕೆ ಬರ ಪರಿಸ್ಥಿತಿ ಮನವರಿಕೆ ಮಾಡುವಲ್ಲಿ ಸರ್ಕಾರ ವಿಫಲ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

The post Satish Jarakiholi; ಬರ ಪರಿಸ್ಥಿತಿ ಬಗ್ಗೆ ಬಿಜೆಪಿ ನಾಯಕರ ಆರೋಪಕ್ಕೆ ಸಚಿವ ಸತೀಶ್ ಜಾರಕಿಹೊಳಿ ತಿರುಗೇಟು appeared first on Ain Live News.

LEAVE A REPLY

Please enter your comment!
Please enter your name here