Home Uncategorized Shivamoga: ರಾಗಿಗುಡ್ಡದಲ್ಲಿ ನಡೆದ ಕಲ್ಲು ತೂರಾಟ: ಮೂವರು ಸಿಬ್ಬಂದಿ ಅಮಾನತು

Shivamoga: ರಾಗಿಗುಡ್ಡದಲ್ಲಿ ನಡೆದ ಕಲ್ಲು ತೂರಾಟ: ಮೂವರು ಸಿಬ್ಬಂದಿ ಅಮಾನತು

16
0

ಶಿವಮೊಗ್ಗ: ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಕಲ್ಲು ತೂರಾಟದ ಘಟನೆಗೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಆಧಾರದ ಮೇಲೆ ಒರ್ವ ಇನ್​ಸ್ಪೆಕ್ಟರ್​ ಹಾಗೂ ಮೂವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.  ಇಲ್ಲಿವರೆಗೂ ರಾಗಿಗುಡ್ಡದ ಪ್ರಕರಣದಲ್ಲಿ ನಡೆದಿದ್ದೇನು ಎಂಬುದು ಗೊತ್ತಾಗಿಲ್ಲ! ಕಾರಣ ಹೇಳಲು ಆಗದ ಇಲಾಖೆ ಇದೀಗ ಪೊಲೀಸ್ ಇಲಾಖೆಯಲ್ಲಿ  ಉತ್ತಮ ತನಿಖಾಧಿಕಾರಿ ಎನಿಸಿಕೊಂಡಿರುವ ಅಭಯ್ ಪ್ರಕಾಶ್ ಸೋಮನಾಳ್​ರನ್ನ ಸಸ್ಪೆಂಡ್ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

CP Yogeshwar; ಕಾಂಗ್ರೆಸ್ ಇಂದು ಬಹುಮತದಿಂದ ಅಧಿಕಾರಕ್ಕೆ ಬರಲು ನಮ್ಮ ಜಗಳ ಕಾರಣ – ಸಿ.ಪಿ.ಯೋಗೇಶ್ವರ್

ಈ ಹಿಂದಿನ ಹಲವು ಗಲಾಟೆಗಳ ಪ್ರಕರಣದಲ್ಲಿ ನಡೆದ ತಲೆದಂಡಗಳು ಅಷ್ಟೆಕಷ್ಟೆ. ರಾಗಿಗುಡ್ಡದ ಪ್ರಕರಣದಲ್ಲಿ  ಅಭಯ್ ಪ್ರಕಾಶ್​ರವರ ತಲೆದಂಡ ನಡೆಯುತ್ತಿರುವುದರ ಹಿಂದೆ ಅನುಮಾನಗಳು ಹುಟ್ಟಿಕೊಳ್ಳುತ್ತಿದೆ. ಈ ಬಗ್ಗೆ ಚರ್ಚೆಯು ಆರಂಭವಾಗಿದೆ.  ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಪಿಐ ಮತ್ತು ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಿ ದಾವಣಗೆರೆ ಪೂರ್ವವಲಯ ಐಜಿಪಿ ತ್ಯಾಗರಾಜನ್ ಆದೇಶ ಹೊರಡಿಸಿದ್ದಾರೆ.ಆದೇಶದ ಬಗ್ಗೆಯೇ ರೆಕ್ಕೆಪುಕ್ಕಗಳು ಕಟ್ಟಿಕೊಳ್ಳುತ್ತಿದೆ..

The post Shivamoga: ರಾಗಿಗುಡ್ಡದಲ್ಲಿ ನಡೆದ ಕಲ್ಲು ತೂರಾಟ: ಮೂವರು ಸಿಬ್ಬಂದಿ ಅಮಾನತು appeared first on Ain Live News.

LEAVE A REPLY

Please enter your comment!
Please enter your name here