ದಾವಣಗೆರೆ : ಎಲ್ಲಿಂದಲೋ ಬಂದ ಕಾಳಪ್ಪ, ಬೋಳಪ್ಪ, ಮಲ್ಲಪ್ಪರಿಗೆ ಲೋಕಸಭಾ ಟಿಕೆಟ್ ಇಲ್ಲ. ಯಾರು ಏನು ಅಂತ ಮೊದಲು ಗೊತ್ತಾಗಬೇಕು. ಎಲ್ಲರೂ ಕಾರ್ಯಕರ್ತರೇ, ಮೊದಲು ಕಾಂಗ್ರೆಸ್ ಕಾರ್ಯಕರ್ತರಿಗೆ ಪ್ರಾಮುಖ್ಯತೆ ನೀಡಲಾಗುವುದು ಎಂದು ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ಹೇಳಿದ್ದಾರೆ. ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಕಾಂಗ್ರೆಸ್ಗೆ ಬರಲಿದ್ದಾರೆ ಎಂಬ ಚರ್ಚೆ ಶುರುವಾದ ಬಳಿಕ ಎಸ್ಎಸ್ ಮಲ್ಲಿಕಾರ್ಜುನ ಈ ಹೇಳಿಕೆ ನೀಡಿರುವುದು ಕುತೂಹಲ ಕೆರಳಿಸಿದೆ.
Home remedies: ಚಳಿಗಾಲದಲ್ಲಿ ಕಿವಿ ನೋವು ನಿವಾರಿಸಲು ಇಲ್ಲಿದೆ ಮನೆಮದ್ದು!
ಲೋಕಸಭೆ ಚುನಾವಣೆ ಟಿಕೆಟ್ ಯಾರಿಗೆ ಎಂಬ ವಿಚಾರಕ್ಕೆ ದಾವಣಗೆರೆಯಲ್ಲಿ ಪ್ರತಿಕ್ರಿಯಿಸಿದ ಅವರು, ಬಾವುಟ ಹಿಡಿದು, ಪೋಸ್ಟರ್ ಅಂಟಿಸಿ, ಎಲೆಕ್ಷನ್ ಮಾಡಿದವರಿಗೆ ಮೊದಲ ಆದ್ಯತೆ ನೀಡಲಾಗುವುದು. ಎಲ್ಲಿಂದಲೋ ಬಂದರೆ ಆಗುವುದಿಲ್ಲ. ಮೊದಲು ಜಿಲ್ಲಾಧ್ಯಕ್ಷರು, ಬ್ಲಾಕ್ ಅಧ್ಯಕ್ಷರ ಜೊತೆ ಮಾತಾಡಬೇಕು, ಆಮೇಲೆ ಹೈ ಕಮಾಂಡ್ ಯಾರಿಗೆ ಕೊಡತ್ತೋ ಅವರು ಸ್ಪರ್ಧೆ ಮಾಡಲಿ ಎಂದರು. ಆದರೆ, ಎಲ್ಲಿಂದಲೋ ಬಂದು ನಾನು ಆಕಾಂಕ್ಷಿ ಎಂದರೆ ಇಲ್ಲಿ ನಡೆಯಲ್ಲ ಎನ್ನುವ ಮೂಲಕ ತಾನು ಕಾಂಗ್ರೆಟ್ ಎಂಪಿ ಟಿಕೆಟ್ ಆಕಾಂಕ್ಷಿ ಎಂದು ಓಡಾಡುತ್ತಿರುವವರಿಗೆ ಎಸ್ ಎಸ್ ಮಲ್ಲಿಕಾರ್ಜುನ್ ಖಡಕ್ ವಾರ್ನ್ ಮಾಡಿದರು.
The post SS Mallikarjun: ಬಾವುಟ ಹಿಡಿದು, ಪೋಸ್ಟರ್ ಅಂಟಿಸಿ, ಎಲೆಕ್ಷನ್ ಮಾಡಿದವರಿಗೆ ಮೊದಲ ಆದ್ಯತೆ: ಎಸ್ಎಸ್ ಮಲ್ಲಿಕಾರ್ಜುನ್ appeared first on Ain Live News.