ಬೆಂಗಳೂರು;- ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಕತ್ತಲೆಯ ದಿನ ಬರಲಿವೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ರೈತರಿಗೆ ವಿದ್ಯುತ್ ಕೊಡಲಾಗದಷ್ಟು ಅಸಮರ್ಪಕವಾಗಿ ನಿರ್ವಹಣೆ ಮಾಡಲಾಗುತ್ತಿದೆ. ಸಂಪೂರ್ಣ ಲೋಡ್ ಶೆಡ್ಡಿಂಗ್ ಮಾಡಲಾಗ್ತಿದೆ. ಸರ್ಕಾರ ಈ ಮೊದಲೇ ಎಚ್ಚೆತ್ತುಕೊಳ್ಳಲಿಲ್ಲ. ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಕತ್ತಲೆಯ ದಿನಗಳು ಬರಲಿವೆ. ಲೋಡ್ ಶೆಡ್ಡಿಂಗ್ ವಾತಾವರಣ ಕಳೆದ ಹತ್ತು ವರ್ಷಗಳಿಂದ ಇರಲಿಲ್ಲ. ಆದ್ರೆ ಮುಂದಿನ ದಿನಗಳಲ್ಲಿ ಸಮಸ್ಯೆ ಎದುರಾಗಲಿದೆ ಎಂದರು
ಕಳೆದ ತಿಂಗಳೇ ನಾನು ಸುದ್ದಿಗೋಷ್ಟಿ ನಡೆಸಿ ರಾಜ್ಯಕ್ಕೆ ಕತ್ತಲೆ ಭಾಗ್ಯ ಬರಲಿದೆ ಎಂದು ತಿಳಿಸಿದ್ದೆ. ಅದು ಈಗ ನಿಜವಾಗ್ತಿದೆ. ರೈತರಿಗೆ ಒಂದು ಗಂಟೆಯೂ ವಿದ್ಯುತ್ ಕೊಡದೇ ಅಸಮರ್ಪಕ ನಿರ್ವಹಣೆ ಮಾಡಲಾಗುತ್ತಿದೆ. ಡಿಸೆಂಬರ್, ಜನವರಿ ಹೊತ್ತಿಗೆ ಎಸ್ಕಾಂಗಳ ನೌಕರರಿಗೆ ವೇತನಕ್ಕೂ ಸಮಸ್ಯೆ ಆಗಲಿದೆ. ವಿದ್ಯುತ್ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರೈತರಿಗೆ ಏಳು ಗಂಟೆ ವಿದ್ಯುತ್ ಕೊಡಬೇಕು ಎಂದು ಇದೇ ವೇಳೆ ಅವರು ಆಗ್ರಹಿಸಿದರು.
The post Sunil Kumar; ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಕತ್ತಲೆಯ ದಿನ ಬರಲಿವೆ – ಸುನಿಲ್ ಕುಮಾರ್ appeared first on Ain Live News.