2026ರ ಟಿ20 ವಿಶ್ವಕಪ್ನ ಸೆಮಿಫೈನಲ್ನಲ್ಲಿ ಭಾರತ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡ ನಂತರ ಪಾಕಿಸ್ತಾನದ ಮಾಜಿ ವೇಗಿ ಮೊಹಮ್ಮದ್ ಅಮೀರ್ ಭಾರಿ ಟ್ರೋಲಿಂಗ್ಗೆ ಒಳಗಾದರು. ಮಾರ್ಚ್ 1ರಂದು ಭಾನುವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆದ ಸೂಪರ್ 8 ಪಂದ್ಯದಲ್ಲಿ ಭಾರತ ತಂಡವು ವೆಸ್ಟ್ ಇಂಡೀಸ್ ಅನ್ನು ಐದು ವಿಕೆಟ್ಗಳಿಂದ ಸೋಲಿಸಿತು. ನಾಲ್ಕು ಎಸೆತಗಳು ಬಾಕಿ ಇರುವಾಗಲೇ 196 ರನ್ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿತು.
ಪಂದ್ಯಾವಳಿಯ ಆರಂಭದಲ್ಲಿ, ಪಾಕಿಸ್ತಾನ ಅರ್ಹತೆ ಪಡೆಯಬಹುದು ಅಥವಾ ಅರ್ಹತೆ ಪಡೆಯದಿದ್ದರೂ, ಭಾರತ ಖಂಡಿತವಾಗಿಯೂ ಅಗ್ರ ನಾಲ್ಕು ಸ್ಥಾನಗಳನ್ನು ತಲುಪುವುದಿಲ್ಲ ಎಂದು ಅಮೀರ್ ಹೇಳಿದ್ದರು. ‘ದೇಖೋ, ಪಾಕಿಸ್ತಾನ್ ಕರೇ ನಾ ಕರೇ, ಇಂಡಿಯಾ ನಾಆ (ಪಾಕಿಸ್ತಾನ ಅರ್ಹತೆ ಪಡೆದರೂ ಇಲ್ಲದಿದ್ದರೂ ಪರವಾಗಿಲ್ಲ, ಭಾರತ ಅರ್ಹತೆ ಪಡೆಯುವುದಿಲ್ಲ)’ ಎಂದು ಅವರು ಹಾರ್ನಾ ಮನಾ ಹೈ ಕಾರ್ಯಕ್ರಮದಲ್ಲಿ ಹೇಳಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಸೂಪರ್ 8 ಪಂದ್ಯಕ್ಕೂ ಮುನ್ನವೂ ಅಮೀರ್ ಇದೇ ರೀತಿಯ ಹೇಳಿಕೆಯನ್ನು ನೀಡಿದ್ದರು.
ಆದರೆ, ಟೀಂ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ ಉತ್ತಮ ಪ್ರದರ್ಶನ ನೀಡಿತು. ದಕ್ಷಿಣ ಆಫ್ರಿಕಾ ವಿರುದ್ಧದ 76 ರನ್ಗಳ ಹೀನಾಯ ಸೋಲಿನೊಂದಿಗೆ ತಮ್ಮ ಸೂಪರ್ 8 ಅಭಿಯಾನವನ್ನು ಪ್ರಾರಂಭಿಸಿದ ಭಾರತ, ನಂತರ ವಾಂಖೆಡೆ ಕ್ರೀಡಾಂಗಣದಲ್ಲಿ ಜಿಂಬಾಬ್ವೆಯನ್ನು ಸೋಲಿಸುವ ಮೂಲಕ ಅದ್ಭುತ ಕಂಬ್ಯಾಕ್ ಮಾಡಿತು ಮತ್ತು ನಂತರ ವೆಸ್ಟ್ ಇಂಡೀಸ್ ಸೋಲಿಸಿ ಸೆಮಿಫೈನಲ್ ಸ್ಥಾನವನ್ನು ಕಾಯ್ದಿರಿಸಿತು. ಭಾರತವು ಸೆಮಿಫೈನಲ್ಗೆ ಲಗ್ಗೆ ಇಟ್ಟ ನಂತರ, ಅಭಿಮಾನಿಗಳು ಅಮೀರ್ ಅವರ ಭವಿಷ್ಯವಾಣಿಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಟೀಕಿಸಿದ್ದಾರೆ.
ಮೊಹಮ್ಮದ್ ಅಮೀರ್ನ ನೋಡಿ ನಗಬೇಕು ಎಂದು ಒಬ್ಬರು ಬರೆದಿದ್ದರೆ, ಇದು ಮೊಹಮ್ಮದ್ ಅಮೀರ್ಗೆ ಭಾರಿ ಆಘಾತ. ಪಾಕಿಸ್ತಾನ ಆತನನ್ನು ನಂಬುವುದಕ್ಕಿಂತ ಹೆಚ್ಚಾಗಿ ತನ್ನ ಭವಿಷ್ಯವನ್ನು ಆತನೇ ನಂಬಬೇಕು ಎಂದು ಮತ್ತೊಬ್ಬರು ಬರೆದಿದ್ದಾರೆ.
ಭಾರತ ತಂಡವು ಟಿ20 ವಿಶ್ವಕಪ್ ಇತಿಹಾಸದಲ್ಲಿ ತಮ್ಮ ಅತ್ಯುನ್ನತ ಯಶಸ್ವಿ ಚೇಸಿಂಗ್ ಅನ್ನು ದಾಖಲಿಸಿತು.
2016ರಲ್ಲಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್ನಲ್ಲಿ ವೆಸ್ಟ್ ಇಂಡೀಸ್ ತಂಡವು ಭಾರತವನ್ನು ಸೋಲಿಸಿತ್ತು. ಈ ಬಾರಿ, ಕೋಲ್ಕತ್ತಾದ ಪ್ರತಿಷ್ಠಿತ ಕ್ರೀಡಾಂಗಣದಲ್ಲಿ ಭಾರತವು ತನ್ನ ದಾಖಲೆಗಳನ್ನು ಪುನಃ ಬರೆಯುವ ಮೂಲಕ ವೆಸ್ಟ್ ಇಂಡೀಸ್ ಪಂದ್ಯಾವಳಿಯಿಂದ ಹೊರಬೀಳಲು ಕಾರಣವಾಗಿದೆ.
ಸೂಪರ್ 8 ರ ಹೈ ಪ್ರೆಶರ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು ತಂದುಕೊಟ್ಟ ಸಂಜು ಸ್ಯಾಮ್ಸನ್ ತಮ್ಮ ವೃತ್ತಿಜೀವನದ ಅತ್ಯುತ್ತಮ ಇನಿಂಗ್ಸ್ ಆಡಿದರು. ಚೇಸ್ ಕಿಂಗ್ ವಿರಾಟ್ ಕೊಹ್ಲಿ ತಂಡದಲ್ಲಿ ಇಲ್ಲದಿರುವಾಗ ಭಾರತ ತಂಡವು ಸವಾಲಿನ ಗುರಿಯನ್ನು ಬೆನ್ನಟ್ಟುವಲ್ಲಿ ಅಜೇಯರಾಗಿ ಉಳಿದರು. ಆರಂಭದಲ್ಲಿಯೇ ಅಭಿಷೇಕ್ ಶರ್ಮಾ ಮತ್ತು ಇಶಾನ್ ಕಿಶನ್ ವಿಕೆಟ್ ಕಳೆದುಕೊಂಡು ತಂಡ ಸಂಕಷ್ಟದಲ್ಲಿ ಸಿಲುಕಿದ್ದಾಗ ಸಂಜು ಸ್ಯಾಮ್ಸನ್ ತಾವೇ ತಂಡವನ್ನು ಮುನ್ನಡೆಸಿದರು. ಅವರು ಕೇವಲ 50 ಎಸೆತಗಳಲ್ಲಿ 12 ಬೌಂಡರಿ ಮತ್ತು ನಾಲ್ಕು ಸಿಕ್ಸರ್ಗಳನ್ನು ಬಾರಿಸಿ 97 ರನ್ ಗಳಿಸಿ, ಅಜೇಯರಾಗಿ ಉಳಿದರು.
