ಬೆಂಗಳೂರು: ಅವ್ರೆಲ್ಲಾ ದೇವಸ್ತಾನದ ಟೈಲ್ಸ್ ಕೆಲಸಕ್ಕೆಂದು ದೂರದ ಊರಿಂದ ಬಂದಿದ್ರು, ಆದ್ರೆ ದೇವಸ್ಥಾನದಲ್ಲಿದ್ದ ಬೆಳ್ಳಿಯ ಆಭರಣಗಳ ಮೇಲೆ ಕಣ್ಣಾಕ್ಕಿದ್ದ ಪಾಪಿಗಳು ಸ್ಕೆಚ್ ಹಾಕಿ ದೋಚಿ ಎಸ್ಕೇಪ್ ಆಗಿದ್ರು.ಕೇಜಿ ಗಟ್ಟಲೆ ಬೆಳ್ಳಿಯ ಆಭರಣಗಳನ್ನ ಕಳ್ಳತನ ಮಾಡಲು ಅವ್ರು ಮಾಡಿದ್ದ ಖತರ್ನಾಕ್ ಪ್ಲ್ಯಾನ್ ಏನು ಅನ್ನೋದನ್ನ ತೋರಿಸ್ತಿವಿ ನೋಡಿ.
Breaking News: ಬೆಂಗಳೂರಲ್ಲಿ ವೈದ್ಯರ ಯಡವಟ್ಟಿನಿಂದ ಹತ್ತು ವರ್ಷದ ಬಾಲಕ ಸಾವು?
ಎಸ್.. ಶಾಂತಿನಗರದ ಜೈನ ಮಂದಿರದಲ್ಲಿ ಟೈಲ್ಸ್ ಕೆಲಸಕ್ಕೆ ಬಂದು ಮಂದಿರದಲ್ಲಿದ್ದ ಸುಮಾರು 10 ಲಕ್ಷ ರೂ ಮೌಲ್ಯದ ಬೆಳ್ಳಿ ಆಭರಣ ಕದ್ದು ಪರಾರಿಯಾಗಿದ್ದ ರಾಜಸ್ತಾನ ಮೂಲದ ನಾಲ್ವರು ಆರೋಪಿಗಳನ್ನ ಅಶೋಕನಗರ ಪೊಲೀಸರು ಬಂಧಿಸಿದ್ದಾರೆ. ಕೆಲ ತಿಂಗಳ ಹಿಂದೆ ಟೈಲ್ಸ್ ಕೆಲಸಕ್ಕೆ ಜೋಶಿರಾಮ್ ಹಾಗೂ ಗೋವಿಂದ ಕುಮಾರ್, ರಾಜೇಂದ್ರ ಕುಮಾರ್, ಪ್ರವೀಣ್ ಶಾಂತಿನಗರದ ಜೈನ್ ಟೆಂಪಲ್ ಗೆ ಟೈಲ್ಸ್ ಕೆಲಸಕ್ಕೆಂದು ಬಂದಿದ್ರು. ಟೈಲ್ಸ್ ಕೆಲಸ ಮುಗಿಸಿಕೊಂಡ ಆರೋಪಿಗಳು ಜೈನಮಂದಿರದಲ್ಲಿ ಅಳವಡಿಸಲಾಗಿದ್ದ ಬೆಳ್ಳಿ ಆಭರಣಗಳನ್ನ ನೋಡಿ ಹೆಚ್ಚು ಬೆಲೆಬಾಳುತ್ತೆ ಅಂತ ಎರಡು ತಿಂಗಳ ಬಳಿಕ ಸಂಚು ರೂಪಿಸಿ ಕದ್ದು ಪರಾರಿಯಾಗಿದ್ರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ಆಧರಿಸಿ ತನಿಖೆ ನಡೆಸಿದಾಗ ಟೈಲ್ಸ್ ಹಾಕಲು ಬಂದಿದ್ದ ಕಾರ್ಮಿಕರೇ ಕಳ್ಳರು ಅಂತ ಗೊತ್ತಾಗಿತ್ತು, ಇನ್ನು ಆರೋಪಿಗಳು ರಾಜಸ್ತಾನಕ್ಕೆ ಎಸ್ಕೇಪ್ ಆಗಿ ಬೆಳ್ಳಿ ಆಭರಣಗಳನ್ನ ಮಣ್ಣಿನಲ್ಲಿ ಹೂತ್ತಿಟ್ಟಿದ್ದರು. ಹೀಗಾಗಿ ರಾಜಸ್ತಾನಕ್ಕೆ ತೆರಳಿದ್ದ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿತರಿಂದ 9.70 ಲಕ್ಷ ಮೌಲ್ಯದ 14 ಕೆ.ಜಿ ತೂಕದ 9 .70 ಬೆಳ್ಳಿ ಆಭರಣ ವಶಪಡಿಸಿಕೊಂಡಿದ್ದಾರೆ.
ಸದ್ಯ ಕಾರ್ಯಾಚರಣೆ ನಡೆಸಿದ ಪೊಲೀಸರು ರಾಜಸ್ತಾನಕ್ಕೆ ತೆರಳಿ ನಾಲ್ವರು ಆರೋಪಿಗಳನ್ನ ಸದೆಬಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ದೇವಸ್ಥಾನದಲ್ಲೇ ಕೆಲಸ ಮಾಡಿ ದೇವರ ಆಭರಣ ಕದ್ದು ಪಾಪಿಗಳು ಪರಪ್ಪನ ಅಗ್ರಹಾರ ಸೇರಿದ್ದಾರೆ,
The post Temple Theft: ದೇವಸ್ಥಾನ ಕೆಲಸಕ್ಕೆಂದು ಬಂದು ದೇವರ ಆಭರಣಗಳನ್ನು ಕದ್ದು ಎಲ್ಲಿ ಬಚ್ಚಿಟ್ಟಿದ್ರು ಗೊತ್ತಾ? appeared first on Ain Live News.