ಬೆಂಗಳೂರು: ಗ್ಯಾರೆಂಟಿಗಳು ನಮ್ಮನ್ನ ಮಕಾಡೆ ಮಲಗಿಸಿವೆ ಎಂಬ ಹೇಳಿಕೆ ವಿಚಾರಕ್ಕೆ ಇಂದು ತಿಪಟೂರು ಕಾಂಗ್ರೆಸ್ ಶಾಸಕ ಕೆ.ಷಡಕ್ಷರಿ ಯೂ ಟರ್ನ್ ಹೊಡೆದರು.
K.Sudhaker: ಸಿದ್ದರಾಮಯ್ಯ ಸರ್ಕಾರದ ಪಾಪದ ಕೊಡ ತುಂಬಿದೆ, ಜನ ಉತ್ತರ ಕೊಡುತ್ತಾರೆ: ಮಾಜಿ ಸಚಿವ ಸುಧಾಕರ್ ಕಿಡಿ!
ವಿಕಾಸಸೌಧದಲ್ಲಿ ಮಾತನಾಡಿದ ಅವರು, ಗಾಂಧೀಜಿ ತಿಪಟೂರಿನಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿ ಹೋಗಿದ್ರು ಆ ಸ್ಥಳವನ್ನ ಅಭಿವೃದ್ಧಿ ಮಾಡುವ ಬಗ್ಗೆ ಚರ್ಚೆಯಾಯಿತು ನನಗೆ ಅಭಿವೃದ್ಧಿ ಬಗ್ಗೆ ಜನ ಪ್ರಸ್ತಾಪ ಮಾಡಿದ್ರು ಐದು ಗ್ಯಾರೆಂಟಿಗಳಿಂದ ಮಲಗಿಕೊಳ್ಳುವ ರೀತಿ ಮಾಡಿವೆ ಅಂತ ಹೇಳಿದ್ದೆ ಅಷ್ಟೇ ಐದು ಗ್ಯಾರೆಂಟಿಗಳು ನಮ್ಮನ್ನ ಮಲಗಿಸಿಲ್ಲ, ಎಚ್ಚರದಿಂದ ಇದ್ದೇವೆ ಯಾವ ಅಸಮಧಾನವೂ ಇಲ್ಲ, ಅನುಧಾನವೂ ಬಿಡುಗಡೆ ಆಗ್ತಿದೆ ಎಂದು ಹೇಳಿದರು.
ಕೊಬ್ಬರಿ ಬೆಲೆ ಏರಿಕೆ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತೆ ನಮ್ಮ 25 ಜನ ಸಂಸದರು ಚಕಾರ ಎತ್ತುತ್ತಿಲ್ಲ ಸಂಸದರು ಕೊಬ್ಬರಿ ಬೆಲೆ ಏರಿಕೆ ಬಗ್ಗೆ ಕೇಂದ್ರದ ಗಮನ ಸೆಳೆಯಬೇಕು ತಿಪಟೂರು ಜಿಲ್ಲಾ ಕೇಂದ್ರವಾಗಲೂ ಎಲ್ಲಾ ರೀತಿಯಲ್ಲೂ ಅರ್ಹವಾಗಿದೆ ಎಲ್ಲಾ ಇಲಾಖೆಯ ಉಪವಿಭಾಗ ಕಛೇರಿಗಳು ಇವೆ ಎಂದರು.
ಸಚಿವ ರಾಜಣ್ಣ ಮಧುಗಿರಿ ಜಿಲ್ಲಾ ಕೇಂದ್ರ ಮಾಡಿ ಅಂತಿದ್ದಾರೆ ನಾನು ತಿಪಟೂರು ಜಿಲ್ಲಾ ಕೇಂದ್ರ ಮಾಡಿ ಅಂತ ಹೇಳಿದ್ದೇನೆ ಅಂತಿಮವಾಗಿ ಸಿಎಂ ತೀರ್ಮಾನಕ್ಕೆ ನಾವು ಬದ್ದ ಎಂದು ಶಾಸಕ ಷಡಕ್ಷರಿ ಹೇಳಿದರು.
The post Uturn: ಗ್ಯಾರೆಂಟಿಗಳು ನಮ್ಮನ್ನ ಮಕಾಡೆ ಮಲಗಿಸಿವೆ ಹೇಳಿಕೆಗೆ ಶಾಸಕ ಕೆ.ಷಡಕ್ಷರಿ ಯೂ ಟರ್ನ್ appeared first on Ain Live News.