ಬೆಂಗಳೂರು: ನಗರದಲ್ಲಿ ಸುರಿಯುತ್ತಿರುವ ನಿರಂತರ ಮಳೆಗೆ(Bengaluru Rains) ತರಕಾರಿ ಬೆಲೆ ದಿಢೀರನೇ ಏರಿಕೆಯಾಗಿದೆ(Vegetable Price Hike). ಹಾಗೂ ಹೂವುಗಳ ದರ ಕುಸಿದಿದೆ. ಪ್ರತಿ ತರಕಾರಿ ಮೇಲೆ ಶೇ.15 ರಿಂದ 20ರಷ್ಟು ದರ ಏರಿಕೆ ಮಾಡಲಾಗಿದೆ. ಮಳೆ ಹೀಗೆ ಮುಂದುವರಿದ್ರೆ ಮತ್ತಷ್ಟು ದರ ಏರಿಕೆಯಾಗುವ ಸಾಧ್ಯತೆ ಇದೆ. ತರಕಾರಿ ದರ ಏರಿಕೆಯಿಂದ ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ. ಇನ್ನು ಮಳೆಯಿಂದಾಗಿ ರೈತರು ಬೆಳೆದ ಬೆಳೆ ಹೊಲದಲ್ಲೇ ನಾಶವಾಗುತ್ತಿದೆ. ಉತ್ತಮ ಗುಣಮಟ್ಟದ ತರಕಾರಿ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ.
ಬದಲಾದ ತರಕಾರಿ ದರ
ಟೊಮ್ಯಾಟೊ 15 ರಿಂದ 27 ರೂ.
ಕ್ಯಾರೆಟ್ 55 ರಿಂದ 60 ರೂ.
ಬೀನ್ಸ್ 22 ರಿಂದ 45 ರೂ.
ಹಸಿಮೆಣಸಿನಕಾಯಿ 56 ರಿಂದ 76 ರೂ.
ಮೂಲಂಗಿ 28 ರಿಂದ 32 ರೂ.
ಸೌತೇಕಾಯಿ 22 ರಿಂದ 43 ರೂ.
ಅವರೇಕಾಯಿ 45 ರಿಂದ 65 ರೂ.
ಈರುಳ್ಳಿ 40 ರಿಂದ 50 ರೂ.
ಕೊತ್ತಂಬರಿ ಸೊಪ್ಪು 15 ರಿಂದ 30 ರೂ.
ಪ್ರತಿ ಕಟ್ಟಿನ ಸೊಪ್ಪಿನ ದರ 5 ರಿಂದ 10 ರೂ. ಏರಿಕೆ
ಇದನ್ನೂ ಓದಿ: Karnataka Rain: ಕರ್ನಾಟಕದ ಹಲವೆಡೆ ಇನ್ನೂ 4 ದಿನ ಗುಡುಗು ಸಹಿತ ಮಳೆ; ಹಳದಿ ಅಲರ್ಟ್ ಘೋಷಣೆ
ಮಳೆಯಿಂದಾಗಿ ಹೂವಿನ ಬೆಳೆ ಹೊಲದಲ್ಲಿ ನಾಶವಾಗುತ್ತಿದ್ದು ಪೂರೈಕೆಯಲ್ಲಿ ಇಳಿಕೆಯಾಗಿದೆ. ಉತ್ತಮ ಗುಣಮಟ್ಟದ ಹೂವು ಮಾರುಕಟ್ಟೆಗೆ ಬರ್ತಿಲ್ಲ. ವ್ಯಾಪಾರ ಆಗದೆ ವ್ಯಾಪಾರಿಗಳು ಕಂಗಾಲಾಗಿದ್ದಾರೆ.
ಕೆ.ಆರ್.ಮಾರ್ಕೆಟ್ನಲ್ಲಿ ಹೂವಿನ ದರ ಹೀಗಿದೆ
ಮಲ್ಲಿಗೆ 1,600 ರೂ (ಸೀಜನ್ ಅಲ್ಲದ ಕಾರಣ ದರ ಹೆಚ್ಚಿದೆ)
ಕನಕಾಂಬರ 500 ರೂ.
ಶಾವಂತಿಗೆ ಹೂವು 60 ರಿಂದ 80 ರೂ.
ಗುಲಾಬಿ ಹೂವು 40 ರಿಂದ 60 ರೂ.
ಸುಗಂದರಾಜ 40 ರಿಂದ 50 ರೂ.
ಶಾಮಂತಿಗೆ ಹೂವಿನ ಹಾರ 30 ರೂ.
ಒಂದು ಮಾರು ಶಾಂಮತಿಗೆ ಹೂವು 50 ರೂ.
ಒಂದು ಮೊಳ ಮಲ್ಲಿಗೆ ಹೂವಿಗೆ 60 ರಿಂದ 80 ರೂ. ಇದೆ
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ