ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಟಿ20 ವಿಶ್ವಕಪ್ 2026ರ ಟ್ರೋಫಿಯನ್ನು ಭಾರತ ಗೆದ್ದ ನಂತರ ವರುಣ್ ಚಕ್ರವರ್ತಿ ಮತ್ತೊಮ್ಮೆ ಪಾಕಿಸ್ತಾನವನ್ನು ಟೀಕಿಸಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ ಮತ್ತು ಇಶಾನ್ ಕಿಶನ್ ಅವರ ಅರ್ಧಶತಕಗಳ ಬಲದಿಂದ 20 ಓವರ್ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 255 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ, ನ್ಯೂಜಿಲೆಂಡ್ ಭಾರತದ ಶಿಸ್ತಿನ ದಾಳಿಗೆ 159 ರನ್ಗಳಿಗೆ ಆಲೌಟ್ ಆಯಿತು. ಈ ಗೆಲುವಿನೊಂದಿಗೆ, ಭಾರತ ತನ್ನ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಉಳಿಸಿಕೊಂಡಿದ್ದು ಮಾತ್ರವಲ್ಲದೆ, ಮೂರು ಬಾರಿ ಟ್ರೋಫಿಯನ್ನು ಗೆದ್ದ ಮೊದಲ ತಂಡವಾಯಿತು.
ಈ ಗೆಲುವಿನ ನಂತರ, ವರುಣ್ ಚಕ್ರವರ್ತಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಟ್ರೋಫಿಯನ್ನು ಹಿಡಿದುಕೊಂಡು, ಚಹಾ ಹೀರುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಮಿಸ್ಟರಿ ಸ್ಪಿನ್ನರ್ ಹಂಚಿಕೊಂಡಿರುವ ಈ ಪೋಸ್ಟ್ ವೈರಲ್ ಆಗಿದ್ದು, ಅಭಿಮಾನಿಗಳು ಸಾಕಷ್ಟು ಕಮೆಂಟ್ ಮಾಡುತ್ತಿದ್ದಾರೆ.
ವರುಣ್ ಚಕ್ರವರ್ತಿ ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಮತ್ತೊಮ್ಮೆ ಪಾಕಿಸ್ತಾನವನ್ನು ಅಣಕಿಸಿದ್ದಾರೆ. ಆ ಮೂರ್ಖರು 2021 ರಲ್ಲಿ ತಪ್ಪು ವ್ಯಕ್ತಿಯೊಂದಿಗೆ ಚೆಲ್ಲಾಟವಾಡಿದರು ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಬರೆದಿದ್ದಾರೆ.
Varun Chakravarthy owning Pakistan yet again in his Instagram post
Those idiots messed with the wrong man in 2021. pic.twitter.com/eGJ2CQdq20— Abhishek (@vicharabhio) March 9, 2026
No Pakistani harm in this pic of Varun Chakravarthy pic.twitter.com/XuBRUfULnE
— कट्टर INDIA समर्थक ™ (@KKRWeRule) March 9, 2026
ವರುಣ್ ಚಕ್ರವರ್ತಿ ಅವರ ಈ ಚಿತ್ರದಲ್ಲಿ ಪಾಕಿಸ್ತಾನಿ ಯಾವುದೇ ಹಾನಿ ಇಲ್ಲ ಎಂದು ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ.
ಭಾರತವು ಪಾಕಿಸ್ತಾನವನ್ನು ಸೋಲಿಸಿ 2025ರ ಏಷ್ಯಾ ಕಪ್ ಗೆದ್ದ ನಂತರ ವರುಣ್ ಚಕ್ರವರ್ತಿ ಇದೇ ರೀತಿಯ ಚಿತ್ರವನ್ನು ಪೋಸ್ಟ್ ಮಾಡಿದ್ದರು. ಆ ಪಂದ್ಯಾವಳಿಯ ಸಮಯದಲ್ಲಿ, ಭಾರತೀಯ ಆಟಗಾರರು ಪಿಸಿಬಿ ಮುಖ್ಯಸ್ಥ ಮತ್ತು ಏಷ್ಯಾ ಕಪ್ ಕೌನ್ಸಿಲ್ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿಯನ್ನು ಸ್ವೀಕರಿಸಲು ನಿರಾಕರಿಸಿದ್ದರು ಮತ್ತು ಟ್ರೋಫಿ ಇಲ್ಲದೆಯೇ ಹಿಂತಿರುಗಿದ್ದರು.
ಮರುದಿನ, ವರುಣ್ ಚಕ್ರವರ್ತಿ ತನ್ನ ಹಾಸಿಗೆಯ ಮೇಲೆ ಮಲಗಿ ಪಕ್ಕದಲ್ಲಿ ಚಹಾ ಕಪ್ ಇಟ್ಟುಕೊಂಡಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದರು. ನಂತರ, ಸಂದರ್ಶನವೊಂದರಲ್ಲಿ ಅವರು, ಮೂಲತಃ ಟ್ರೋಫಿಯನ್ನು ತಮ್ಮ ಹಾಸಿಗೆಯ ಮೇಲೆ ಇಟ್ಟುಕೊಂಡು ಸಂಭ್ರಮಾಚರಣೆಯ ಫೋಟೊ ತೆಗೆದುಕೊಳ್ಳಲು ತಾವು ಯೋಜಿಸಿದ್ದರು. ಆದರೆ, ಟ್ರೋಫಿ ಲಭ್ಯವಿಲ್ಲದಿದ್ದಾಗ, ಅವರು ಆ ಕ್ಷಣವನ್ನು ಮಗ್ನೊಂದಿಗೆ ಮರುಸೃಷ್ಟಿಸಲು ನಿರ್ಧರಿಸಿದ್ದಾಗಿ ತಿಳಿಸಿದ್ದರು.
‘ನಾವು ಗೆಲ್ಲುತ್ತೇವೆ ಎಂದು ನನಗೆ ಗೊತ್ತಿತ್ತು. ಎರಡನೇ ಪಂದ್ಯದ ನಂತರ, ಫೈನಲ್ನಲ್ಲಿ ಅವರನ್ನು ಎದುರಿಸಿಸುವಂತಾದರೆ ನಾವು ಗೆಲ್ಲುತ್ತೇವೆ ಎಂದು ನನಗೆ ಖಚಿತವಾಗಿತ್ತು. ಹಾಗಾಗಿ ನಾನು ಎಲ್ಲವನ್ನೂ ಯೋಜಿಸಿದ್ದೆ. ಕಪ್ ಪಕ್ಕದಲ್ಲಿ ಇಟ್ಟುಕೊಂಡು ಮಲಗಿ ಫೋಟೊ ತೆಗೆಸಿಕೊಳ್ಳಲು ಯೋಜಿಸಿದ್ದೆ. ಆದರೆ ಪಂದ್ಯದ ನಂತರ, ನನ್ನ ಪಕ್ಕದಲ್ಲಿ ಏನೂ ಇರಲಿಲ್ಲ. ಕಾಫಿ ಕಪ್ ಮಾತ್ರ ಇತ್ತು. ಹಾಗಾಗಿ ನಾನು ಅದರೊಂದಿಗೆ ಫೋಟೊ ತೆಗೆದುಕೊಂಡೆ’ ಎಂದು ಅವರು ವಿವರಿಸಿದ್ದರು.
2026ರ ಟಿ20 ವಿಶ್ವಕಪ್ಗೆ ಸಂಬಂಧಿಸಿದಂತೆ, ವರುಣ್ ಚಕ್ರವರ್ತಿ ಮಿಶ್ರ ಅಭಿಯಾನವನ್ನು ಹೊಂದಿದ್ದರು. 14 ವಿಕೆಟ್ಗಳೊಂದಿಗೆ ಜಂಟಿಯಾಗಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಮುಗಿಸಿದರೂ, ಅವರು ಬೌಲಿಂಗ್ ಮಾಡಿದ 31 ಓವರ್ಗಳಲ್ಲಿ 287 ರನ್ಗಳನ್ನು ಬಿಟ್ಟುಕೊಟ್ಟರು.
