Home Uncategorized ಜಾನುವಾರುಗಳಲ್ಲಿ ಕಂಡು ಬರುತ್ತಿರುವ 'ಚರ್ಮಗಂಟು ರೋಗ' ತಡೆಯಲು ಲಸಿಕೆ ಅಭಿವೃದ್ಧಿ

ಜಾನುವಾರುಗಳಲ್ಲಿ ಕಂಡು ಬರುತ್ತಿರುವ 'ಚರ್ಮಗಂಟು ರೋಗ' ತಡೆಯಲು ಲಸಿಕೆ ಅಭಿವೃದ್ಧಿ

13
0
bengaluru

2020 ರಿಂದೀಚೆಗೆ ಭಾರತದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜಾನುವಾರುಗಳನ್ನು ಬಲಿಪಡೆದುಕೊಂಡು ಆತಂಕ ಹುಟ್ಟಿಸಿರುವ ಚರ್ಮಗಂಟು ರೋಗ (ಎಲ್‌ಎಸ್‌ಡಿ)ಕ್ಕೆ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್)-ಭಾರತೀಯ ಪಶುವೈದ್ಯಕೀಯ ಸಂಶೋಧನೆ ಸಂಸ್ಥೆ (ಐವಿಆರ್’ಐ) ಲಸಿಕೆಯೊಂದನ್ನು ಅಭಿವೃದ್ಧಿಪಡಿಸಿದೆ. ಬೆಂಗಳೂರು: 2020 ರಿಂದೀಚೆಗೆ ಭಾರತದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜಾನುವಾರುಗಳನ್ನು ಬಲಿಪಡೆದುಕೊಂಡು ಆತಂಕ ಹುಟ್ಟಿಸಿರುವ ಚರ್ಮಗಂಟು ರೋಗ (ಎಲ್‌ಎಸ್‌ಡಿ)ಕ್ಕೆ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್)-ಭಾರತೀಯ ಪಶುವೈದ್ಯಕೀಯ ಸಂಶೋಧನೆ ಸಂಸ್ಥೆ (ಐವಿಆರ್’ಐ) ಲಸಿಕೆಯೊಂದನ್ನು ಅಭಿವೃದ್ಧಿಪಡಿಸಿದೆ.

ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ವೆಟರ್ನರಿ ಎಪಿಡೆಮಿಯಾಲಜಿ ಅಂಡ್ ಡಿಸೀಸ್ ಇನ್ಫರ್ಮ್ಯಾಟಿಕ್ಸ್ (NIVEDI) ನ ನಿರ್ದೇಶಕ ಡಾ.ಬಿ.ಆರ್.ಗುಲಾಟಿ ಅವರು ಮಾತನಾಡಿ, ಎಲ್‌ಎಸ್‌ಡಿಗೆ ಕಾರಣವಾಗುವ ಅದೇ ವೈರಸ್ ಅನ್ನು ಬಳಸುವ ಹೋಮೋಲೋಗಸ್ ಲಸಿಕೆ “ವೈರಸ್ ವಿರುದ್ಧ 100 ಪ್ರತಿಶತದಷ್ಟು ರಕ್ಷಣೆ ನೀಡುತ್ತದೆ ಎಂದು ಹೇಳಿದ್ದಾರೆ.

ಎರಡು ಪಶುವೈದ್ಯಕೀಯ ಲಸಿಕೆ ತಯಾರಕರು – ಬಯೋವೆಟ್ ಪ್ರೈವೇಟ್ ಲಿಮಿಟೆಡ್, ಮಾಲೂರು, ಕರ್ನಾಟಕ ಮತ್ತು ಹೆಸ್ಟರ್ ಬಯೋಸೈನ್ಸ್ ಲಿಮಿಟೆಡ್, ಅಹಮದಾಬಾದ್, ಗುಜರಾತ್ , ಲಸಿಕೆ ತಯಾರಿಕೆ ಮತ್ತು ಪೂರೈಕೆಗಾಗಿ ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಬಯೋವೆಟ್ ಲಸಿಕೆಯ ಪರೀಕ್ಷಾ ಬ್ಯಾಚ್‌ಗಳನ್ನು ಪರೀಕ್ಷೆಗಾಗಿ ಐವಿಆರ್’ಐಗೆ ಸಲ್ಲಿಸಿದೆ. ಒಮ್ಮೆ ಒಪ್ಪಿಗೆ ನೀಡಿದ ಬಳಿಕ ಲಸಿಕೆ ಮಾರುಕಟ್ಟೆಯಲ್ಲಿ ಬರಲಿದೆ ಎನ್ನಲಾಗಿದೆ.

ಎಲ್ಎಸ್’ಡಿ ವೈರಸ್ ಒಂದು ಪಾಕ್ಸ್ ವೈರಸ್ ಆಗಿದ್ದು. ಅದು ಕುರಿ ಪಾಕ್ಸ್ ಮತ್ತು ಮೇಕೆ ಪೋಕ್ಸ್ ವೈರಸ್‌ಗಳಂತೆಯೇ ಅದೇ ಕುಲಕ್ಕೆ ಸೇರಿದ್ದಾಗಿದೆ. ಪ್ರಸ್ತುತ ಜಾನುವಾರುಗಳಲ್ಲಿ ಕಂಡು ಬರುತ್ತಿರುವ ಎಲ್‌ಎಸ್‌ಡಿ ತಡೆಗಟ್ಟಲು ಮೇಕೆಪೋಕ್ಸ್ ಲಸಿಕೆಯನ್ನು ನೀಡಲಾಗುತ್ತಿದೆ. ಮೇಕೆ ಪೋಕ್ಸ್ ಒಂದು ವೈವಿಧ್ಯಮಯ ಲಸಿಕೆಯಾಗಿದೆ. ಇದು ರೋಗದಿಂದ ಶೇ.70ರಿಂದ 80ರಷ್ಟು ರಕ್ಷಣೆ ನೀಡುತ್ತದೆ’ ಎಂದು ಗುಲಾಟಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಜ.13ರವರೆಗೆ 3 ಲಕ್ಷ ಜಾನುವಾರುಗಳಲ್ಲಿ ಸೋಂಕು
ಜನವರಿ 13 ರ ಹೊತ್ತಿಗೆ ರಾಜ್ಯದಲ್ಲಿ 3,10,000 ಕ್ಕೂ ಹೆಚ್ಚು ಜಾನುವಾರುಗಳಲ್ಲಿ ಸೋಂಕು ಕಾಣಿಸಿಕೊಂಡಿರುವುದು ವರದಿಯಾಗಿದೆ. ಈ ವೈರಸ್ ರಾಜ್ಯದಲ್ಲಿ 27,000 ಜಾನುವಾರುಗಳನ್ನು ಬಲಿ ಪಡೆದುಕೊಂಡಿದೆ ಎಂದು ತಿಳಿದುಬಂದಿದೆ.

ಎಲ್‌ಎಸ್‌ಡಿ ಝೂನೋಟಿಕ್ ಕಾಯಿಲೆಯಲ್ಲ, ಆದರೆ ಸೋಂಕು ಪ್ರಾಣಿಗಳ ಅಥವಾ ಸೋಂಕುಳ್ಳ ಪ್ರದೇಶದಿಂದ ಹಾಲನ್ನು ಮಾನವ ಬಳಕೆಗಾಗಿ ಕುದಿಸಬೇಕು” ಎಂದು ಮುಖ್ಯ ಪಶುವೈದ್ಯ ವಿಜ್ಞಾನಿ ಹೇಳಿದ್ದಾರೆ.

ವೈರಸ್ ನೇರ ಸಂಪರ್ಕ, ಸೊಳ್ಳೆಗಳು, ನೊಣಗಳು ಮತ್ತು ಉಣ್ಣಿಗಳಂತಹ ವಾಹಕಗಳು ಮತ್ತು ಲಾಲಾರಸ ಮತ್ತು ಕಲುಷಿತ ನೀರು ಮತ್ತು ಆಹಾರದ ಮೂಲಕ ಹರಡುತ್ತದೆ. ಭಾರತದಲ್ಲಿ, ರಾಜಸ್ಥಾನ ಮತ್ತು ಗುಜರಾತ್‌ನಂತಹ ರಾಜ್ಯಗಳು ಕಳೆದ ವರ್ಷ ಶೇಕಡಾ 10 ರಷ್ಟು ಹೆಚ್ಚಿನ ಮರಣ ಪ್ರಮಾಣವನ್ನು ವರದಿ ಮಾಡಿದೆ. ವೈರಸ್ ಹರಡುವಿಕೆಯನ್ನು ನಿಯಂತ್ರಿಸುವ ಏಕೈಕ ಮಾರ್ಗವೆಂದರೆ ಸಾಮೂಹಿಕ ಲಸಿಕೆಯಾಗಿದೆ ಎಂದು ತಿಳಿಸಿದ್ದಾರೆ.

ರೋಗಲಕ್ಷಣಗಳು ಹೆಚ್ಚಿನ ಜ್ವರದಿಂದ ಗುಣಲಕ್ಷಣಗಳನ್ನು ಹೊಂದಿವೆ, ನಂತರ ಪ್ರಾಣಿಗಳ ದೇಹದಾದ್ಯಂತ ಗಂಟುಗಳು ಕಾಣಿಸಿಕೊಳ್ಳುತ್ತದೆ. ಬಳಿಕ ಸೋಂಕು ಶ್ವಾಸಕೋಶಕ್ಕೆ ಹರಡುತ್ತದೆ. ಪ್ರಾಣಿಗಳಲ್ಲಿ ನ್ಯುಮೋನಿಯಾದಂತಹ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತದೆ, ಇದು ರೋಗಪೀಡಿತ ಪ್ರಾಣಿಗಳ ಸಾವಿಗೆ ಮುಖ್ಯ ಕಾರಣವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

2017-18ರಲ್ಲಿ ಆಫ್ರಿಕನ್ ಖಂಡದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ LSD ವೈರಸ್ ನಂತರ ದಿನಗಳಲ್ಲಿ ಚೀನಾ ಮತ್ತು ಮಂಗೋಲಿಯಾದಲ್ಲೂ ಕಂಡು ಬಂದಿತ್ತು. ಬಳಿಕ 2019 ರಲ್ಲಿ ಒಡಿಶಾದಲ್ಲಿ ಕಾಣಿಸಿಕೊಳ್ಳುವ ಮೂಲಕ ಭಾರತಕ್ಕೆ ಕಾಲಿಟ್ಟಿತ್ತು.

ರೋಗದ ಗಂಭೀರತೆ ಹಾಗೂ ಜಾನುವಾರುಗಳ ಸಾವನ್ನು ಗಂಭೀರವಾಗಿ ಪರಿಗಣಿಸಿರುವ NIVEDI ಜನವರಿ 27 ರಂದು LSD ಕುರಿತು ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರವನ್ನು ಆಯೋಜಿಸುತ್ತಿದೆ.

ಈ ಕಾರ್ಯಾಗಾರದಲ್ಲಿ ದೇಶದಾದ್ಯಂತ ಪಶುವೈದ್ಯಕೀಯ ವಿಜ್ಞಾನಿಗಳು ಮತ್ತು ಪಶುಸಂಗೋಪನೆ ತಜ್ಞರು ಎಲ್‌ಎಸ್‌ಡಿ ನಿಯಂತ್ರಿಸುವ ಕ್ರಿಯಾ ಯೋಜನೆಯ ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ.

ರಾಷ್ಟ್ರೀಯ ಕಾರ್ಯಾಗಾರದಲ್ಲಿ ಐಸಿಎಆರ್‌ನ ಉಪ ಮಹಾನಿರ್ದೇಶಕ (ಪ್ರಾಣಿ ವಿಜ್ಞಾನ) ಡಾ ಭೂಪೇಂದ್ರ ನಾಥ್ ತ್ರಿಪಾಠಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here