14 ವರ್ಷದ ಬಾಲಕನೊಬ್ಬ ಮೊಬೈಲ್ ಚಟಕ್ಕೆ ಬಿದ್ದಿರುವ ವಿಚಾರವಾಗಿ ತನ್ನ ತಾಯಿ ಗದರಿಸಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನನ್ನು ಜಗದೀಶ್ ಮತ್ತು ವಿನಯ ದಂಪತಿಯ ಪುತ್ರ ಜ್ಞಾನೇಶ್ ಎಂದು ಗುರುತಿಸಲಾಗಿದೆ. ಮಂಗಳೂರು: 14 ವರ್ಷದ ಬಾಲಕನೊಬ್ಬ ಮೊಬೈಲ್ ಚಟಕ್ಕೆ ಬಿದ್ದಿರುವ ವಿಚಾರವಾಗಿ ತನ್ನ ತಾಯಿ ಗದರಿಸಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತನನ್ನು ಜಗದೀಶ್ ಮತ್ತು ವಿನಯ ದಂಪತಿಯ ಪುತ್ರ ಜ್ಞಾನೇಶ್ ಎಂದು ಗುರುತಿಸಲಾಗಿದೆ.
9ನೇ ತರಗತಿಯ ವಿದ್ಯಾರ್ಥಿ ಜ್ಞಾನೇಶ್ ಸೇಕ್ರೆಡ್ ಹಾರ್ಟ್ ಶಾಲೆಗೆ ತೆರಳುತ್ತಿದ್ದ. ಶಾಲೆಯಿಂದ ಮನೆಗೆ ಬಂದು ಮೊಬೈಲ್ ನೋಡುತ್ತಿದ್ದಾಗ ವಿನಯ ಬೈದು ಮೊಬೈಲ್ನಿಂದ ದೂರಾಗುವಂತೆ ಗದರಿಸಿದ್ದಾರೆ.
ಇದರಿಂದ ಬೇಸರಗೊಂಡ ಬಾಲಕ ಸ್ನಾನ ಮುಗಿಸಿ ಬರುವುದಾಗಿ ತಾಯಿಗೆ ಹೇಳಿದ್ದಾನೆ. ಬಳಿಕ ಸೋಮವಾರ ಸಂಜೆ ಒಳಗೆ
ಹೋಗಿದ್ದಾನೆ ಮತ್ತು ತನ್ನ ಕೋಣೆಯಲ್ಲಿ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.