ವಿಧಾನ ಪರಿಷತ್ ಸದಸ್ಯರಿಗೆ ವಿಧಾನಸೌಧದಲ್ಲಿ ವಾಹನಗಳ ಪಾರ್ಕಿಂಗ್ ಸಮಸ್ಯೆ ಆಗುತ್ತಿರುವ ಬಗ್ಗೆ ಕಲಾಪದಲ್ಲಿ ಚರ್ಚಿಸಲಾಯಿತು. ಪ್ರಶ್ನೋತ್ತರ, ಶೂನ್ಯವೇಳೆ ಅವಧಿ ಮುಗಿದ ಕೂಡಲೇ ಬಿಜೆಪಿಯ ಡಿ.ಎಸ್ ಅರುಣ್ ವಿಷಯ ಪ್ರಸ್ತಾಪ ಮಾಡಿದರು. ಬೆಂಗಳೂರು: ವಿಧಾನ ಪರಿಷತ್ ಸದಸ್ಯರಿಗೆ ವಿಧಾನಸೌಧದಲ್ಲಿ ವಾಹನಗಳ ಪಾರ್ಕಿಂಗ್ ಸಮಸ್ಯೆ ಆಗುತ್ತಿರುವ ಬಗ್ಗೆ ಕಲಾಪದಲ್ಲಿ ಚರ್ಚಿಸಲಾಯಿತು. ಪ್ರಶ್ನೋತ್ತರ, ಶೂನ್ಯವೇಳೆ ಅವಧಿ ಮುಗಿದ ಕೂಡಲೇ ಬಿಜೆಪಿಯ ಡಿ.ಎಸ್ ಅರುಣ್ ವಿಷಯ ಪ್ರಸ್ತಾಪ ಮಾಡಿದರು.
ವಿಧಾನಸೌಧ ಮತ್ತು ಶಾಸಕರ ಭವನದಲ್ಲಿ ಎಂಎಲ್ಸಿಗಳು ತಮ್ಮ ಅಧಿಕೃತ ವಾಹನಗಳಿಗೆ ಪಾರ್ಕಿಂಗ್ ಸ್ಥಳವನ್ನು ಹುಡುಕುವುದು ಕಷ್ಟಕರವಾಗಿದೆ. ಹಲವು ಖಾಸಗಿ ವಾಹನಗಳು ಎಂಟ್ರಿ ಕೊಡುತ್ತಿರುವುದರಿಂದ ವಿಧಾನಸೌಧ ಆವರಣದಲ್ಲಿ ವಾಹನಗಳ ಓಡಾಟವೂ ಕುಂಠಿತವಾಗಿದೆ ಎಂದು ತಿಳಿಸಿದರು.
ಎಂಎಲ್ಸಿಗಳಾದ ಟಿ.ಎ.ಶರವಣ, ಶಶೀಲ್ ನಮೋಶಿ, ನಾರಾಯಣಸ್ವಾಮಿ ಮತ್ತಿತರರು ದನಿಗೂಡಿಸಿ, ವಾಹನಗಳನ್ನು ಬೇರೆಡೆ ನಿಲ್ಲಿಸಿ ವಿಧಾನಸೌಧ ಪ್ರವೇಶಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ವಾಹನದ ಪಾಸ್ಗಳನ್ನು ಅತಿರೇಕವಾಗಿ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಮತ್ತು ಅವ್ಯವಸ್ಥೆಗೆ ಇದು ಒಂದು ಕಾರಣವಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ನೇಮಕವಾಗದ ವಿರೋಧ ಪಕ್ಷದ ನಾಯಕ: ರಾಜ್ಯ ವಿಧಾನಸಭೆಯ ಭವ್ಯ ಪರಂಪರೆಗೆ ಮೊದಲ ಬಾರಿ ಅಂಟಿದ ಕಪ್ಪು ಚುಕ್ಕೆ !
ನಮಗೆ ವಿಧಾನಸೌಧ ಮತ್ತು ಶಾಸಕರ ಭವನದಲ್ಲಿ ಪಾರ್ಕಿಂಗ್ಗೆ ಸಮಸ್ಯೆ ಇದೆ. ಕಾರ್ ಪಾರ್ಕಿಂಗ್ ಮಾಡಲು ಆಗ್ತಿಲ್ಲ. ವಿಧಾನಸೌಧದಲ್ಲಿ ಯಾರ್ಯಾರೋ ಎಲ್ಲೆಲ್ಲೋ ಕಾರು ನಿಲ್ಲಿಸುತ್ತಾರೆ. ಇದರಿಂದ ನಮಗೆ ಸಮಸ್ಯೆ ಆಗ್ತಿದೆ. ಪಾಸ್ ಇಲ್ಲದೇ ಇರೋರ ಕಾರ್ ಕೂಡಾ ಪಾರ್ಕಿಂಗ್ ಆಗ್ತಿದೆ. ಇದರಿಂದ ಶಾಸಕರಾದ ನಮಗೆ ಸಮಸ್ಯೆ ಆಗ್ತಿದೆ ಅಂತಾ ಸಭಾಪತಿಗಳ ಗಮನಕ್ಕೆ ತಂದರು.
ಕೂಡಲೇ ಸಭಾ ನಾಯಕರು ಇದನ್ನ ಸರಿ ಮಾಡುವಂತೆ ಸಭಾಪತಿ ಹೊರಟ್ಟಿ ಸೂಚಿಸಿದರು. ಇದಕ್ಕೆ ಉತ್ತರಿಸಿದ ಸಭಾ ನಾಯಕರ, ಬೋಸರಾಜು, ಸರಿಪಡಿಸುವುದಾಗಿ ತಿಳಿಸಿದರು.
ಬಳಿಕ ಮಾತನಾಡಿದ ಸಚಿವ ಹೆಚ್.ಕೆ ಪಾಟೀಲ್ ಪಾರ್ಕಿಂಗ್ ಸಮಸ್ಯೆ ಇರೋದು ನಿಜ. ಇಲ್ಲಿರೋ ಹೊಟೇಲ್ ನಲ್ಲಿ ಹೋಗಿ ಬರೋದಕ್ಕೂ ಸಮಸ್ಯೆ ಆಗಿದೆ. ಹೀಗಾಗಿ ಸಭಾಪತಿಗಳ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ಮಾಡಿ ಈ ಸಮಸ್ಯೆ ಪರಿಹಾರ ಕಂಡುಕೊಳ್ಳಬೇಕು ಎಂದರು.
ಇದನ್ನೂ ಓದಿ: ಸಿದ್ದರಾಮಯ್ಯ ಅವರಂತೆ ಕರ್ನಾಟಕ ವಿಧಾನಸಭೆ ಚೇಂಬರ್ ಪಕ್ಕದಲ್ಲೇ ಕಚೇರಿ ಬಯಸಿದ ಡಿಸಿಎಂ ಡಿಕೆ ಶಿವಕುಮಾರ್!
ನಂತರ ಬಿಜೆಪಿ ಸದಸ್ಯ ತುಳಿಸಿ ಮುನಿರಾಜು ಗೌಡ, ದಲ್ಲಾಳಿಗಳು ಅಂದ್ರೆ ಯಾಕೆ ಬರ್ತಿದ್ದಾರೆ. ವರ್ಗಾವಣೆ ದಂಧೆ ಮಾಡೋಕೋ, ಭೂ ಮಾಫಿಯಾ ದಂಧೆ ಮಾಡೋಕೆ ಬರ್ತಿದ್ದಾರೆ ಅಂತಾ ಹೇಳಿ. ಯಾರು ದಲ್ಲಾಳಿಗಳು ಹೇಳಬೇಕು ಎಂದು ಒತ್ತಾಯಿಸಿದ್ರು. ಇದಕ್ಕೆ ಆಕ್ರೋಶಗೊಂಡ ಹೆಚ್.ಕೆ ಪಾಟೀಲ್, ಯಾವ ಮಧ್ಯವರ್ತಿಗಳು ವಿಧಾನಸೌಧ ಪ್ರವೇಶಿಸುತ್ತಿದ್ದಾರೆ ಎಂಬುದನ್ನು ಸಚಿವರು ಸ್ಪಷ್ಟಪಡಿಸಲಿ ಎಂದು ವ್ಯಂಗ್ಯವಾಡಿದರು. ಅಧಿಕಾರಿಗಳ ವರ್ಗಾವಣೆ. ಪಾಟೀಲ ಉತ್ತರಿಸಿದ ಅವರು, ವಿಧಾನಸೌಧಕ್ಕೆ ವಿದ್ಯುತ್ ದಲ್ಲಾಳಿಗಳು ಸೇರಿದಂತೆ ಎಲ್ಲ ರೀತಿಯ ಮಧ್ಯವರ್ತಿಗಳು ಬರುವುದು ಗೊತ್ತಿರುವ ಸಂಗತಿ. ಇದೇನು ಹೊಸದಲ್ಲ ಎಂಎಲ್ ಸಿ ಬೇಕಿದ್ದರೆ ಅಂಥವರ ಪಟ್ಟಿ ಕೊಡುತ್ತಾರೆ ಎಂದರು.