Home Uncategorized ಇನ್ನೂ 24 ಗಂಟೆಯೊಳಗೆ ರಾಹುಲ್ ಗೆ ಮತ್ತೆ ಸಂಸದ ಸ್ಥಾನ ಸಿಗಬೇಕು, ಇಲ್ಲವಾದರೆ! ಡಿಕೆಶಿ ಹೇಳಿದ್ದು...

ಇನ್ನೂ 24 ಗಂಟೆಯೊಳಗೆ ರಾಹುಲ್ ಗೆ ಮತ್ತೆ ಸಂಸದ ಸ್ಥಾನ ಸಿಗಬೇಕು, ಇಲ್ಲವಾದರೆ! ಡಿಕೆಶಿ ಹೇಳಿದ್ದು ಹೀಗೆ…

16
0

‘ಮೋದಿ ಉಪನಾಮ’ ಹೇಳಿಕೆಗೆ ಸಂಬಂಧಿಸಿದಂತೆ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿ ಅವರಿಗೆ ಗುಜರಾತ್ ಹೈಕೋರ್ಟ್ ನೀಡಿದ್ದ  2 ವರ್ಷಗಳ ಜೈಲು ಶಿಕ್ಷೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿರುವುದನ್ನು ರಾಜ್ಯ ಕಾಂಗ್ರೆಸ್ ನಾಯಕರು ಸ್ವಾಗತಿಸಿದ್ದಾರೆ. ಬೆಂಗಳೂರು: ‘ಮೋದಿ ಉಪನಾಮ’ ಹೇಳಿಕೆಗೆ ಸಂಬಂಧಿಸಿದಂತೆ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿ ಅವರಿಗೆ ಗುಜರಾತ್ ಹೈಕೋರ್ಟ್ ನೀಡಿದ್ದ  2 ವರ್ಷಗಳ ಜೈಲು ಶಿಕ್ಷೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿರುವುದನ್ನು ರಾಜ್ಯ ಕಾಂಗ್ರೆಸ್ ನಾಯಕರು ಸ್ವಾಗತಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸುಪ್ರೀಂಕೋರ್ಟ್ ಆದೇಶದಿಂದ ದೇಶದ ಸಂವಿಧಾನ, ಪ್ರಜಾಪ್ರಭುತ್ವ ಮತ್ತು ದುರ್ಬಲರ ಪರವಾದ ರಾಹುಲ್ ಗಾಂಧಿ ಅವರ ಹೋರಾಟಕ್ಕೆ ಮತ್ತಷ್ಟು ಬಲಬಂದಿದೆ. ಸತ್ಯ ಮೇವ ಜಯತೇ ಎಂದಿದ್ದಾರೆ.

ಇದನ್ನೂ ಓದಿ: ಜೈಲು ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆ: ಸತ್ಯಕ್ಕೆ ಇಂದಲ್ಲಾ ನಾಳೆ ಗೆಲುವು ಸಿಕ್ಕೇ ಸಿಗುತ್ತೆ- ರಾಹುಲ್ ಗಾಂಧಿ

ನಮ್ಮ ನಾಯಕರಾದ @RahulGandhi ಅವರಿಗೆ ಎರಡು ವರ್ಷಗಳ ಶಿಕ್ಷೆ ವಿಧಿಸಿ ಅಹ್ಮದಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿರುವುದನ್ನು ಸ್ವಾಗತಿಸುತ್ತೇನೆ.

ಈ ಆದೇಶದಿಂದ ದೇಶದ ಸಂವಿಧಾನ, ಪ್ರಜಾಪ್ರಭುತ್ವ ಮತ್ತು ದುರ್ಬಲರ ಪರವಾದ ರಾಹುಲ್ ಗಾಂಧಿ ಅವರ ಹೋರಾಟಕ್ಕೆ ಮತ್ತಷ್ಟು ಬಲ ಬಂದಿದೆ.

“ಸತ್ಯ ಮೇವ ಜಯತೇ”..…
— Siddaramaiah (@siddaramaiah) August 4, 2023

ಮತ್ತೊಂಡೆದೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್,  ರಾಹುಲ್ ಗಾಂಧಿ ಅವರ ಪ್ರಕರಣದಲ್ಲಿ ನ್ಯಾಯಕ್ಕೆ ಗೆಲುವು ಸಿಕ್ಕಿದೆ. ಪ್ರಜಾಪ್ರಭುತ್ವದಲ್ಲಿ ದ್ವೇಷದ ರಾಜಕಾರಣಕ್ಕೆ ಜಾಗವಿಲ್ಲ ಎಂಬುದನ್ನು ದೇಶಕ್ಕೆ ಅತ್ಯುನ್ನತ ನ್ಯಾಯಾಲಯ ಸಂದೇಶ ನೀಡಿದೆ. ಗುಜರಾತ್ ಕೋರ್ಟ್ ತೀರ್ಪಿನ 24 ಗಂಟೆಯೊಳಗೆ ಹೇಗೆ ಸಂಸತ್ ನಿಂದ ರಾಹುಲ್ ಗಾಂಧಿ ಅವರನ್ನು ಹೊರ ಹಾಕಲಾಯಿತೋ ಅದೇ ರೀತಿಯಲ್ಲಿ ಈಗ ಸುಪ್ರೀಂ ತೀರ್ಪಿನ ನಂತರ 24 ಗಂಟೆಯೊಳಗೆ ಮತ್ತೆ ಅವರು ಸಂಸದರಾಗಬೇಕು. ಇಲ್ಲದಿದ್ದರೆ ಸ್ಪೀಕರ್ ಗೆ ತೊಂದರೆಯಾಗಲಿದೆ ಎಂದರು.

#WATCH | On Supreme Court staying conviction of Rahul Gandhi in ‘Modi’ surname remark defamation case, Karnataka Deputy CM DK Shivakumar says, “…Justice has prevailed. The highest court of the country has given a message that small internal issues can’t be blown up and vendetta… pic.twitter.com/GoMixpg60j
— ANI (@ANI) August 4, 2023

 ಸುಪ್ರೀಂಕೋರ್ಟ್ ತೀರ್ಪು ಸತ್ಯ ಮತ್ತು ಸಂವಿಧಾನದ ಜಯ. ರಾಹುಲ್ ಗಾಂಧಿ ಅವರ ಪ್ರಾಮಾಣಿಕತೆ ಮತ್ತು ರಾಜಕೀಯತೆಯನ್ನು ಎತ್ತಿ ಹಿಡಿಯಲಾಗಿದೆ. ದ್ವೇಷದ ರಾಜಕಾರಣ ಮಾಡದಂತೆ ಬಿಜೆಪಿಗೆ ಇದು ಉತ್ತಮ ಪಾಠವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. 
 

#WATCH | “We welcome the SC’s verdict on Mr Gandhi and I think it’s the triumph of truth and constitution, his (Rahul Gandhi’s) honesty and politics have been upheld… It’s also a good lesson for the BJP not to follow the vindictive politics and it’s been ten years since they’ve… pic.twitter.com/OlrJfxKmVH
— ANI (@ANI) August 4, 2023

LEAVE A REPLY

Please enter your comment!
Please enter your name here