Home Uncategorized ಕರ್ನಾಟಕ ದೇವಸ್ಥಾನಗಳಲ್ಲಿ ಮೊಬೈಲ್​​ ಬ್ಯಾನ್​ಗೆ ಹೆಚ್ಚಿದ ಒತ್ತಡ: ಸಚಿವೆ ಶಶಿಕಲಾ ಜೊಲ್ಲೆ ಭೇಟಿಯಾದ ಅರ್ಚಕರ...

ಕರ್ನಾಟಕ ದೇವಸ್ಥಾನಗಳಲ್ಲಿ ಮೊಬೈಲ್​​ ಬ್ಯಾನ್​ಗೆ ಹೆಚ್ಚಿದ ಒತ್ತಡ: ಸಚಿವೆ ಶಶಿಕಲಾ ಜೊಲ್ಲೆ ಭೇಟಿಯಾದ ಅರ್ಚಕರ ಒಕ್ಕೂಟ

12
0
Advertisement
bengaluru

ಬೆಂಗಳೂರು: ದೇವಸ್ಥಾನಗಳ(Temples) ಪಾವಿತ್ರ್ಯವನ್ನು ಕಾಪಾಡಲು ತಮಿಳುನಾಡಿನಲ್ಲಿ ಮೊಬೈಲ್‌ ಫೋನ್‌ ಬ್ಯಾನ್‌ ಮಾಡಿದ ರೀತಿಯಲ್ಲಿ ಕರ್ನಾಟಕದಲ್ಲೂ (karnataka) ಸಹ ದೇಗುಲಗಳಲ್ಲಿ ಮೊಬೈಲ್‌ ಫೋನ್‌ ಬಳಕೆಯನ್ನು ನಿಷೇಧಿಸಬೇಕೆಂಬ ಕೂಗು ಜೋರಾಗಿದೆ. ಈ ಬಗ್ಗೆ ಇಂದು(ಡಿಸೆಂಬರ್ 17) ಅಖಿಲ ಕರ್ನಾಟಕ ಅರ್ಚಕರ(priest) ಒಕ್ಕೂಟ ಸಚಿವೆ ಶಶಿಕಲಾ ಜೊಲ್ಲೆ (Shashikala jolle) ಅವರನ್ನು ಭೇಟಿ ಮಾಡಿದ್ದು, ಮುಜರಾಯಿ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಮೊಬೈಲ್​​ ಬ್ಯಾನ್​ಗೆ ಮನವಿ ಮಾಡಿದೆ.

ಇದನ್ನೂ ಓದಿ: ಅರ್ಚಕರಿಂದ ಹೈಕೋರ್ಟ್ ಮೆಟ್ಟಿಲೇರುವ ಎಚ್ಚರಿಕೆ: ತಮಿಳುನಾಡಿನಂತೆ ಕರ್ನಾಟಕ ದೇವಾಲಯಗಳಲ್ಲೂ ಮೊಬೈಲ್​ ಬ್ಯಾನ್ ಆಗುತ್ತಾ?

ಬೆಂಗಳೂರಿನ ಮುಜರಾಯಿ ಇಲಾಖೆ ಕಚೇರಿಯಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಅವರನ್ನು ಭೇಟಿ ಮಾಡಿದ ಕರ್ನಾಟಕ ಅರ್ಚಕರ ಒಕ್ಕೂಟ, ದೇವರ ಆಭರಣ ಫೋಟೋ, ಹೆಣ್ಣು ಮಕ್ಕಳ ಫೋಟೋ ತೆಗೆಯೋದು ದೇವಾಲಯಗಳ ಆವರಣದಲ್ಲಿ ಸೆಲ್ಫಿ ತೆಗೆದುಕೊಳ್ಳುವವರ ಹಾವಳಿ ಇದೆ. ಭಕ್ತರ ಏಕಾಗ್ರತೆ ಧಕ್ಕೆಯಾಗುತ್ತಿರುವುದರಿಂದ ಮೊಬೈಲ್ ನಿಷೇಧಿಸಿದೆ ಎಂದು ಮನವಿ ಮಾಡಿದೆ. ಇದಕ್ಕೆ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುವುದು ಸಚಿವೆ ಜೊಲ್ಲೆ ಭರವಸೆ ನೀಡಿದ್ದಾರೆ.

ತಮಿಳುನಾಡಿನಲ್ಲಿ ದೇವಾಲಯಗಳ ಪಾವಿತ್ರ್ಯ ಮತ್ತು ಪರಿಶುದ್ಧತೆಯನ್ನು ಕಾಪಾಡುವುದಕ್ಕಾಗಿ ರಾಜ್ಯದ ಉದ್ದಗಲಕ್ಕೂ ದೇವಾಲಯಗಳಲ್ಲಿ ಮೊಬೈಲ್‌ ಫೋನ್‌ ಬಳಸದಂತೆ ನಿರ್ಬಂಧಿಸಲು ರಾಜ್ಯ ಸರ್ಕಾರಕ್ಕೆ ಮದ್ರಾಸ್‌ ಹೈಕೋರ್ಟ್‌ ಇತ್ತೀಚೆಗೆ ಸೂಚನೆ ನೀಡಿದೆ. ನ್ಯಾಯಮೂರ್ತಿಗಳಾದ ಆರ್.‌ ಮಹದೇವನ್‌, ಜೆ ಸತ್ಯನಾರಾಯಣ ಪ್ರಸಾದ ಅವರಿದ್ದ ನ್ಯಾಯಪೀಠ ಈ ನಿರ್ದೇಶನ ನೀಡಿತ್ತು. ಎಂ. ಸೀತಾರಾಮನ್‌ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಲೇವಾರಿ ಮಾಡುವ ಸಂದರ್ಭದಲ್ಲಿ ಈ ತೀರ್ಪು ನೀಡಿದೆ.

bengaluru bengaluru

ತಮಿಳುನಾಡಿನ ಆರು ಪ್ರಮುಖ ಮುರುಗಾ ದೇವಾಲಯಗಳ ಪೈಕಿ ತೂತುಕುಡಿಯ ತಿರುಚೆಂಡೂರಿನ ಅರುಲ್‌ಮಿಗು ಸುಬ್ರಮಣಿಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಆಂಡ್ರಾಯ್ಡ್‌ ಫೋನ್‌ ಕೊಂಡೊಯ್ಯುವುದು ಮತ್ತು ಬಳಸುವುದನ್ನು ನಿಷೇಧಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಎಂ.ಸೀತಾರಾಮನ್‌ ಆಗ್ರಹಿಸಿದ್ದರು. ಈ ವಿದ್ಯಮಾನದ ಬೆನ್ನಲ್ಲೇ ಕರ್ನಾಟಕದಲ್ಲೂ ಸಹ ಕೂಡ ಇದೇ ಬೇಡಿಕೆ ಹೆಚ್ಚಾಗಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ


bengaluru

LEAVE A REPLY

Please enter your comment!
Please enter your name here