Home Uncategorized ಕಲಬುರಗಿ: ಚಾಕುವಿನಿಂದ ಇರಿದು ಯುವಕನ ಹತ್ಯೆ

ಕಲಬುರಗಿ: ಚಾಕುವಿನಿಂದ ಇರಿದು ಯುವಕನ ಹತ್ಯೆ

35
0

ಕಲಬುರಗಿ: ವ್ಯಕ್ತಿಯೊಬ್ಬನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ಇಲ್ಲಿನ ಕಮಲಾಪುರ ತಾಲೂಕಿನ ರೈಲ್ವೆ ಸ್ಟೇಷನ್‌ ಬಳಿ ನಡೆದಿದೆ.

ಜೇವರ್ಗಿ ತಾಲೂಕಿನ ಕೂಡಿ ದರ್ಗಾ ಗ್ರಾಮದ ಅಂಬಾರಾಯ ಶಂಕರ ಪಟ್ಟೇದಾರ (28) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿಯ ಎದೆಯ ಭಾಗಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಡಿ. 29ರಂದು ಬೆಳಿಗ್ಗೆ ಕೆಲಸಕ್ಕೆಂದು ಕಲಬುರಗಿಗೆ ತೆರಳಿದ್ದಅಂಬಾರಾಯ, ರಾತ್ರಿ ಮನೆಯವರೊಂದಿಗೆ ಫೋನ್‌ ಕರೆ ಮಾಡಿ ಮಾತನಾಡಿದ್ದ. ಆದರೆ 3 ದಿನಗಳಿಂದ ಅವರು ಮನೆಗೆ ಬಾರದ್ದರಿಂದ ಸಂಬಂಧಿಕರು ಮಹಾಗಾಂವ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

 ನಿನ್ನೆ(ಡಿ.01) ರಾತ್ರಿ ಅಂಬರಾಯ ಕೊಲೆಯಾಗಿ ಪತ್ತೆಯಾಗಿದ್ದು, ಸ್ಥಳಕ್ಕೆ ಎಸ್‌ಪಿ ಅಟ್ಟೂರು ಶ್ರೀನಿವಾಸಲು, ಕಮಲಾಪುರ ಪೋಲಿಸ್‌ ಠಾಣೆ ಸಿಪಿಐ ಶಿವಶಂಕರ, ಪಿಎಸ್‌ಐ ಸಂಗೀತಾ ಶಿಂಧೆ, ಶಿವಶಂಕರ ಸುಬ್ಬೇದಾರ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here