Home ಅಪರಾಧ ಕುಡುಕನ ಹುಚ್ಚಾಟಕ್ಕೆ 6 ಮಂದಿ ಸಜೀವ ದಹನ

ಕುಡುಕನ ಹುಚ್ಚಾಟಕ್ಕೆ 6 ಮಂದಿ ಸಜೀವ ದಹನ

54
0
Advertisement
bengaluru

ಕೊಡಗು:

ಮದ್ಯದ ಅಮಲಿನಲ್ಲಿ ತನ್ನ ಮನೆಗೇ ತಾನೇ ಬೆಂಕಿಯಿಟ್ಟ ವ್ಯಕ್ತಿಯೋವ೯ನಿಂದಾಗಿ ಮನೆಯಲ್ಲಿ ಮಲಗಿದ್ದ 6 ಮಂದಿ ಸಜೀವ ದಹನಗೊಂಡ ದುಘ೯ಟನೆ ಕೊಡಗು ಜಿಲ್ಲೆಯಲ್ಲಿ ವರದಿಯಾಗಿದೆ.

ಪೊನ್ನಂಪೇಟೆ ತಾಲೂಕಿನ ಮುಗಟಕೇರಿ ಗ್ರಾಮದ ಕೂಲಿಕಾಮಿ೯ಕ ಬೋಜ ಎಂಬಾತ ತನ್ನ ಪತ್ನಿಯೊಂದಿಗೆ ಕ್ಷುಲ್ಲಕ ವಿಚಾರಕ್ಕೆ ಜಗಳವಾಡಿದ್ದ. ನಿನ್ನೆ ರಾತ್ರಿ ಈತನ ಮನೆಗೆ ಬಂಧುಗಳು ಕೂಡ ಮಕ್ಕಳೊಂದಿಗೆ ಬಂದಿದ್ದರು. ಇದು ಕೂಡ ಬೋಜನ ಆಕ್ರೋಶಕ್ಕೆ ಕಾರಣವಾಯಿತು.

ಬೆಳಗಿನ ಜಾವ 2 ಗಂಟೆ ಸುಮಾರಿಗೆ ಮನೆಯ ಬಾಗಿಲು ಕಿಟಕಿ ಮುಚ್ಚಿದ ಬೋಜ, ಮನೆ ಮೇಲೆ ಹತ್ತಿ, ಹಂಚು ತೆಗೆದು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ. ಇದರಿಂದಾಗಿ ಮನೆಯೊಳೆಗೆ ನಿದ್ದೆಯಲ್ಲಿದ್ದ 6 ಮಂದಿ ಸಾವನ್ನಪ್ಪಿದರು.

bengaluru bengaluru

ಆರೋಪಿ ಪರಾರಿಯಾಗಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನಿಗಾಗಿ ಶೋಧ ನಡೆಸಿದ್ದಾರೆ.


bengaluru

LEAVE A REPLY

Please enter your comment!
Please enter your name here