Home ಅಪರಾಧ ನಿವೃತ್ತ ಉಪ ತಹಶಿಲ್ದಾರ್​ ಕೊಲೆ‌ ಪ್ರಕರಣಕ್ಕೆ ಮತ್ತೋರ್ವ ಆರೋಪಿ ಬಂಧನ

ನಿವೃತ್ತ ಉಪ ತಹಶಿಲ್ದಾರ್​ ಕೊಲೆ‌ ಪ್ರಕರಣಕ್ಕೆ ಮತ್ತೋರ್ವ ಆರೋಪಿ ಬಂಧನ

32
0

ಬೆಂಗಳೂರು:

ವಿ.ವಿ ಪುರಂನ ಪಾರ್ವತಿಪುರದಲ್ಲಿ ನಡೆದಿದ್ದ ನಿವೃತ್ತ ಉಪ ತಹಶಿಲ್ದಾರ್​ ​ ಕೊಲೆ‌ ಪ್ರಕರಣಕ್ಕೆ ಸಂಬಂಧಿಸಿದಂತೆ ವಿ.ವಿ. ಪುರಂ ಪೊಲೀಸರು ಮತ್ತೊಬ್ಬ ಆರೋಪಿಯನ್ನ ಬಂಧಿಸಿದ್ದಾರೆ. ಬಂಧಿತ ಆರೋಪಿ ಉತ್ತರ ಪ್ರದೇಶದ ನಿವಾಸಿ ಇಬ್ರಾಹಿಂ ಖಾನ್​ (45).

ಈ ಸಂಬಂಧ ಈಗಾಗಲೇ ಆಲಿಂ ಪಾಶಾ, ಜೆರಾನ್​ ಪಾಶಾ ಹಾಗೂ ಅಶ್ರಫುನ್ನೀಸಾ ಎಂಬಾಕೆಯನ್ನ ಬಂಧಿಸಲಾಗಿತ್ತು. ಇದೀಗ ಅಲಿಂ ಪಾಶಾಗೆ ನೆರವು ನೀಡಿದ ಆರೋಪದ ಮೇಲೆ ಇಬ್ರಾಹಿಂ ಖಾನ್​​ನನ್ನು ಬಂಧಿಸಲಾಗಿದೆ.

ಬಾಡಿಗೆ ಕೊಡುವಂತೆ ಕೇಳಿದ್ದಕ್ಕೆ ನಿವೃತ್ತ ಉಪ ತಹಶಿಲ್ದಾರ್​​ ಕೆ.ರಾಜೇಶ್ವರಿ ಎಂಬುವವರನ್ನು ಜನವರಿ 3ರಂದು ಹತ್ಯೆ ಮಾಡಲಾಗಿತ್ತು. ಬಳಿಕ ಆರೋಪಿಗಳು ಶವವನ್ನು ಅಂಚೆಪಾಳ್ಯದ ಬಳಿ ಕೊಂಡೊಯ್ದು ಸುಟ್ಟು ಹಾಕಿದ್ದರು.

ಇದನ್ನು ಓದು: ಬಾಡಿಗೆ ಕೇಳಿದ ಮನೆಯೊಡತಿಯ ಕತ್ತುಕೊಯ್ದು ಸುಟ್ಟು ಹಾಕಿದ ಬಾಡಿಗೆದಾರರು https://kannada.thebengalurulive.com/house-owner-murdered-and-burned-for-asking-rent/

LEAVE A REPLY

Please enter your comment!
Please enter your name here