ಬೆಂಗಳೂರಿನ ಜಯನಗರದಲ್ಲಿ ವಿಷ್ಣುವರ್ಧನ್ (Dr Vishnuvardhan) ಅವರ ಹೊಸ ಮನೆ ನಿರ್ಮಾಣ ಮಾಡಲಾಗಿದೆ. ಇಂದು (ನ.27) ಗೃಹಪ್ರವೇಶ ಸಮಾರಂಭ ನೆರವೇರಿಸಲಾಗಿದೆ. ಈ ಶುಭ ಗಳಿಗೆಗೆ ಅನೇಕ ಗಣ್ಯರು ಸಾಕ್ಷಿ ಆಗಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ (CM Basavaraj Bommai) ಕೂಡ ಆಗಮಿಸಿ ಗೃಹಪ್ರವೇಶದಲ್ಲಿ ಪಾಲ್ಗೊಂಡರು. ರಾಜಕೀಯದ ಕಾರ್ಯಗಳ ನಡುವೆಯೂ ಬಿಡುವು ಮಾಡಿಕೊಂಡು ಬಂದ ಅವರನ್ನು ನಟ ಅನಿರುದ್ಧ್ (Aniruddha Jatkar) ಆತ್ಮೀಯವಾಗಿ ಬರಮಾಡಿಕೊಂಡರು. ಈ ಹೊಸ ಮನೆಗೆ ‘ವಲ್ಮೀಕ’ ಎಂದು ಹೆಸರು ಇಡಲಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.