Home ಕರ್ನಾಟಕ ಜ.11 ರಂದು ಪ್ರಾದೇಶಿಕ ಆಯುಕ್ತರು,ಜಿಲ್ಲಾದಿಕಾರಿ,ಸಿಇಓಗಳ ಸಭೆ ಕರೆದ ಮುಖ್ಯಮಂತ್ರಿ

ಜ.11 ರಂದು ಪ್ರಾದೇಶಿಕ ಆಯುಕ್ತರು,ಜಿಲ್ಲಾದಿಕಾರಿ,ಸಿಇಓಗಳ ಸಭೆ ಕರೆದ ಮುಖ್ಯಮಂತ್ರಿ

116
0

ಬೆಂಗಳೂರು:

ಆಡಳಿತ ಪಕ್ಷದ ಶಾಸಕರ ಸಭೆ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಪ್ರಾದೇ ಶಿಕ ಆಯುಕ್ತರು, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸಭೆಯನ್ನು ಜ. 11ರಂದು ಕರೆದಿದ್ದಾರೆ.

IMG 20210106 003818

ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯಲಿರುವ ಸಭೆಯಲ್ಲಿ ತ್ರೈಮಾಸಿಕ ಅಭಿವೃದ್ದಿ,ಯೋಜನೆ ಗಳ ಅನುಷ್ಠಾನ,ಅನುದಾನ ವೆಚ್ಚ,ಅನುದಾನ ಹಂಚಿಕೆ,ಕೊರೋನಾ ನಿಯಂತ್ರಣ,ಬ್ರಿಟಕ್ ಕೊರೋನಾ ಪಸರಿ ಸುವುದನ್ನು ತಡೆಯುವುದು,ಶಾಲಾ ಕಾಲೇಜು ಮರು ಆರಂಭ,ಗ್ರಾಮ ಪಂಚಾಯತ್ ಚುನಾವಣೆ,ಮುಂದಿನ ಬಜೆ ಟ್ ಗೆ ಜಿಲ್ಲೆಗಳಿಂದ ಸಲ್ಲಿಸಬೇಕಾದ ಪ್ರಸ್ತಾವನೆಗಳು ಸೇರಿದಂತೆ ಸಾಕಷ್ಟುಯ ವಿಚಾರಗಳ ಬಗ್ಗೆ ಚೆರ್ಚೆ ನಡೆಯಲಿದೆ.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಏರಿದ ಆರಂಭದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಓ ಸಭೆ ಕರೆದಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಒಂದೂವರೆ ವರ್ಷದ ಬಳಿಕ ಸಭೆ ಕರೆದಿರುವುದು ಮಹತ್ವದ್ದಾಗಿದೆ. UNI

LEAVE A REPLY

Please enter your comment!
Please enter your name here