ಬೆಂಗಳೂರು:
ಎಂಟು ಬಾರಿ ಶಾಸಕರಾದ ಹಿರಿಯ ನಾಯಕ ಎನ್ನುವ ಕಾರಣಕ್ಕೆ ಉಮೇಶ್ ಕ ತ್ತಿ ಅವರಿಗೆ ಆಹಾರ ಖಾತೆ ಕೊಡಬೇಕಾಯಿತು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಸ್ಪಷ್ಟೀಕರಣ ನೀಡಿ ಭವಿಷ್ಯದಲ್ಲಿ ಉತ್ತಮ ಖಾತೆ ಕೊಡುವ ಭರವಸೆ ನೀಡಿದ್ದಾರೆ ನನಗೆ ಯಾವುದೇ ಅಸಮಧಾನ ಇಲ್ಲ.ಸಿಎಂ ಪಕ್ಷ ಪಕ್ಷಕ್ಕೆ ಹೆಸರು ತರುವ ರೀತಿ ಅಬಕಾರಿ ಖಾತೆಯನ್ನು ನಿರ್ವಹಿ ಸಿಕೊಂಡು ಹೋಗುತ್ತೇನೆ ಎಂದು ಸಚಿವ ಗೋಪಾಲಯ್ಯ ಹೇಳಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಗಳ ಜೊತೆ ಮಾತುಕತೆ ಬಳಿಕ ಸುದ್ದಿಗಾರರೊಂದಿಗೆ ಮಾತನಾ ಡಿದ ಅವರು,ಖಾತೆ ಬದಲಾವಣೆ ಕುರಿತು ನಿನ್ನೆ ಮಧ್ಯಾಹ್ನ ಮತ್ತು ರಾತ್ರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂ ರಪ್ಪ ಜೊತೆ ಮಾತನಾಡಿದ್ದೇನೆ. ಈಗ ಆಹಾರ ಖಾತೆ ಬದಲು ಇನ್ನೂ ಹೆಚ್ಚಿನ ಜವಾಬ್ದಾರಿ ಮತ್ತು ಹೆಚ್ಚು ಆದಾ ಯ ತರುವ ಖಾತೆಯನ್ನು ಕೊಟ್ಟಿದ್ದಾರೆ ಜವಾಬ್ದಾರಿಯುತವಾಗಿ ಕೆಲಸ ಮಾಡಿ ದೊಡ್ಡ ಖಾತೆ ಇದೆ ಎಂದಿದ್ದಾರೆ.
ಇದಕ್ಕೆ ನಾನು ಒಪ್ಪಿಕೊಂಡು ಸಂತೋಷದಿಂದ ಆಹಾರ ಖಾತೆಯನ್ನು ಸ್ವೀಕರಿಸಿದ್ದೇನೆ. ಆಹಾರ ಇಲಾಖೆಗೆ ಯಾ ವ ರೀತಿಯ ಒತ್ತು ಕೊಟ್ಟಿದ್ದೇನೋ ಅದಕ್ಕಿಂತ ಹೆಚ್ಚಿನ ಒತ್ತು ಕೊಟ್ಟು ಸರ್ಕಾರ ಮತ್ತು ಮುಖ್ಯಮಂತ್ರಿಗಳಿಗೆ ಒ ಳ್ಳೆಯ ಹೆಸರು ರೀತಿಯಲ್ಲಿ ಕೆಲಸ ಮಾಡಿಕೊಂಡು ಹೋಗುತ್ತೇನೆ ಎಂದರು.
ಹಣ ಇದ್ದರೆ ಮಾತ್ರ ಎಲ್ಲ ಇಲಾಖೆಗಳನ್ನು ನಡೆಸಲು ಸಾಧ್ಯ ಈಗ ನನಗೆ ಸಿಕ್ಕಿರುವ ಅಬಕಾರಿ ಖಾತೆ ಸರ್ಕಾರಕ್ಕೆ ಹೆಚ್ಚಿನ ಆದಾಯ ತರುವ ಖಾತೆಯಾಗಿದೆ.ಎಲ್ಲಿ ಸೋರಿಕೆ ಆಗುತ್ತಿದೆಯೋ ಅಲ್ಲಿ ಕಡಿವಾಣ ಹಾಕುವ ಪ್ರಯತ್ನ ಮಾಡುತ್ತೇನೆ ಇಂದು ಮಧ್ಯಾಹ್ನದಿಂದಲೇ ಇಲಾಖೆಯ ಅಧಿಕಾರಿಗಳ ಸಭೆ ನಡೆಸುವ ಕೆಲಸ ಮಾಡುತ್ತಿದ್ದೇನೆ ಇನ್ನಷ್ಟು ಹೆಚ್ಚಿನ ಕೆಲಸ ಮಾಡುತ್ತೇನೆ ಎಂದರು.