Home ರಾಜಕೀಯ ಮಾಜಿ ಸಿಎಂ ಎಚ್‌ಡಿಕೆ ಮಾಧ್ಯಮ ಸಲಹೆಗಾರ ಸದಾನಂದ ಹೃದಯಾಘಾತದಿಂದ ನಿಧನ

ಮಾಜಿ ಸಿಎಂ ಎಚ್‌ಡಿಕೆ ಮಾಧ್ಯಮ ಸಲಹೆಗಾರ ಸದಾನಂದ ಹೃದಯಾಘಾತದಿಂದ ನಿಧನ

124
0
Former CM HDK's media consultant Sadananda dies of heart attack

ಬೆಂಗಳೂರು:

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮಾಧ್ಯಮ ಸಲಹೆಗಾರ ಕೆ.ಸಿ. ಸದಾನಂದ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ .

ಸೋಮವಾರ ರಾತ್ರಿ ಹೃದಯಾಘಾತವಾದ ತಕ್ಷಣ ಬೆಂಗಳೂರು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು . ಆದರೆ , ಚಿಕಿತ್ಸೆ ಫಲಿಸದೇ ರಾತ್ರಿ ಹನ್ನೆರಡು ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.

ಕರ್ನಾಟಕ ಮಲ್ಲ, ಪತ್ರಿಕೆ ಮೂಲಕ ಮುಂಬೈನಲ್ಲಿ ವೃತ್ತಿ ಜೀವನ ಆರಂಭಿಸಿ ನಂತರ ಸಂಜೆವಾಣಿ, ಪತ್ರಿಕೆಯಲ್ಲಿ ವರದಿಗಾರರಾಗಿದ್ದರು. ನಂತರ ಎಚ್.ಡಿ.ಕೆ ಜತೆಗೂಡಿ, ಮುಖ್ಯಮಂತ್ರಿಯಾದಾಗ ಅವರ ಮಾಧ್ಯಮ ಸಲಹೆಗಾರರಾಗಿ ಜವಾಬ್ದಾರಿ ನಿರ್ವಹಿಸಿದ್ದರು.

ಮೂಲತಃ ಚನ್ನಪಟ್ಟಣದ ಸದಾನಂದ ಅವರಿಗೆ ಪತ್ನಿ ಹಾಗೂ ಒರ್ವ ಪುತ್ರ ಇದ್ದಾರೆ.

LEAVE A REPLY

Please enter your comment!
Please enter your name here