Home ರಾಜಕೀಯ ಹೆಚ್.ಡಿ.ರೇವಣ್ಣ‌ ಜಾಮೀನು ರದ್ದತಿಗೆ ಹೈಕೋರ್ಟ್ ನಕಾರ

ಹೆಚ್.ಡಿ.ರೇವಣ್ಣ‌ ಜಾಮೀನು ರದ್ದತಿಗೆ ಹೈಕೋರ್ಟ್ ನಕಾರ

17
0

ಬೆಂಗಳೂರು : ಮೈಸೂರಿನ ಕೆ‌.ಆರ್.ಪೇಟೆಯ ಸಂತ್ರಸ್ತೆ ಮಹಿಳೆಯ ಅಪಹರಣ ಪ್ರಕರಣದ ಆರೋಪಿ, ಶಾಸಕ ಎಚ್.ಡಿ.ರೇವಣ್ಣ‌ ಅವರ ‌ಜಾಮೀನು ರದ್ದು ಮಾಡಲು ಹೈಕೋರ್ಟ್ ನಿರಾಕರಿಸಿದೆ.

ಜಾಮೀನು ರದ್ದು ಕೋರಿ ಎಸ್ಐಟಿ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ಜಾಮೀನು ರದ್ದು ಕೋರಿದ್ದ ಎಸ್ಐಟಿ ಅರ್ಜಿ ವಜಾಗೊಳಿಸಿದೆ. ಆ ಮೂಲಕ ಜೆಡಿಎಸ್ ನಾಯಕ ರೇವಣ್ಣ‌ಗೆ ಬಿಗ್ ರಿಲೀಫ್ ಸಿಕ್ಕಿದೆ.

ಅಲ್ಲದೆ, ಕೆ.ಆರ್.‌ನಗರ ಮಹಿಳೆಯ ಅಪಹರಣ ಪ್ರಕರಣದ ಎಲ್ಲಾ ಆರೋಪಿಗಳಿಗೂ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಆರೋಪಿಗಳಾದ ಸತೀಶ್ ಬಾಬು, ಮಧುಗೌಡ, ಕೆ.ಎ.ರಾಜಗೋಪಾಲ್ , ಎಚ್.ಕೆ.ಸುಜಯ್, ಎಚ್.ಎನ್.ಮಧು, ಎಸ್.ಟಿ.ಕೀರ್ತಿ ಗೆ ಜಾಮೀನು ಮಂಜೂರು ಮಾಡಿ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಪೀಠ ಆದೇಶಿಸಿದೆ.

LEAVE A REPLY

Please enter your comment!
Please enter your name here