ಬೆಂಗಳೂರು:
ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಬೆನ್ನಲ್ಲೇ, ತಮಗೆ ಅಧಿಕಾರ ದೊರೆಯಲು ಮುಖ್ಯ ಕಾರಣಕರ್ತರಾದ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ಸಂಪುಟ ದರ್ಜೆ ಸೌಲಭ್ಯ ದೊರಕಿಸಿ ಕೊಟ್ಟಿದ್ದಾರೆ.
ಈ ಸಂಬಂಧ ಆಡಳಿತ ಮತ್ತು ಸುಧಾರಣೆ ಇಲಾಖೆ ಇಂದು ಅಧಿಸೂಚನೆ ಹೊರಸಿದೆ. ಇದರ ಪ್ರಕಾರ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರದಲ್ಲಿ ಇರುವವರೆಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಂಪುಟ ದರ್ಜೆಯ ಸ್ಥಾನ ಅಬಾಧಿತವಾಗಿ ಮುಂದುವರಿಯಲಿದೆ.
![ಯಡಿಯೂರಪ್ಪಗೂ ಸಂಪುಟ ದರ್ಜೆಯ ಸೌಲಭ್ಯಕೊಟ್ಟ ಸಿಎಂ ಬೊಮ್ಮಾಯಿ 1 Karnataka govt gives cabinet rank facilities to Yediyurappa](https://kannada.thebengalurulive.com/wp-content/uploads/2021/08/Karnataka-govt-gives-cabinet-rank-facilities-to-Yediyurappa.jpg)
ಇದಲ್ಲದೆ ತಿಂಗಳಿಗೆ ಮೂರು ಲಕ್ಷ ರೂ ಭತ್ಯೆ, ಜೊತೆಗೆ ಒಂದು ಲಕ್ಷ ರೂಪಾಯಿ ಬಾಡಿಗೆ ಹಾಗೂ ಸಾರಿಗೆಭತ್ಯೆ ಪಡೆಯಲು ಯಡಿಯೂರಪ್ಪನವರು ಅರ್ಹರಾಗಿರುತ್ತಾರೆ.
ಹಿಂದಿನ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರದಲ್ಲಿ ಆಗಿನ ಮಂತ್ರಿಯಾಗಿದ್ದ ಎಚ್ . ಡಿ. ಕುಮಾರಸ್ವಾಮಿ ಅವರು ಸಮನ್ವಯ ಸಮಿತಿಯ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಅವರಿಗೆ ಈ ಸೌಲಭ್ಯ ಕಲ್ಪಿಸಿ ಕೊಟ್ಟಿರಲಿಲ್ಲ. ಲಾಭದಾಯಕ ಹುದ್ದೆ, ಕಾಯ್ದೆ ಅಡ್ಡಿ ಬರಬಹುದು ಎಂಬ ಕಾರಣಕ್ಕಾಗಿ ಆಗಿನ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಸಿದ್ದರಾಮಯ್ಯ ಅವರಿಗೆ ಇಂತಹ ಅವಕಾಶ ಮಾಡಿಕೊಟ್ಟಿರಲಿಲ್ಲ.