ಲೋಕಾಯುಕ್ತ ಪೊಲೀಸರ ಕಾರ್ಯಚರಣೆ : ರೂ 4 ಲಕ್ಷ ಲಂಚ ಸ್ವೀಕರಿಸುತ್ತಿದ್ದ ಬಿಬಿಎಂಪಿ ಜಂಟಿ ಆಯುಕ್ತ (ಪಶ್ಚಿಮ) ಶ್ರೀನಿವಾಸ್ ಮತ್ತು ಕೇಸ್ ವರ್ಕರ್ ಬಂದನ
ಕರ್ನಾಟಕ ಸರ್ಕಾರವು ಎಸಿಬಿಯನ್ನು ಮುಚ್ಚಿದ ನಂತರ ಮತ್ತು ಲೋಕಾಯುಕ್ತದ ಅಧಿಕಾರವನ್ನು ಮರುಸ್ಥಾಪಿಸಿದ ನಂತರ ಕರ್ನಾಟಕದ ಭ್ರಷ್ಟಾಚಾರ ವಿರೋಧಿ ವಾಚ್ಡಾಗ್ ‘ಖಾತೆ ತೆರೆದಿದೆ’
ಬೆಂಗಳೂರು:
ರಾಜ್ಯ ಸರ್ಕಾರವು ಭ್ರಷ್ಟಾಚಾರ ನಿಗ್ರಹ ದಳವನ್ನು ಸ್ಥಗಿತಗೊಳಿಸಿ ಕರ್ನಾಟಕ ಲೋಕಾಯುಕ್ತಕ್ಕೆ ಸಂಪೂರ್ಣ ಅಧಿಕಾರವನ್ನು ಮರುಸ್ಥಾಪಿಸಿದ ನಂತರ ತಮ್ಮ ಮೊದಲ ಪ್ರಮುಖ ಪ್ರಕರಣದಲ್ಲಿ 4 ಲಕ್ಷ ರೂಪಾಯಿ ಲಂಚ ಸ್ವೀಕರಿಸಿದ ಆರೋಪದ ಮೇಲೆ ಬಿಬಿಎಂಪಿಯ ಪಶ್ಚಿಮ ವಲಯದ ಜಂಟಿ ಆಯುಕ್ತ, ಕೆಎಎಸ್ ಅಧಿಕಾರಿ ಎಸ್.ಎಂ.ಶ್ರೀನಿವಾಸ್ ಮತ್ತು ಬಿಬಿಎಂಪಿ ಕೇಸ್ ವರ್ಕರ್ ಉಮೇಶ್ (ಪ್ರಥಮ ದರ್ಜೆ ಸಹಾಯಕ) ಅವರನ್ನು ಬಂಧಿಸಿದ್ದಾರೆ.
ಮಂಜುನಾಥ್ ಎಂಬುವವರ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ಬಲೆ ಬೀಸಿದ್ದಾರೆ. ದೂರುದಾರರಿಗೆ ಸಂಬಂಧಿಸಿದ ಖಾತಾವನ್ನು ಸಮ್ಮಿಲನಗೊಳಿಸಲು Rs 12 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಲೋಕಾಯುಕ್ತ ಕಚೇರಿ ಹೊರಡಿಸಿದ ಪತ್ರಿಕಾ ಟಿಪ್ಪಣಿ ಪ್ರಕಾರ, ಇಬ್ಬರೂ ದೂರುದಾರರಿಗೆ ಸಂಬಂಧಿಸಿದ ನಿವೇಶನಗಳ ಸಮ್ಮಿಲನ ಖಾತೆ (Amalgamation of Khatha) ಮಾಡಿಕೊಡಲು ರೂ . 12 ಲಕ್ಷ ಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟು , ಮಾತುಕತೆಯ ನಂತರ ರೂ . 4 ಲಕ್ಷ ಗಳ ಲಂಚವನ್ನು ಪಡೆಯಲು ಒಪ್ಪಿದ್ದು, ಈ ಹಣವನ್ನು 2 ನೇ ಆಪಾದಿತರು ತನ್ನ ಹಾಗೂ 1 ನೇ ಆಪಾದಿತರ ಪರವಾಗಿ ಸ್ವೀಕರಿಸುವ ಸಂದರ್ಭದಲ್ಲಿ ಅವರುಗಳನ್ನು ಟ್ರ್ಯಾಪ್ ಮಾಡಲಾಗಿರುತ್ತದೆ.

ಇಬ್ಬರು ಆಪಾದಿತರುಗಳನ್ನು ದಸ್ತಗಿರಿ ಮಾಡಿ ತನಿಖೆ ಮುಂದುವರೆಸಲಾಗಿದೆ. ಕರ್ನಾಟಕ ಲೋಕಾಯುಕ್ತರವರ ಸೂಚನೆಯ ಮೇರೆಗೆ ಐಪಿಎಸ್ ಅಶೋಕ್ ಕೆ.ಬಿ., ಡಿವೈಎಸ್ಪಿ ಅಂತೋನಿರಾಜ್ ರವರ ನೇತೃತ್ವದ ತಂಡ ಟ್ರ್ಯಾಪ್ ಪ್ರಕ್ರಿಯೆಯನ್ನು ಜರುಗಿಸಿರುತ್ತಾರೆ.
